2:21 PM Monday2 - March 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು ಪಾದಚಾರಿಗೆ ಸ್ಕೂಟಿ ಡಿಕ್ಕಿ: ಅದೇ ವ್ಯಕ್ತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು ಬ್ಯಾಚುಲರ್ ಲೈಫ್‌ಗೆ ಕೊಡಗಿನ ಬೆಡಗಿ ಗುಡ್‌ಬೈ: ರಶ್ಮಿಕಾ – ದೇವರಕೊಂಡ ದಂಪತಿಗೆ ಅಂಬಾನಿ,… ಮಸ್ಕಿ ಇರಕಲ್ ಶ್ರೀ ಮಠದ ಜಾತ್ರಾ ಮಹೋತ್ಸವ: ಹಸೆಮಣೆ ಏರಿದ 12 ಜೋಡಿಗಳು ಜವಾಹರಲಾಲ್ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂಭ್ರಮ; ವೈಜ್ಞಾನಿಕ ಮನೋಭಾವಕ್ಕೆ ಸಚಿವ…

ಇತ್ತೀಚಿನ ಸುದ್ದಿ

ಬೀದಿ ನಾಯಿಗಳಿಗೆ ಶೆಲ್ಟರ್: ದ.ಕ. ಜಿಲ್ಲಾ ಪ್ರಾಣಿ ದಯಾ ಸಂಘದಿಂದ ಜ.4ರಂದು ಪ್ರತಿಭಟನೆ

31/12/2025, 17:58

ಮಂಗಳೂರು(reporterkarnataka.com): ಬೀದಿ ನಾಯಿಗಳನ್ನು ಶೆಲ್ಟರ್ ಮಾಡುವಂತೆ ಆದೇಶ ಹೊರಡಿಸಿರುವ ಬೆನ್ನಲ್ಲಿಯೇ ಪ್ರಾಣಿ ಪ್ರೇಮಿಗಳು ರಾಜ್ಯಾಧ್ಯಂತ ಜ.4ರಂದು ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಮುಷ್ಕರ ನಡೆಸಲಿದ್ದು, ದ.ಕ. ಜಿಲ್ಲಾ ಪ್ರಾಣಿ ದಯಾ ಸಂಘದ ವತಿಯಿಂದ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎನಿಮಲ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಹಾಗೂ ನ್ಯಾಯವಾದಿ ಸುಮಾ ನಾಯಕ್ ಹೇಳಿದರು.


