5:37 PM Tuesday13 - May 2025
ಬ್ರೇಕಿಂಗ್ ನ್ಯೂಸ್
ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು…

ಇತ್ತೀಚಿನ ಸುದ್ದಿ

ಶಶಿರಾಜ್ ರಾವ್ ಕಾವೂರು ಅವರ “ಪುದ್ದು ಕೊಡ್ತರ್” ತುಳು ಕಾದಂಬರಿ ಲೋಕಾರ್ಪಣೆ

25/05/2022, 21:55

ಮಂಗಳೂರು(reporterkarnataka.com) :  ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ
ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ ಹಾಗೂ ಮಂಗಳೂರಿನ ಆಕೃತಿ ಹಾಗೂ ಆಶಯ ಪಬ್ಲಿಕೇಷನ್ಸ್ ಸಹಕಾರದೊಂದಿಗೆ ಶಶಿರಾಜ್ ರಾವ್ ಕಾವೂರು ಅವರ “ಪುದ್ದು ಕೊಡ್ತರ್” ತುಳು ಕಾದಂಬರಿ ನಗರದ ಸಂತ ಅಲೋಶಿಯಸ್ ಕಾಲೇಜಿನ ಎಲ್. ಎಫ್. ರಸ್ಕಿನ ಸಭಾಂಗಣದಲ್ಲಿ ಬುಧವಾರ ಲೋಕಾರ್ಪಣೆಗೊಂಡಿತು.

ಶಶಿರಾಜ್ ರಾವ್ ಕಾವೂರು ಅವರು ವೃತ್ತಿಯಲ್ಲಿ ನ್ಯಾಯವಾದಿಯಾಗಿ ಆಸಕ್ತಿಯಲ್ಲಿ ನಾಟಕಕಾರರಾಗಿ, ಪುಸ್ತಕ ಬರಹಗಾರರಾಗಿ ಪರಿಚಿತರು. ನಾಟಕಕಾರರಾಗಿ, ನಾಟಕ ಬರಹಗಾರರಾಗಿ, ನಿರ್ದೇಶಕರಾಗಿ ಅಲ್ಲೂ ಸೈ ಎನಿಸಿಕೊಂಡವರು. ಹಲವು ನಾಟಕಗಳಿಗೆ ಗೀತ ರಚನೆಕಾರರಾಗಿ ದುಡಿದ ಅನುಭವ ಶಶಿರಾಜ್ ಕಾವೂರು ಅವರಿಗಿದೆ.

ಕೃತಿ ಲೋಕಾರ್ಪಣೆ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಕಾಲೇಜಿನ ಕುಲಸಚಿವ ಡಾ. ಆಲ್ವಿನ್ ಡೇಸಾ ವಹಿಸಿದ್ದರು. ತುಳು -ಕನ್ನಡ ವಿದ್ವಾಂಸ ಡಾ. ಬಿ. ಎ. ವಿವೇಕ ರೈ 
ಅವರು “ಪುದ್ದು ಕೊಡ್ತರ್ “ಕೃತಿ ಲೋಕಾರ್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾ. ದಾಮೋದರ ಶೆಟ್ಟಿ, ಉದ್ಯಮಿಗಳು ಹಾಗೂ ಚಲನಚಿತ್ರ ನಿರ್ಮಾಪಕ ದೇವದಾಸ್ ಪಾಂಡೇಶ್ವರ್, ಕರ್ನಾಟಕ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್,  ಕೊರಗ ಅಭಿವೃದ್ಧಿ ಸಂಘ ಮಾಜಿ ಜಿಲ್ಲಾಧ್ಯಕ್ಷ ರಮೇಶ್ ಮಂಚಕಲ್ ಆಗಮಿಸಿದ್ದರು. 


ಕಾರ್ಯಕ್ರಮವನ್ನು ಡಾ. ಮಹಾಲಿಂಗ ಭಟ್ (ಮುಖ್ಯಸ್ಥರು ಕನ್ನಡ ವಿಭಾಗ, ಸಂತ ಅಲೋಶಿಯಸ್ ಕಾಲೇಜು) ಪ್ರೊ. ಕೃಷ್ಣಮೂರ್ತಿ. (ಅಧ್ಯಕ್ಷರು ವಿಕಾಸ, ಸಂತ ಅಲೋಶಿಯಸ್ ಕಾಲೇಜು ಮಂಗಳೂರು), ಗೋಪಾಲಕೃಷ್ಣ ಶೆಟ್ಟಿ (ಅಧ್ಯಕ್ಷರು ರಂಗ ಸಂಗಾತಿ ಮಂಗಳೂರು) ಅವರು ನಡೆಸಿಕೊಟ್ಟರು.  ಕಾರ್ಯಕ್ರಮದಲ್ಲಿ ಕೊರಲ್ ಕಲಾ ತಂಡದಿಂದ ಡೋಲು ಪ್ರಾಕ್ಷಿಕತೆ ವಿಶೇಷವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು