6:10 AM Friday16 - May 2025
ಬ್ರೇಕಿಂಗ್ ನ್ಯೂಸ್
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಇಂದಿನಿಂದ ಜಾರಿ; ಪ್ರಾಧಿಕಾರ ರಚನೆ ಮರದ ಕೊಂಬೆಗಳ ಮಧ್ಯೆ ಸಿಲುಕಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯ ರಕ್ಷಣೆ: ಅಗ್ನಿಶಾಮಕ ದಳ… ಲೋಕಾಯುಕ್ತ ಅಧಿಕಾರಿಗಳಿಂದ ಮತ್ತೆ ಭ್ರಷ್ಟರ ಭೇಟೆ: ಬೆಂಗಳೂರು, ಮಂಗಳೂರು ಸಹಿತ 7 ನಗರಗಳ… ಮಂಗಳೂರು: ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ;… Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು

ಇತ್ತೀಚಿನ ಸುದ್ದಿ

ರೋಟರಿ ಕ್ಲಬ್ ಮಂಗಳೂರು ಪೂರ್ವ: ‘ಬಲೇ ಗೊಬ್ಬುಗ -2022’ ಕ್ರೀಡಾಕೂಟ; ವಾಟರ್ ಪ್ಯೂರಿಫೈರ್ ಕೊಡುಗೆ

20/10/2022, 17:30

ಮಂಗಳೂರು(reporterkarnataka.com): ರೋಟರಿ ಕ್ಲಬ್ ಮಂಗಳೂರು ಪೂರ್ವ ಇದರ ಆಶ್ರಯದಲ್ಲಿ ಆರ್.ಐ ಜಿಲ್ಲೆ ೩೧೮೧ ವಲಯ -೨ ಮತ್ತು ೩ರ “ಬಲೇ ಗೊಬ್ಬುಗ -೨೦೨೨”, ಕ್ರೀಡಾಕೂಟ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜರುಗಿತು.

ಪಿಡಿಜಿ ಎಂ ರಂಗನಾಥ್ ಭಟ್ ಕ್ರೀಡಾಕೂಟ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಬಿ.ಆರ್ ಶಿವಪ್ರಸಾದ್ ಆಳ್ವ (ಕೋಟಕ್ ಮಹೀಂದ್ರ ಇದರ ಚಾನಲ್ ಪಾರ್ಟ್ನರ್) ಶುಭ ಕೋರಿದರು.
ಜೋನ್-೨ರ ಎ.ಜಿ ಗಳಾದ ರಾಜಗೋಪಾಲ್ ರೈ ಹಾಗೂ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಂಗಳಾ ಕ್ರೀಡಾಂಗಣಕ್ಕೆ ವಾಟರ್ ಪ್ಯೂರಿಫೈರನ್ನು ದೇಣಿಗೆಯಾಗಿ ರೋಟರಿ ಕ್ಲಬ್ ಆಫ್ ಮಂಗಳೂರು ಪೂರ್ವದ ವತಿಯಿಂದ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಿಜಿ ಎನ್ ವಿಕ್ರಮದತ್ತ ಹಾಗೂ ಪಿ.ಎ.ಜಿ. ಡಾ. ಶಿವಪ್ರಸಾದ್ ಕೆ. ಹಾಗೂ ವಲಯ ೨ಮತ್ತು ೩ರ ಎಸಿಗಳಾದ ಶಶಿಧರ್ ಕೆ. ಮತ್ತು ಸೂರಜ್ ಹೆಬ್ಬಾರ್ ನೆರಿಯಾ ಉಪಸ್ಥಿತರಿದ್ದರು.

ರೋಟರಿ ಮಂಗಳೂರು ಪೂರ್ವದ ಅಧ್ಯಕ್ಷರಾದ ಅಂ ಹರೀಶ್ ಶೆಟ್ಟಿ ಸ್ವಾಗತಿಸಿದರು. ಕ್ರೀಡೆಯ ಉದ್ದೇಶವನ್ನು ಇವೆಂಟ್ ಚೇರ್‌ಮೆನ್ ರೋ. ಆನಂದ ಶೆಟ್ಟಿ ತಿಳಿಸಿದರು. ಪ್ರಮಾಣ ವಚನವನ್ನು ಇವೆಂಟ್ ಕಾರ್ಯದರ್ಶಿ ದೀರಜ್ ಶೆಟ್ಟಿ ಯವರು ಭೋದಿಸಿದರು. ಅಧ್ಯಕ್ಷ ಸದಾಶಿವ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಝೋ-೨ರ ತಂಡ ಪ್ರಶಸ್ತಿಯನ್ನು ಆರ್. ಸಿ ಮಂಗಳೂರು ಪೂರ್ವ ಪಡೆದಿದ್ದು ರನ್ನರ್ ಪ್ರಶಸ್ತಿಯನ್ನು ಆರ್.ಸಿ ಬೈಕಂಪಾಡಿ ತಂಡವು ಗಳಿಸಿರುತ್ತದೆ.

ಝೋನ್-೩ರ ತಂಡ ಪ್ರಶಸ್ತಿಯನ್ನು ಆರ್. ಸಿ ಸೌತ್ ಮಂಗಳೂರು ತಂಡವು ರನ್ನರ್ ಆಗಿ ಆರ್. ಸಿ ದೇರಳಕಟ್ಟೆ ತಂಡವು ಗಳಿಸಿಕೊಂಡಿತು.
ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಬ್ಯಾಂಡ್‌ನೊAದಿಗೆ ಪಥ ಸಂಚಲನಕ್ಕೆ ವಿಶೇಷ ಮೆರುಗನ್ನು ನೀಡಿದರು

ಇತ್ತೀಚಿನ ಸುದ್ದಿ

ಜಾಹೀರಾತು