5:56 PM Wednesday11 - February 2026
ಬ್ರೇಕಿಂಗ್ ನ್ಯೂಸ್
ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ಇತ್ತೀಚಿನ ಸುದ್ದಿ

ಸರ್ವ ಋತುಗಳಲ್ಲಿ ಸೋರುವ ಮ್ಯಾನ್ ಹೋಲ್!: ವಿಶೇಷವೆಂದರೆ ಇದು ಪಾಲಿಕೆ ಕಚೇರಿಗೆ ಕೂಗಳತೆ ದೂರದಲ್ಲಿದೆ!!

02/06/2022, 12:32

ಚಿತ್ರಗಳು : ಗಣೇಶ್ ಅದ್ಯಪಾಡಿ
ಮಂಗಳೂರು(reporterkarnataka.com):

ಮಳೆ ಬಂದಾಗಲೆಲ್ಲ ಚಿಮ್ಮುವ ಮ್ಯಾನ್ ಹೋಲ್ ಗಳನ್ನು ನಾವು ಕಂಡಿದ್ದೇವೆ. ಆದರೆ ಮಳೆ ಮತ್ತು ಬಿಸಿಲು ಎರಡೂ ಸಂದರ್ಭದಲ್ಲಿಯೂ ಸೋರುವ ಮ್ಯಾನ್ ಹೋಲ್ ಬಹಳ ಅಪರೂಪ. ಅಂತಹ ಅಪರೂಪದಲ್ಲಿ ಅಪರೂಪವಾದ ಮ್ಯಾನ್ ಹೋಲ್ ವೊಂದ ನಗರದ ಕೆಎಸ್ಸಾರ್ಟಿಸಿ ಬಳಿಯ ಭಾರತ್ ಮಾಲ್ ಎದುರುಗಡೆ ಇದೆ.

ಇದು ವರ್ಷದ ಎಲ್ಲ ಋತುಗಳಲ್ಲಿಯೂ ಸೋರುತ್ತಲೇ ಇರುತ್ತದೆ. ಇದು ಹೊಸ ಕೇಸ್ ಏನೂ ಅಲ್ಪ. ಹಲವು ವರ್ಷಗಳಿಂದ ವಾಸಿಯಾಗದ ರೋಗ. ಈ ಹಿಂದೆ ಹೀಗೆ ಸೋರುತ್ತಾ ರಸ್ತೆಯಲ್ಲೇ ಕೊಳದ ತರಹ ನಿರ್ಮಾಣವಾದಾಗ ಅಂದಿನ ಮೇಯರ್ ಕವಿತಾ ಸನಿಲ್ ಅವರು ದುರಸ್ತಿ ಮಾಡಿಸಿದ್ದರು. ಸ್ವಲ್ಪ ಸಮಯ ಯಾವುದೇ ಸಮಸ್ಯೆ ಇರಲಿಲ್ಲ. ಕೆಲವು ತಿಂಗಳ ನಂತರ ಇದ್ದಕ್ಕಿದ್ದಂತೆ ಮತ್ತೆ ಸೋರಲು ಆರಂಭವಾಯಿತು. ಮಂಗಳೂರು ಮಹಾನಗರಪಾಲಿಕೆಯಲ್ಲಿ ಸಾಕಷ್ಟು ಎಂಜಿನಿಯರ್ ಗಳಿದ್ದಾರೆ. ಪಾಲಿಕೆಗೆ ಎಕ್ಸ್‌ಪರ್ಟ್ ಸಲಹೆಗಾರರಿದ್ದಾರೆ. ಆದರೆ ಇವೆಲ್ಲವೂ ವ್ಯರ್ಥ. ಪೈಪ್ ಎಲ್ಲಿಗೆ ಜೋಡಿಸಬೇಕು, ನೀರು ಹರಿಯಲು ಎಲ್ಲಿಗೆ ಬಿಡಬೇಕು ಎನ್ನುವ ಪ್ರಾಥಮಿಕ ನಾಲೇಜ್ ಇವರಿಗಿಲ್ಲವೇ ಎಂದು ಜನರು ಪ್ರಶ್ನಿಸುತ್ತಾರೆ.

ಮಂಗಳೂರು ಈಗಾಗಲೇ ಹಲವು ವರ್ಷಗಳಿಂದ ಮಲೇರಿಯಾದಿಂದ ತತ್ತರಿಸಿರುವುದು ಇಡೀ ಲೋಕಕ್ಕೆ ಗೊತ್ತಿದೆ. ಅದರ ಜತೆಗೆ ಡೆಂಗ್ಯೂ ಹಾವಳಿಯೂ ಇದೆ. ಇಷ್ಟೆಲ್ಲ ರಿಸ್ಕ್ ಗಳ ನಡುವೆ ಕಡಲನಗರಿಯ ಜನತೆ ಬದುಕು ಕಟ್ಟಿಕೊಂಡಿದ್ದಾರೆ ಎಂದು ಗೊತ್ತಿದ್ದೂ ಪಾಲಿಕೆ ಮಾತ್ರ ಕ್ಯಾರೇ ಮಾಡುತ್ತಿಲ್ಲ. ವಿಶೇಷವೆಂದರೆ ಮಹಾನಗರಪಾಲಿಕೆ ಕಚೇರಿ ಇಲ್ಲಿಂದ ಕೂಗಳತೆ ದೂರದಲ್ಲಿದೆ. ಭಾರತ್ ಮಾಲ್ ಎದುರು ನಿಂತರೆ ಪಾಲಿಕೆ ಕಟ್ಟಡದಲ್ಲಿರುವ ಗಡಿಯಾರ ಸಮಯವನ್ನು ನಿಖರವಾಗಿ ಹೇಳಬಹುದಾಗಿದೆ. ಮೇಯರ್ ಹಾಗೂ ಪಾಲಿಕೆ ಕಮಿಷನರ್ ಈ ದಾರಿಯಾಗಿ ದಿನಕ್ಕೆ ನಾಲ್ಕಾರು ಬಾರಿ ಸರಕಾರಿ ಕಾರಿನಲ್ಲಿ ಗ್ಲಾಸ್ ಬಂದ್ ಮಾಡಿ ಓಡಾಡುತ್ತಾರೆ. ಕೆಸರು ಎರಚುವುದಿಲ್ಲ, ವಾಸನೆ ಬರುವುದಿಲ್ಲ.!

ಇತ್ತೀಚಿನ ಸುದ್ದಿ

ಜಾಹೀರಾತು