9:52 AM Friday18 - July 2025
ಬ್ರೇಕಿಂಗ್ ನ್ಯೂಸ್
ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು ಭಾರೀ ಮಳೆ: ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ: ಶಾಲೆ- ಕಾಲೇಜುಗಳಿಗೆ ನಾಳೆಯೂ… ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ… ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,… ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ… Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು… ಸಿಗಂಧೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ್ Chikkamagaluru | ಮೂಡಿಗೆರೆ: ವಿದ್ಯುತ್ ತಂತಿ ಸ್ವರ್ಶಿಸಿ ಅನ್ನದಾತ ದಾರುಣ ಸಾವು ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:…

ಇತ್ತೀಚಿನ ಸುದ್ದಿ

ರೋಟರಿ ಕ್ಲಬ್ ಮಂಗಳೂರು ಪೂರ್ವ: ‘ಬಲೇ ಗೊಬ್ಬುಗ -2022’ ಕ್ರೀಡಾಕೂಟ; ವಾಟರ್ ಪ್ಯೂರಿಫೈರ್ ಕೊಡುಗೆ

20/10/2022, 17:30

ಮಂಗಳೂರು(reporterkarnataka.com): ರೋಟರಿ ಕ್ಲಬ್ ಮಂಗಳೂರು ಪೂರ್ವ ಇದರ ಆಶ್ರಯದಲ್ಲಿ ಆರ್.ಐ ಜಿಲ್ಲೆ ೩೧೮೧ ವಲಯ -೨ ಮತ್ತು ೩ರ “ಬಲೇ ಗೊಬ್ಬುಗ -೨೦೨೨”, ಕ್ರೀಡಾಕೂಟ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜರುಗಿತು.

ಪಿಡಿಜಿ ಎಂ ರಂಗನಾಥ್ ಭಟ್ ಕ್ರೀಡಾಕೂಟ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಬಿ.ಆರ್ ಶಿವಪ್ರಸಾದ್ ಆಳ್ವ (ಕೋಟಕ್ ಮಹೀಂದ್ರ ಇದರ ಚಾನಲ್ ಪಾರ್ಟ್ನರ್) ಶುಭ ಕೋರಿದರು.
ಜೋನ್-೨ರ ಎ.ಜಿ ಗಳಾದ ರಾಜಗೋಪಾಲ್ ರೈ ಹಾಗೂ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಂಗಳಾ ಕ್ರೀಡಾಂಗಣಕ್ಕೆ ವಾಟರ್ ಪ್ಯೂರಿಫೈರನ್ನು ದೇಣಿಗೆಯಾಗಿ ರೋಟರಿ ಕ್ಲಬ್ ಆಫ್ ಮಂಗಳೂರು ಪೂರ್ವದ ವತಿಯಿಂದ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಿಜಿ ಎನ್ ವಿಕ್ರಮದತ್ತ ಹಾಗೂ ಪಿ.ಎ.ಜಿ. ಡಾ. ಶಿವಪ್ರಸಾದ್ ಕೆ. ಹಾಗೂ ವಲಯ ೨ಮತ್ತು ೩ರ ಎಸಿಗಳಾದ ಶಶಿಧರ್ ಕೆ. ಮತ್ತು ಸೂರಜ್ ಹೆಬ್ಬಾರ್ ನೆರಿಯಾ ಉಪಸ್ಥಿತರಿದ್ದರು.

ರೋಟರಿ ಮಂಗಳೂರು ಪೂರ್ವದ ಅಧ್ಯಕ್ಷರಾದ ಅಂ ಹರೀಶ್ ಶೆಟ್ಟಿ ಸ್ವಾಗತಿಸಿದರು. ಕ್ರೀಡೆಯ ಉದ್ದೇಶವನ್ನು ಇವೆಂಟ್ ಚೇರ್‌ಮೆನ್ ರೋ. ಆನಂದ ಶೆಟ್ಟಿ ತಿಳಿಸಿದರು. ಪ್ರಮಾಣ ವಚನವನ್ನು ಇವೆಂಟ್ ಕಾರ್ಯದರ್ಶಿ ದೀರಜ್ ಶೆಟ್ಟಿ ಯವರು ಭೋದಿಸಿದರು. ಅಧ್ಯಕ್ಷ ಸದಾಶಿವ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಝೋ-೨ರ ತಂಡ ಪ್ರಶಸ್ತಿಯನ್ನು ಆರ್. ಸಿ ಮಂಗಳೂರು ಪೂರ್ವ ಪಡೆದಿದ್ದು ರನ್ನರ್ ಪ್ರಶಸ್ತಿಯನ್ನು ಆರ್.ಸಿ ಬೈಕಂಪಾಡಿ ತಂಡವು ಗಳಿಸಿರುತ್ತದೆ.

ಝೋನ್-೩ರ ತಂಡ ಪ್ರಶಸ್ತಿಯನ್ನು ಆರ್. ಸಿ ಸೌತ್ ಮಂಗಳೂರು ತಂಡವು ರನ್ನರ್ ಆಗಿ ಆರ್. ಸಿ ದೇರಳಕಟ್ಟೆ ತಂಡವು ಗಳಿಸಿಕೊಂಡಿತು.
ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಬ್ಯಾಂಡ್‌ನೊAದಿಗೆ ಪಥ ಸಂಚಲನಕ್ಕೆ ವಿಶೇಷ ಮೆರುಗನ್ನು ನೀಡಿದರು

ಇತ್ತೀಚಿನ ಸುದ್ದಿ

ಜಾಹೀರಾತು