8:22 AM Friday14 - November 2025
ಬ್ರೇಕಿಂಗ್ ನ್ಯೂಸ್
ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ…

ಇತ್ತೀಚಿನ ಸುದ್ದಿ

ಶಾಸಕ ವೇದವ್ಯಾಸ ಕಾಮತರ ಭಗೀರಥ ಪ್ರಯತ್ನ:  ಪಾಲಿಕೆ ನೀರಿನ ದರ ಕೊನೆಗೂ ಇಳಿಕೆ!

19/07/2022, 14:53

ಮಂಗಳೂರು(reporterkarnataka.com): ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಸತತ ಪ್ರಯತ್ನದ ಫಲವಾಗಿ ರಾಜ್ಯ ಸರಕಾರ ನೀರಿನ ದರ ಏರಿಕೆಗೆ ಕಡಿವಾಣ ಹಾಕಿದೆ. ಆ ಮೂಲಕ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.

ಮಂಗಳೂರು ಮಹಾನಗರಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ನೀರಿನ ದರ ಏರಿಕೆ ಕುರಿತು ಬಹಳಷ್ಟು ಚರ್ಚೆ ನಡೆದಿತ್ತು. ಆದರೆ ಪಾಲಿಕೆಯ ಸಭೆಯಲ್ಲಿ ಗೃಹ ಬಳಕೆಯ ನೀರಿನ ದರ ಏರಿಸಲಿಲ್ಲ. ಬದಲಿಗೆ ವಾಣಿಜ್ಯ ಬಳಕೆಯ ನೀರಿನ ದರ ಏರಿಸಲಾಗಿತ್ತು. ಪಾಲಿಕೆ ಚುನಾವಣೆಯ ಮುನ್ನ ಹಾಗೂ ನಂತರ ಮೇಯರ್ ಆಯ್ಕೆ ನಡೆಯದೆ ಆಡಳಿತಾಧಿಕಾರಿ ಆಳ್ವಿಕೆ ಇತ್ತು. ಈ ಸಂದರ್ಭದಲ್ಲಿ ಸರಕಾರದ ನಿಯಮ ಪಾಲಿಸಲು ಮುಂದಾದ ಆಡಳಿತಾಧಿಕಾರಿಗಳು ಗೃಹ ಬಳಕೆಯ 20 ಸಾವಿರ ಲೀಟರ್ ನೀರು ಲೀಟರ್ ಗೆ 100 ರೂ. ಇದ್ದ ಶುಲ್ಕವನ್ನು ಏಕಾಏಕಿಯಾಗಿ 174 ರೂ.ಗೆ ಹೆಚ್ಚಿಸಿದರು. ಪಾಲಿಕೆಯಲ್ಲಿ ಆಡಳಿತ ಜಾರಿಗೆ ಬಂದ ಬಳಿಕ ಆರಂಭದಲ್ಲೇ ನೀರಿನ ದರ ವಿಚಾರವೇ ಪ್ರಸ್ತಾಪವಾಯಿತು. ಈ ವಿಚಾರದಲ್ಲಿ ಬಿಜೆಪಿ ವಿರೋಧಿಗಳಿಗೆ ಆಹಾರದ ವಿಷಯವಾಯಿತು. ಈ ಬಗ್ಗೆ ಪಾಲಿಕೆ ಒಳಗೆ ಮತ್ತು ಹೊರಗೆ ಪ್ರತಿಭಟನೆ, ಪತ್ರಿಕಾಗೋಷ್ಠಿ, ಹೇಳಿಕೆಗಳು ನಡೆದವು. ಆಡಳಿತಾಧಿಕಾರಿಯಿಂದ ದರ ಏರಿಕೆಯಾಗಿದೆ ಎಂಬ ಬಿಜೆಪಿ ಜನಪ್ರತಿನಿಧಿಗಳ ಮಾತನ್ನು ಯಾರೂ ಕೇಳಲಿಲ್ಲ. ಏಕಾಏಕಿ 74 ರೂಪಾಯಿ ಏರಿಕೆಯಿಂದ ಬಿಜೆಪಿ ಕಾರ್ಪೊರೇಟರ್ ಗಳು ಜನಸಾಮಾನ್ಯರ ಎದುರು ವಿಲನ್ ಗಳಾಗಿ ಬಿಟ್ಟರು. ಈ ವಿಚಾರದಲ್ಲಿ 2020 ಮೇ ತಿಂಗಳ ಪಾಲಿಕೆ ಸಾಮಾನ್ಯ ಸಭೆಯಲ್ಲೂ ಪ್ರಸ್ತಾಪವಾಗಿ ಸಾಕಷ್ಟು ಆರೋಪ- ಪ್ರತ್ಯಾರೋಪ ಬಳಿಕ ಆಡಳಿತರೂಢ ಬಿಜೆಪಿ ದರ ಇಳಿಕೆಗೆ ಮುಂದಾಗಿ 174ರ ಬದಲಿಗೆ 140ಕ್ಕೆ ಇಳಿಸುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾಪ ಕಳುಹಿಸಿತ್ತು. ಆದರೆ ಇದರಿಂದ ರಾಜ್ಯ ಸರಕಾರಕ್ಕೆ ನಷ್ಟವಾಗುತ್ತದೆ ಎಂದು ಪ್ರಸ್ತಾಪವನ್ನು ತಿರಸ್ಕರಿಸಲಾಗಿತ್ತು.

