ಇತ್ತೀಚಿನ ಸುದ್ದಿ
ಶಂಕರನಾರಾಯಣ: ಮೊಬೈಲ್ ಚಾರ್ಜ್ ಹಾಕುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕ ದಾರುಣ ಸಾವು
16/11/2022, 20:22

ಸಾಂದರ್ಭಿಕ ಚಿತ್ರ
ಕುಂದಾಪುರ(reporterkarnataka@gmail.com): ಮೊಬೈಲ್ ಚಾರ್ಜ್ ಗೆ ಇಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಶಂಕರನಾರಾಯಣ ಗ್ರಾಮದಲ್ಲಿ ನಡೆದಿದೆ.
ಉತ್ತರ ಪ್ರದೇಶದ ದೇವಾನಿಯ ಜಿಲ್ಲೆಯ ನಿವಾಸಿ ವಸಿಷ್ಠ ಪಾಸ್ವಾನ್(34) ಮೃತದುರ್ದೈವಿ. ಇವರು ಸಂಬಂಧಿಕರಾದ ವಿಫಿನ್ ಹಾಗೂ ರಾಮಾನಿ ಎಂಬವರೊಂದಿಗೆ ಕೆಲಸಕ್ಕಾಗಿ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮಕ್ಕೆ ಬಂದಿದ್ದರು. ಅಲ್ಲಿ ಕೆಲಸ ಮಾಡಿಕೊಂಡಿದ್ದ ವಸಿಷ್ಠ ಅವರು, ನ.14ರಂದು ರಾತ್ರಿ 8 ಗಂಟೆಗೆ ಅಲ್ಲಿಯೇ ಇದ್ದ ತೋಟದ ಪಂಪ್ ಸೆಟ್ ಶೆಡ್ನಲ್ಲಿ ಮೊಬೈಲ್ ಚಾರ್ಜ್ ಹಾಕಲು ಹೋಗಿದ್ದಾರೆ.ಈ ವೇಳೆ ಆಕಸ್ಮಿಕವಾಗಿ ಕರೆಂಟ್ ಶಾಕ್ ಹೊಡೆದಿದ್ದು, ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತುಆದರೆ,ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ವಸಿಷ್ಠ ಅವರು ಮೃತಪಟ್ಟಿದ್ಧಾರೆ. ಎಂದು ತಿಳಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.