4:14 AM Wednesday17 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಸರ್ವ ಋತುಗಳಲ್ಲಿ ಸೋರುವ ಮ್ಯಾನ್ ಹೋಲ್!: ವಿಶೇಷವೆಂದರೆ ಇದು ಪಾಲಿಕೆ ಕಚೇರಿಗೆ ಕೂಗಳತೆ ದೂರದಲ್ಲಿದೆ!!

02/06/2022, 12:32

ಚಿತ್ರಗಳು : ಗಣೇಶ್ ಅದ್ಯಪಾಡಿ
ಮಂಗಳೂರು(reporterkarnataka.com):

ಮಳೆ ಬಂದಾಗಲೆಲ್ಲ ಚಿಮ್ಮುವ ಮ್ಯಾನ್ ಹೋಲ್ ಗಳನ್ನು ನಾವು ಕಂಡಿದ್ದೇವೆ. ಆದರೆ ಮಳೆ ಮತ್ತು ಬಿಸಿಲು ಎರಡೂ ಸಂದರ್ಭದಲ್ಲಿಯೂ ಸೋರುವ ಮ್ಯಾನ್ ಹೋಲ್ ಬಹಳ ಅಪರೂಪ. ಅಂತಹ ಅಪರೂಪದಲ್ಲಿ ಅಪರೂಪವಾದ ಮ್ಯಾನ್ ಹೋಲ್ ವೊಂದ ನಗರದ ಕೆಎಸ್ಸಾರ್ಟಿಸಿ ಬಳಿಯ ಭಾರತ್ ಮಾಲ್ ಎದುರುಗಡೆ ಇದೆ.

ಇದು ವರ್ಷದ ಎಲ್ಲ ಋತುಗಳಲ್ಲಿಯೂ ಸೋರುತ್ತಲೇ ಇರುತ್ತದೆ. ಇದು ಹೊಸ ಕೇಸ್ ಏನೂ ಅಲ್ಪ. ಹಲವು ವರ್ಷಗಳಿಂದ ವಾಸಿಯಾಗದ ರೋಗ. ಈ ಹಿಂದೆ ಹೀಗೆ ಸೋರುತ್ತಾ ರಸ್ತೆಯಲ್ಲೇ ಕೊಳದ ತರಹ ನಿರ್ಮಾಣವಾದಾಗ ಅಂದಿನ ಮೇಯರ್ ಕವಿತಾ ಸನಿಲ್ ಅವರು ದುರಸ್ತಿ ಮಾಡಿಸಿದ್ದರು. ಸ್ವಲ್ಪ ಸಮಯ ಯಾವುದೇ ಸಮಸ್ಯೆ ಇರಲಿಲ್ಲ. ಕೆಲವು ತಿಂಗಳ ನಂತರ ಇದ್ದಕ್ಕಿದ್ದಂತೆ ಮತ್ತೆ ಸೋರಲು ಆರಂಭವಾಯಿತು. ಮಂಗಳೂರು ಮಹಾನಗರಪಾಲಿಕೆಯಲ್ಲಿ ಸಾಕಷ್ಟು ಎಂಜಿನಿಯರ್ ಗಳಿದ್ದಾರೆ. ಪಾಲಿಕೆಗೆ ಎಕ್ಸ್‌ಪರ್ಟ್ ಸಲಹೆಗಾರರಿದ್ದಾರೆ. ಆದರೆ ಇವೆಲ್ಲವೂ ವ್ಯರ್ಥ. ಪೈಪ್ ಎಲ್ಲಿಗೆ ಜೋಡಿಸಬೇಕು, ನೀರು ಹರಿಯಲು ಎಲ್ಲಿಗೆ ಬಿಡಬೇಕು ಎನ್ನುವ ಪ್ರಾಥಮಿಕ ನಾಲೇಜ್ ಇವರಿಗಿಲ್ಲವೇ ಎಂದು ಜನರು ಪ್ರಶ್ನಿಸುತ್ತಾರೆ.

ಮಂಗಳೂರು ಈಗಾಗಲೇ ಹಲವು ವರ್ಷಗಳಿಂದ ಮಲೇರಿಯಾದಿಂದ ತತ್ತರಿಸಿರುವುದು ಇಡೀ ಲೋಕಕ್ಕೆ ಗೊತ್ತಿದೆ. ಅದರ ಜತೆಗೆ ಡೆಂಗ್ಯೂ ಹಾವಳಿಯೂ ಇದೆ. ಇಷ್ಟೆಲ್ಲ ರಿಸ್ಕ್ ಗಳ ನಡುವೆ ಕಡಲನಗರಿಯ ಜನತೆ ಬದುಕು ಕಟ್ಟಿಕೊಂಡಿದ್ದಾರೆ ಎಂದು ಗೊತ್ತಿದ್ದೂ ಪಾಲಿಕೆ ಮಾತ್ರ ಕ್ಯಾರೇ ಮಾಡುತ್ತಿಲ್ಲ. ವಿಶೇಷವೆಂದರೆ ಮಹಾನಗರಪಾಲಿಕೆ ಕಚೇರಿ ಇಲ್ಲಿಂದ ಕೂಗಳತೆ ದೂರದಲ್ಲಿದೆ. ಭಾರತ್ ಮಾಲ್ ಎದುರು ನಿಂತರೆ ಪಾಲಿಕೆ ಕಟ್ಟಡದಲ್ಲಿರುವ ಗಡಿಯಾರ ಸಮಯವನ್ನು ನಿಖರವಾಗಿ ಹೇಳಬಹುದಾಗಿದೆ. ಮೇಯರ್ ಹಾಗೂ ಪಾಲಿಕೆ ಕಮಿಷನರ್ ಈ ದಾರಿಯಾಗಿ ದಿನಕ್ಕೆ ನಾಲ್ಕಾರು ಬಾರಿ ಸರಕಾರಿ ಕಾರಿನಲ್ಲಿ ಗ್ಲಾಸ್ ಬಂದ್ ಮಾಡಿ ಓಡಾಡುತ್ತಾರೆ. ಕೆಸರು ಎರಚುವುದಿಲ್ಲ, ವಾಸನೆ ಬರುವುದಿಲ್ಲ.!

ಇತ್ತೀಚಿನ ಸುದ್ದಿ

ಜಾಹೀರಾತು