ಪಟ್ಟು ಬಿಡದ ಶಾಸಕರು: ರಾಜ್ಯದಲ್ಲಿ ಬಿಜೆಪಿ ಸರಕಾರ ಹಾಗೂ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ನೀರಿನ ದರ ಇಳಿಸಲು ಸಾಧ್ಯವಾಗಲಿಲ್ಲ. ಪಾಲಿಕೆಯ ಪ್ರಸ್ತಾಪಕ್ಕೆ ರಾಜ್ಯ ಸರಕಾರ ಯಾವುದೇ ಮನ್ನಣೆ ನೀಡಿಲ್ಲ ಎಂಬ ಟೀಕೆಯೂ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ತಿರಸ್ಕಾರಗೊಂಡಿದ್ದ ಪ್ರಸ್ತಾಪಕ್ಕೆ ಮರು ಜೀವ ನೀಡಿದ್ದರು. ನೀರಿನ ದರ ಏರಿಕೆಯಿಂದ ಆಡಳಿತ ಪಕ್ಷ ಎದುರಿಸುತ್ತಿರುವ ಟೀಕೆ ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ಕಷ್ಟದ ಬಗ್ಗೆ ಅವರು ಸರಕಾರಕ್ಕೆ ಒಂದು ಸಮಗ್ರ ವರದಿ ಸಲ್ಲಿಸಿದರು. ಅವರ ವಾದಕ್ಕೆ ರಾಜ್ಯ ಸರಕಾರ ಮನ್ನಣೆ ನೀಡಿತು. ಅದರಂತೆ ನೀರಿನ ದರ 174 ರೂ.ನಿಂದ ಏಕಾಏಕಿ 100 ರೂ.ಗೆ ಇಳಿಸಿದೆ. ಆಡಳಿತಾಧಿಕಾರಿ 174 ರೂ.ಗೆ ಏರಿಸಿದರೆ, ಆಡಳಿತಗಾರರು 140 ರೂ.ಗೆ ನಿಗದಿಪಡಿಸಿದ್ದರು. ಆದರೂ ಇದನ್ನು ಪರಿಗಣಿಸದಿದ್ದ ಸರಕಾರ ಇದೀಗ ಏಕಾಏಕಿ 74 ರೂ. ಇಳಿಸಿದೆ. ಶಾಸಕ ಕಾಮತರ ಜನಪರ ಹೋರಾಟ ಯಶಸ್ವಿಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು