8:59 PM Wednesday5 - November 2025
ಬ್ರೇಕಿಂಗ್ ನ್ಯೂಸ್
ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಶಿರನಾಳ: ಸೆ. 18ರಂದು ಶ್ರೀ ಕೋಂತಕುಮಾರ ವೀರ ಮಲಕಾರಸಿದ್ದ ಸಿದ್ದಾಂತ ನಾಟಕ 

17/09/2021, 09:15

ಭೀಮಣ್ಣ ಪೂಜಾರಿ ಶಿರನಾಳ ವಿಜಯಪುರ
info.reporterkarnataka@gmail.com

ವಿಜಯಪುರ ಶಿರನಾಳದ ಶ್ಯಾಮರಸಿದ್ದೇಶ್ವರ ಗಜಾನನ ತರುಣ ಸಂಘ ಆಶ್ರಯದಲ್ಲಿ ಶ್ರೀ ಕೋಂತ ಕುಮಾರ ವೀರ ಮಲಕಾರ ಸಿದ್ದ ಸಿದ್ದಾಂತ ನಾಟಕ ಶ್ಯಾಮರ ಸಿದ್ದೇಶ್ವರ ದೇವಸ್ಥಾನದ ಎದುರುಗಡೆ ಸೆ. 18ರಂದು ಸಂಜೆ 8 ಗಂಟೆಗೆ ವಿಶೇಷ ಪೂಜೆಯೊಂದಿಗೆ ಜರುಗಲಿದೆ.

ಮುಮ್ಮೇಟ್ಟಗುಡ್ಡ ಶ್ರೀ ಬನಸಿದ್ಧ ಮಹಾರಾಜ ಅವರ ಸಾನಿಧ್ಯದಲ್ಲಿ ನಾಗಠಾಣ ಮಾಜಿ ಶಾಸಕ ವಿಠ್ಠಲ ದೋ. ಕಟಕದೊಂಡ ಉದ್ಘಾಟಿಸುವರು. ಮಖಣಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಚವ್ಹಾಣ ಅಧ್ಯಕ್ಷತೆ ವಹಿಸುವರು. ವಿಜಯಪುರ ಜಿಪಂ ನಿಕಟಪೂರ್ವ ಅಧ್ಯಕ್ಷೆ ಸುಜಾತಾ ಸೋ. ಕಳ್ಳಿಮನಿ ಹಾಗೂ ಬಬಲೇಶ್ವರ ಪಿಎಸ್ ಐ ಸೋಮನ ಗೌಡ್ರು ಜ್ಯೋತಿ ಬೆಳಗಿಸುವರು. 

ವಿಜಯಪುರ ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನಪ್ಪ ಗೋ. ದಳವಾಯಿ ಹಾಗೂ ವಿಜಯಪುರ ತಾಪಂ ನಿಕಟಪೂರ್ವ ಅಧ್ಯಕ್ಷ ಕಾಳಪ್ಪ ಬಾ. ಬೆಳ್ಳುಂಡಗಿ ಗಜಾನನ ಫೋಟೋ ಪೂಜೆ ನೆರವೇರಿಸುವರು.

ವಿಜಯಪುರ ಎಪಿಎಂಸಿ ಮಾಜಿ ಸದಸ್ಯ ಸಿದ್ದಣ್ಣ ಸಕ್ರಿ, ಮಖಣಾಪುರ ಪಿಕೆಪಿಎಸ್ ಉಪಾಧ್ಯಕ್ಷ ಪೂಜಪ್ಪ ಮಾ. ಪೂಜಾರಿ ರಂಗಪೂಜೆ ನೆರವೇರಿಸುವರು. ವಿಜಯಪುರ ಬಂಜಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಎಲ್. ಚವ್ಹಾಣ, ವಿಜಯಪುರ ತಾಪಂ ನಿಕಟಪೂರ್ವ ಉಪಾಧ್ಯಕ್ಷ ಪಿಂಟು ಗೋ ರಾಠೋಡ ಮಿಂಚು ಹಾರಿಸುವರು. ಮಖಣಾಪುರ ಗ್ರಾಪಂ ಉಪಾಧ್ಯಕ್ಷ ಧನಸಿಂಗ್ ಚವ್ಹಾಣ ಬಲೂನು ಹಾರಿಸುವರು.

ಮುಖ್ಯ ಅತಿಥಿಗಳಾಗಿ ಖ್ಯಾತ ವಾಗ್ಮಿ ಮೋಹನ ಮೇಟಿ, ಪೊಲೀಸ್ ಇಲಾಖೆಯ ದುಂಡಪ್ಪ ಥಂಬದ, ಶಿರನಾಳ ಗ್ರಾಪಂ ಸದಸ್ಯ ಬೆಳ್ಳೋಗಸಿದ್ಧ ಶಿ. ಪೂಜಾರಿ, ಮಖಣಾಪುರ ಎಲ್ ಟಿ2 ಸದಸ್ಯ ಪ್ರಕಾಶ ಮೋ. ಚವ್ಹಾಣ, ಶಿರನಾಳ ಗ್ರಾಪಂ ಸದಸ್ಯ ಡಾ. ವಿಜಯ ಕುಮಾರ್ ಸೋ. ಬಗಲಿ, ಶಿರನಾಳ ಗ್ರಾಪಂ ಸದಸ್ಯ ಕಲ್ಲಪ್ಪ ಸಿ. ತಿಕೋಟಿ, ಶಿರನಾಳ ಗ್ರಾಪಂ ಸದಸ್ಯರಾದ ಗಂಗಾಬಾಯಿ ಪಾ. ಲೋಖಂಡೆ, ಮಹಾದೇವಿ ಸು. ಹಳ್ಳಿ ಹಾಗೂ ಕೊಂದನ ಸಿ. ಸಯದ ಭಾಗವಹಿಸುವರು.

ಇತ್ತೀಚಿನ ಸುದ್ದಿ

ಜಾಹೀರಾತು