ಅವರು ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ಕಳೆದ 20 ವರ್ಷಗಳಿಂದ ಸರಿಯಾದ ಎಬಿಸಿ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, 2006 ರಿಂದ ಬೀದಿ ನಾಯಿಗಳಿಗೆ ಪರಿಣಾಮಕಾರಿಯಾಗಿ ಸಂತಾನಹರಣ ಚಿಕಿತ್ಸೆ ನೀಡುತ್ತಿದೆ. ಮಾತ್ರವಲ್ಲ 500 ಜನರು ಪ್ರತಿನಿತ್ಯ ಬೀದಿ ನಾಯಿಗಳಿಗೆ ಆಹಾರವನ್ನು ನೀಡುತ್ತಿದ್ದಾರೆ. ಕಳೆದ 20 ವರ್ಷದಿಂದ ಸರ್ಕಾರಕ್ಕೆ ಎಬಿಸಿಯನ್ನು ಸ್ಥಾಪಿಸಲು ಹೇಳಿದಾಗ ಹಣ ಇಲ್ಲದಿರುವುದು ನಾಯಿಗಳನ್ನು ಶೆಲ್ಟರ್ ಮಾಡಲು ಮಾತ್ರ ಹಣವಿದಿಯೇ ಎಂದು ಪ್ರಶ್ನಿಸಿದರು.
ಸುಪ್ರಿಂಕೋರ್ಟ್ ಏಕಾಏಕಿ ಆದೇಶವನ್ನು ಹೊರಡಿಸಿದ್ದು, ಎಡಬ್ಲೂಬಿಐನ ಎಸ್‌ಒಪಿಯಲ್ಲಿರುವ ಅನೇಕ ಅಂಶಗಳು ಇರುವುದಿಲ್ಲ. ಎಸ್‌ಒಪಿಯಲ್ಲಿ ಹೆದ್ದಾರಿಯಲ್ಲಿ ಇರುವ ಜಾನುವಾರುಗಳನ್ನೂ ಒಂದು ಗೂಡಿನಲ್ಲಿ ಇರಿಸಬೇಕು ಎಂದು ಇದೆ. ಆದರೆ ಸುಪ್ರಿಂ ಕೋರ್ಟ್ ಇದನ್ನು ಬಿಟ್ಟು ಕೇವಲ ನಾಯಿಗಳನ್ನು ಮಾತ್ರ ಗೂಡಿನಲ್ಲಿ ಗೂರಿಸಲು ಹೊರಟಿದ್ದಾರೆ. ನಾಯಿಗಳು ಭಾವನಾತ್ಮಕವಾಗಿ ಮನುಷ್ಯರೊಂದಿಗೆ ಬೆರೆಯುತ್ತವೆ. ಅವುಗಳನ್ನು ದಿನವಿಡಿ ಗೂಡಿನಲ್ಲಿ ಕೂರಿಸಿದರೆ ಮಾನಸಿಕ ಖಿನ್ನತೆಗೆ ಒಳಗಾಗುತ್ತವೆ ಎಂದರು.
ಸುಪ್ರಿಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಕೇಸನ್ನು ತೆಗೆದುಕೊಂಡು ನ.7ರಂದು ಆದೇಶ ಹೊರಡಿಸಿದ್ದು, ನಾವು ನಮ್ಮ ವಾದವನ್ನು ಆಲಿಸುವಂತೆ ಕೋರ್ಟ್‌ಗೆ 2 ಲಕ್ಷ ಹಣವನ್ನು ಕಟ್ಟಿ ಅವಕಾಶ ಮಾಡಿಕೊಡಲು ಕೇಳಿದಾಗ ಕೋರ್ಟ್ ರಜೆಯ ಕೊನೆಯ ದಿನ ಡಿ.31ಕ್ಕೆ ನಿಗದಿಯಾಗಿದ್ದು, ಅದನ್ನು ಏಕಾಏಕಿ ಜ. 7ಕ್ಕೆ ಮುಂದೂಡಲಾಗಿದ್ದು, ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಆದುದರಿಂದ ನಾವು ಈ ಪ್ರತಿಭಟನೆಯ ಮೂಲಕ ಸುಪ್ರಿಂಕೋರ್ಟ್‌ಗೆ ನಮ್ಮ ವಾದ ಕೇಳಲಿ ಎಂದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ನಾವು ಈಗಗಲೇ ಸ್ಥಳೀಯ ಆಡಳಿತ ಜತೆ ಮಾತನಾಡಿದ್ದು, ಮಂಗಳೂರಿನ ಮನಪಾದ ಪ್ರತೀ ವಾರ್ಡ್‌ಗಳಲ್ಲಿ ಪ್ರತ್ಯೇಕವಾಗಿ ಆಹಾರ ನೀಡಲು ತಾಣಗಳನ್ನು ಗುರುತಿಸುವಂತೆ ಮನವಿ ಮಾಡಿದ್ದು, ಅದಕ್ಕೆ ಪೂರಕವಾಗಿ ಸ್ಪಂದನೆ ಸಿಕ್ಕಿದೆ ಎಂದ ಅವರು, ನ್ಯಾಯಾಲಯ ಆದೇಶ ಮಾಡಿದರೆ ಸಾಕಾಗುವುದಿಲ್ಲ. ಸರ್ಕಾರವೂ ಸಂತಾನಹರಣಕ್ಕೆ ಕ್ರಮ ಹಾಗೂ ರೇಬೀಸ್ ಲಸಿಕೆಯನ್ನು ಸರಿಯಾದ ರೀತಿಯಲ್ಲಿ ನೀಡುವಂತೆ ಮಾಡಬೇಕು ಎಂದರು.
ಬೀದಿ ನಾಯಿಗಳಿಗೆ ಆಹಾರ ಹಾಕುವುದರಿಂದ ಅವುಗಳು ಸ್ನೇಹವನ್ನು ಹೊಂದುತ್ತವೆ. ಇದರಿಂದಾಗಿ ನಾಯಿಗಳ ಸಂತಾನಹರಣ ಹಾಗೂ ಲಸಿಕೆ ನೀಡಲು ಸುಲಭವಾಗುತ್ತದೆ. ಸರ್ಕಾರ ಬೀದಿ ನಾಯಿಗಳಿಂದ ರೇಬೀಸ್ ಬರುತ್ತಿದೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಬೀದಿ ನಾಯಿಗಳಿಂದ ಯಾವುದೇ ರೇಬೀಸ್ ಬರುತ್ತಿಲ್ಲ. ಬದಲಾಗಿ ಮನೆಯಲ್ಲಿ ಸಾಕಿದ ನಾಯಿಯಿಂದ ಬರುತ್ತಿದೆ. ಮಾತ್ರವಲ್ಲ. ಬೆಕ್ಕು, ಇಲಿ ಕಚ್ಚಿದರೂ ರೇಬೀಸ್ ಕಾಯಿಲೆ ಬರುತ್ತಿದೆ. ಆದರೆ ಎಲ್ಲವನ್ನೂ ನಾಯಿ ಕಡಿತದಿಂದ ಬರುತ್ತಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದಿನೇಶ್ ಪೈ, ಹರೀಶ್ ರಾಜಕುಮಾರ, ಡಾ.ಯಶಸ್ವೀ ನಾರಾವಿ, ರಜನಿ ಶೆಟ್ಟಿ, ಡಾ. ಶೃತಿ, ಚಾಲ್ಸ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು