2:19 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಶಿರನಾಳ: ಸೆ. 18ರಂದು ಶ್ರೀ ಕೋಂತಕುಮಾರ ವೀರ ಮಲಕಾರಸಿದ್ದ ಸಿದ್ದಾಂತ ನಾಟಕ 

17/09/2021, 09:15

ಭೀಮಣ್ಣ ಪೂಜಾರಿ ಶಿರನಾಳ ವಿಜಯಪುರ
info.reporterkarnataka@gmail.com

ವಿಜಯಪುರ ಶಿರನಾಳದ ಶ್ಯಾಮರಸಿದ್ದೇಶ್ವರ ಗಜಾನನ ತರುಣ ಸಂಘ ಆಶ್ರಯದಲ್ಲಿ ಶ್ರೀ ಕೋಂತ ಕುಮಾರ ವೀರ ಮಲಕಾರ ಸಿದ್ದ ಸಿದ್ದಾಂತ ನಾಟಕ ಶ್ಯಾಮರ ಸಿದ್ದೇಶ್ವರ ದೇವಸ್ಥಾನದ ಎದುರುಗಡೆ ಸೆ. 18ರಂದು ಸಂಜೆ 8 ಗಂಟೆಗೆ ವಿಶೇಷ ಪೂಜೆಯೊಂದಿಗೆ ಜರುಗಲಿದೆ.

ಮುಮ್ಮೇಟ್ಟಗುಡ್ಡ ಶ್ರೀ ಬನಸಿದ್ಧ ಮಹಾರಾಜ ಅವರ ಸಾನಿಧ್ಯದಲ್ಲಿ ನಾಗಠಾಣ ಮಾಜಿ ಶಾಸಕ ವಿಠ್ಠಲ ದೋ. ಕಟಕದೊಂಡ ಉದ್ಘಾಟಿಸುವರು. ಮಖಣಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಚವ್ಹಾಣ ಅಧ್ಯಕ್ಷತೆ ವಹಿಸುವರು. ವಿಜಯಪುರ ಜಿಪಂ ನಿಕಟಪೂರ್ವ ಅಧ್ಯಕ್ಷೆ ಸುಜಾತಾ ಸೋ. ಕಳ್ಳಿಮನಿ ಹಾಗೂ ಬಬಲೇಶ್ವರ ಪಿಎಸ್ ಐ ಸೋಮನ ಗೌಡ್ರು ಜ್ಯೋತಿ ಬೆಳಗಿಸುವರು. 

ವಿಜಯಪುರ ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನಪ್ಪ ಗೋ. ದಳವಾಯಿ ಹಾಗೂ ವಿಜಯಪುರ ತಾಪಂ ನಿಕಟಪೂರ್ವ ಅಧ್ಯಕ್ಷ ಕಾಳಪ್ಪ ಬಾ. ಬೆಳ್ಳುಂಡಗಿ ಗಜಾನನ ಫೋಟೋ ಪೂಜೆ ನೆರವೇರಿಸುವರು.

ವಿಜಯಪುರ ಎಪಿಎಂಸಿ ಮಾಜಿ ಸದಸ್ಯ ಸಿದ್ದಣ್ಣ ಸಕ್ರಿ, ಮಖಣಾಪುರ ಪಿಕೆಪಿಎಸ್ ಉಪಾಧ್ಯಕ್ಷ ಪೂಜಪ್ಪ ಮಾ. ಪೂಜಾರಿ ರಂಗಪೂಜೆ ನೆರವೇರಿಸುವರು. ವಿಜಯಪುರ ಬಂಜಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಎಲ್. ಚವ್ಹಾಣ, ವಿಜಯಪುರ ತಾಪಂ ನಿಕಟಪೂರ್ವ ಉಪಾಧ್ಯಕ್ಷ ಪಿಂಟು ಗೋ ರಾಠೋಡ ಮಿಂಚು ಹಾರಿಸುವರು. ಮಖಣಾಪುರ ಗ್ರಾಪಂ ಉಪಾಧ್ಯಕ್ಷ ಧನಸಿಂಗ್ ಚವ್ಹಾಣ ಬಲೂನು ಹಾರಿಸುವರು.

ಮುಖ್ಯ ಅತಿಥಿಗಳಾಗಿ ಖ್ಯಾತ ವಾಗ್ಮಿ ಮೋಹನ ಮೇಟಿ, ಪೊಲೀಸ್ ಇಲಾಖೆಯ ದುಂಡಪ್ಪ ಥಂಬದ, ಶಿರನಾಳ ಗ್ರಾಪಂ ಸದಸ್ಯ ಬೆಳ್ಳೋಗಸಿದ್ಧ ಶಿ. ಪೂಜಾರಿ, ಮಖಣಾಪುರ ಎಲ್ ಟಿ2 ಸದಸ್ಯ ಪ್ರಕಾಶ ಮೋ. ಚವ್ಹಾಣ, ಶಿರನಾಳ ಗ್ರಾಪಂ ಸದಸ್ಯ ಡಾ. ವಿಜಯ ಕುಮಾರ್ ಸೋ. ಬಗಲಿ, ಶಿರನಾಳ ಗ್ರಾಪಂ ಸದಸ್ಯ ಕಲ್ಲಪ್ಪ ಸಿ. ತಿಕೋಟಿ, ಶಿರನಾಳ ಗ್ರಾಪಂ ಸದಸ್ಯರಾದ ಗಂಗಾಬಾಯಿ ಪಾ. ಲೋಖಂಡೆ, ಮಹಾದೇವಿ ಸು. ಹಳ್ಳಿ ಹಾಗೂ ಕೊಂದನ ಸಿ. ಸಯದ ಭಾಗವಹಿಸುವರು.

ಇತ್ತೀಚಿನ ಸುದ್ದಿ

ಜಾಹೀರಾತು