ಇತ್ತೀಚಿನ ಸುದ್ದಿ
ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ. ಸಿದ್ದಲಿಂಗಯ್ಯ ಸಮಾಧಿ ನಿರ್ಮಿಸಿ: ಛಲವಾದಿ ನಾರಾಯಣಸ್ವಾಮಿ
20/11/2025, 18:48
ಬೆಂಗಳೂರು(reporterkarnataka.com): ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ ಹಾಗೂ ಕವಿ ಡಾ. ಸಿದ್ದಲಿಂಗಯ್ಯ ಅವರ ಸಮಾಧಿ ನಿರ್ಮಿಸಲಿ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ
ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಸಾಲುಮರದ ತಿಮ್ಮಕ್ಕ ತೀರಿಕೊಂಡ್ರು. ಅವರನ್ನ ವೃಕ್ಷ ಮಾತೆ ಅಂತೀವಿ. ಅವರನ್ನು ಕಲಾಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಿದ್ರು. ಯು.ಆರ್ ಅನಂತಮೂರ್ತಿ ಹಾಗೂ ಕವಿ ಡಾ. ಸಿದ್ದಲಿಂಗಯ್ಯ ಅವರದ್ದೂ ಅಲ್ಲೇ ಅಂತ್ಯಕ್ರಿಯೆ ಆಗಿದೆ. ಮೂವರದ್ದೂ ಅಲ್ಲಿ ಸ್ಮಾರಕ ಮಾಡಬೇಕು ಎಂದು ಸರ್ಕಾರಕ್ಕೆ ನಾರಾಯಣಸ್ವಾಮಿ ಒತ್ತಾಯ ಮಾಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ನಿನ್ನೆ 7 ಕೋಟಿ ಹಗಲು ದರೋಡೆ ಆಗಿದೆ. ಈ ಸರ್ಕಾರ ಬದುಕಿದೆಯಾ.? ಕೊಪ್ಪಳ, ಮಂಗಳೂರು ನಲ್ಲಿ ಕೂಡ ಆಗಿದೆ ಎಂದು ಅವರು ನುಡಿದರು.
ಬೆಂಗಳೂರಿನಲ್ಲಿ ಹಾಡಹಗಲೇ ದರೋಡೆ ಅಗಿದೆ, ಪತ್ತೆ ಹಚ್ತೀವಿ ಅಂತಾರೆ. ಅತ್ಯಾಚಾರ, ದರೋಡೆ, ಕೊಲೆ ಆಗ್ತಿದೆ. ಇವರಿಗೆ ಯಾವುದನ್ನೂ ತಡೆಯಲು ಆಗ್ತಿಲ್ಲ. ಸೋಶಿಯಲಿಸ್ಟ್ ಮಾತುಗಳನ್ನ ಆಡ್ತಾರೆ. ದಲಿತರ ಬಗ್ಗೆ ಮಾತಾಡ್ತಿದ್ದಾರೆ, 31 ಬಿಲ್ನಲ್ಲಿ ಯಾಕೆ ಆ ಬಿಲ್ ಇಲ್ಲ ಎಂದು ಛಲವಾದಿ ಪ್ರಶ್ನಿಸಿದರು.
ಪರಿಶಿಷ್ಟ ಜಾತಿ ಮತ್ತು ವರ್ಗ ಅಂತ ಕೇಂದ್ರ ಸರ್ಕಾರ ಎರಡು ಆಯೋಗ ಮಾಡಿದೆ.ಇಲ್ಲಿ ಆಯೋಗ ಇದೆ, ಕೆಲಸ ಮಾಡ್ತಿಲ್ಲ ಎಂದರು.












