7:54 AM Saturday20 - December 2025
ಬ್ರೇಕಿಂಗ್ ನ್ಯೂಸ್
ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ

ಇತ್ತೀಚಿನ ಸುದ್ದಿ

ರಸ್ತೆಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದಿರೋ ಮರಗಿಡ: ರಸ್ತೆ ಕಾಣದೆ ಹೊರನಾಡು ಭಕ್ತರ ಕಾರು ಮುಖಾಮುಖಿ ಡಿಕ್ಕಿ; 4 ಮಂದಿಗೆ ಗಾಯ

15/10/2023, 09:03

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reeporterkarnataka@gmail.com

ರಸ್ತೆಯ ಇಕ್ಕೆಲಗಳ ಮರಗಿಡಗಳು ಹುಲುಸಾಗಿ ಬೆಳೆದಿದ್ದು ಅವುಗಳನ್ನ ಕಡಿಯದ ಹಿನ್ನೆಲೆ ರಸ್ತೆ ಸರಿಯಾಗಿ ಕಾಣದೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆ ಬಳಿ ನಡೆದಿದೆ. ಲೋಕೋಪಯೋಗಿ ಇಲಾಖೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡ-ಘಂಟೆಗಳನ್ನ ಕಡಿಯದ ಹಿನ್ನೆಲೆ ರಸ್ತೆ ಕಾಣದೆ ಮೇಲಿಂದ ಮೇಲೆ ಅಪಘಾತಗಳಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ತಿರುವಿನಲ್ಲಿ ರಸ್ತೆ ಸೂಕ್ತವಾಗಿ ಕಾಣಿಸದೆ ಹೊರನಾಡಿಗೆ ಹೋಗುತ್ತಿದ್ದ ಹಾಗೂ ಹೊರನಾಡಿನಿಂದ ಬರುತ್ತಿದ್ದ ಎರಡು ಕಾರುಗಳು ತಿರುವಿನಲ್ಲಿ ಮುಖಾಮುಖಿ ಡಿಕಿಯಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಎರಡು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಳಸ ತಾಲೂಕಿನ ಅನ್ನಪೂರ್ಣೇಶ್ವರಿ ದರ್ಶನಕ್ಕೆ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಶೃಂಗೇರಿ ಶಾರದಾಂಬೆ ದರ್ಶನ ಮುಗಿಸಿಕೊಂಡು ಹೊರನಾಡಿಗೆ ಬರುವವರು ಬೇರೆ ಮಾರ್ಗ ಅನುಸರಿಸುತ್ತಾರೆ. ಆದ್ರೆ, ಹೊರನಾಡಿಗಷ್ಟೆ ಬರುವವರು ಹೆಚ್ಚಾಗಿ ಕೊಟ್ಟಿಗೆಹಾರದಿಂದ ಜಾವಳಿ-ಹಿರೇಬೈಲು-ಕಳಸ ಮೂಲಕ ಹೊರನಾಡು ತಲುಪುತ್ತಾರೆ. ರಾಜ್ಯದ ಯಾವುದೇ ಮೂಲೆಯಿಂದ ಬಂದರೂ ಕೊಟ್ಟಿಗೆಹಾರಕ್ಕೆ ಬಂದು ಜಾವಳಿ-ಕೆಳಗೂರು-ಹಿರೇಬೈಲು-ಕಳಸದಿಂದ ಹೊರನಾಡಿಗೆ ಹೋಗುತ್ತಾರೆ. ಆದರೆ, ಕೊಟ್ಟಿಗೆಹಾರದಿಂದ ಕಳಸದವರೆಗೂ ಹಾವು-ಬಳುಕಿನ ಮೈಕಟ್ಟಿನ ಗಾಡ್ ಸೆಕ್ಷನ್ ರಸ್ತೆಯಿದ್ದು ರಸ್ತೆ ಇಕ್ಕೆಲಗಳ ಮರಗಿಡಗಳು ಹುಲುಸಾಗಿ ಬೆಳೆದು ನಿಂತಿದೆ. ರಸ್ತೆ ಸಮರ್ಪಕವಾಗಿ ಕಾಣಿಸಿದೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ಸ್ಥಳಿಯರು ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ. ಇದೀಗ, ನವರಾತ್ರಿಯ ಸಮಯ ನಿತ್ಯ ಹಗಲು-ರಾತ್ರಿ ಎನ್ನದೆ ನೂರಾರು ವಾಹನಗಳ ಓಡಾಟವಿರುತ್ತೆ. ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಬದಿಯ ಮರಗಿಡಗಳಲ್ಲಿ ಹುಲುಸಾಗಿ ಬೆಳೆದಿರುವ ಜಂಗಲ್‍ಗಳನ್ನ ಕಡಿಸಬೇಕಿದೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಈ ರೀತಿಯ ಅಪಘಾತಗಳು ಹೆಚ್ಚಾದರೂ ಆಗಬಹುದು. ಸ್ಥಳಿಯರಿಗೆ ಹಾಗೂ ಪೊಲೀಸರಿಗೆ ವಾಹನ ಸವಾರರ ಜಗಳ, ಟ್ರಾಫಿಕ್ ಕ್ಲಿಯರ್ ಮಾಡೋದೆ ಒಂದು ಕೆಸಲವಾಗೋದು ಖಂಡಿತ. ಹಾಗಾಗಿ, ಕೂಡಲೇ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ಪ್ರವಾಸಿ ಹಾಗೂ ಭಕ್ತರ ವಾಹನಳಿಗೆ ಯಾವುದೇ ತೊಂದರೆಯಾಗಂತೆ ಮರಗಿಡಗಳನ್ನ ತೆರವು ಮಾಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು