7:27 AM Sunday29 - March 2026
ಬ್ರೇಕಿಂಗ್ ನ್ಯೂಸ್
ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ…

ಇತ್ತೀಚಿನ ಸುದ್ದಿ

ಸರ್ವ ಋತುಗಳಲ್ಲಿ ಸೋರುವ ಮ್ಯಾನ್ ಹೋಲ್!: ವಿಶೇಷವೆಂದರೆ ಇದು ಪಾಲಿಕೆ ಕಚೇರಿಗೆ ಕೂಗಳತೆ ದೂರದಲ್ಲಿದೆ!!

02/06/2022, 12:32

ಚಿತ್ರಗಳು : ಗಣೇಶ್ ಅದ್ಯಪಾಡಿ
ಮಂಗಳೂರು(reporterkarnataka.com):

ಮಳೆ ಬಂದಾಗಲೆಲ್ಲ ಚಿಮ್ಮುವ ಮ್ಯಾನ್ ಹೋಲ್ ಗಳನ್ನು ನಾವು ಕಂಡಿದ್ದೇವೆ. ಆದರೆ ಮಳೆ ಮತ್ತು ಬಿಸಿಲು ಎರಡೂ ಸಂದರ್ಭದಲ್ಲಿಯೂ ಸೋರುವ ಮ್ಯಾನ್ ಹೋಲ್ ಬಹಳ ಅಪರೂಪ. ಅಂತಹ ಅಪರೂಪದಲ್ಲಿ ಅಪರೂಪವಾದ ಮ್ಯಾನ್ ಹೋಲ್ ವೊಂದ ನಗರದ ಕೆಎಸ್ಸಾರ್ಟಿಸಿ ಬಳಿಯ ಭಾರತ್ ಮಾಲ್ ಎದುರುಗಡೆ ಇದೆ.

ಇದು ವರ್ಷದ ಎಲ್ಲ ಋತುಗಳಲ್ಲಿಯೂ ಸೋರುತ್ತಲೇ ಇರುತ್ತದೆ. ಇದು ಹೊಸ ಕೇಸ್ ಏನೂ ಅಲ್ಪ. ಹಲವು ವರ್ಷಗಳಿಂದ ವಾಸಿಯಾಗದ ರೋಗ. ಈ ಹಿಂದೆ ಹೀಗೆ ಸೋರುತ್ತಾ ರಸ್ತೆಯಲ್ಲೇ ಕೊಳದ ತರಹ ನಿರ್ಮಾಣವಾದಾಗ ಅಂದಿನ ಮೇಯರ್ ಕವಿತಾ ಸನಿಲ್ ಅವರು ದುರಸ್ತಿ ಮಾಡಿಸಿದ್ದರು. ಸ್ವಲ್ಪ ಸಮಯ ಯಾವುದೇ ಸಮಸ್ಯೆ ಇರಲಿಲ್ಲ. ಕೆಲವು ತಿಂಗಳ ನಂತರ ಇದ್ದಕ್ಕಿದ್ದಂತೆ ಮತ್ತೆ ಸೋರಲು ಆರಂಭವಾಯಿತು. ಮಂಗಳೂರು ಮಹಾನಗರಪಾಲಿಕೆಯಲ್ಲಿ ಸಾಕಷ್ಟು ಎಂಜಿನಿಯರ್ ಗಳಿದ್ದಾರೆ. ಪಾಲಿಕೆಗೆ ಎಕ್ಸ್‌ಪರ್ಟ್ ಸಲಹೆಗಾರರಿದ್ದಾರೆ. ಆದರೆ ಇವೆಲ್ಲವೂ ವ್ಯರ್ಥ. ಪೈಪ್ ಎಲ್ಲಿಗೆ ಜೋಡಿಸಬೇಕು, ನೀರು ಹರಿಯಲು ಎಲ್ಲಿಗೆ ಬಿಡಬೇಕು ಎನ್ನುವ ಪ್ರಾಥಮಿಕ ನಾಲೇಜ್ ಇವರಿಗಿಲ್ಲವೇ ಎಂದು ಜನರು ಪ್ರಶ್ನಿಸುತ್ತಾರೆ.

ಮಂಗಳೂರು ಈಗಾಗಲೇ ಹಲವು ವರ್ಷಗಳಿಂದ ಮಲೇರಿಯಾದಿಂದ ತತ್ತರಿಸಿರುವುದು ಇಡೀ ಲೋಕಕ್ಕೆ ಗೊತ್ತಿದೆ. ಅದರ ಜತೆಗೆ ಡೆಂಗ್ಯೂ ಹಾವಳಿಯೂ ಇದೆ. ಇಷ್ಟೆಲ್ಲ ರಿಸ್ಕ್ ಗಳ ನಡುವೆ ಕಡಲನಗರಿಯ ಜನತೆ ಬದುಕು ಕಟ್ಟಿಕೊಂಡಿದ್ದಾರೆ ಎಂದು ಗೊತ್ತಿದ್ದೂ ಪಾಲಿಕೆ ಮಾತ್ರ ಕ್ಯಾರೇ ಮಾಡುತ್ತಿಲ್ಲ. ವಿಶೇಷವೆಂದರೆ ಮಹಾನಗರಪಾಲಿಕೆ ಕಚೇರಿ ಇಲ್ಲಿಂದ ಕೂಗಳತೆ ದೂರದಲ್ಲಿದೆ. ಭಾರತ್ ಮಾಲ್ ಎದುರು ನಿಂತರೆ ಪಾಲಿಕೆ ಕಟ್ಟಡದಲ್ಲಿರುವ ಗಡಿಯಾರ ಸಮಯವನ್ನು ನಿಖರವಾಗಿ ಹೇಳಬಹುದಾಗಿದೆ. ಮೇಯರ್ ಹಾಗೂ ಪಾಲಿಕೆ ಕಮಿಷನರ್ ಈ ದಾರಿಯಾಗಿ ದಿನಕ್ಕೆ ನಾಲ್ಕಾರು ಬಾರಿ ಸರಕಾರಿ ಕಾರಿನಲ್ಲಿ ಗ್ಲಾಸ್ ಬಂದ್ ಮಾಡಿ ಓಡಾಡುತ್ತಾರೆ. ಕೆಸರು ಎರಚುವುದಿಲ್ಲ, ವಾಸನೆ ಬರುವುದಿಲ್ಲ.!

ಇತ್ತೀಚಿನ ಸುದ್ದಿ

ಜಾಹೀರಾತು