2:14 AM Thursday31 - July 2025
ಬ್ರೇಕಿಂಗ್ ನ್ಯೂಸ್
ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ… ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಏನಿಲ್ಲ ಏನಿಲ್ಲ ಎನ್ನುವುದರ ನಡುವೆ ಸಿಕ್ಕೇ ಬಿಡ್ತು… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭ ಬಾಲಮಂದಿರ, ಮಹಿಳಾ ನಿಲಯಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಭೇಟಿ: ಚಿಣ್ಣರನ್ನು ಮುದ್ದಾಡಿದ…

ಇತ್ತೀಚಿನ ಸುದ್ದಿ

ರಸ್ತೆಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದಿರೋ ಮರಗಿಡ: ರಸ್ತೆ ಕಾಣದೆ ಹೊರನಾಡು ಭಕ್ತರ ಕಾರು ಮುಖಾಮುಖಿ ಡಿಕ್ಕಿ; 4 ಮಂದಿಗೆ ಗಾಯ

15/10/2023, 09:03

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reeporterkarnataka@gmail.com

ರಸ್ತೆಯ ಇಕ್ಕೆಲಗಳ ಮರಗಿಡಗಳು ಹುಲುಸಾಗಿ ಬೆಳೆದಿದ್ದು ಅವುಗಳನ್ನ ಕಡಿಯದ ಹಿನ್ನೆಲೆ ರಸ್ತೆ ಸರಿಯಾಗಿ ಕಾಣದೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆ ಬಳಿ ನಡೆದಿದೆ. ಲೋಕೋಪಯೋಗಿ ಇಲಾಖೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡ-ಘಂಟೆಗಳನ್ನ ಕಡಿಯದ ಹಿನ್ನೆಲೆ ರಸ್ತೆ ಕಾಣದೆ ಮೇಲಿಂದ ಮೇಲೆ ಅಪಘಾತಗಳಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ತಿರುವಿನಲ್ಲಿ ರಸ್ತೆ ಸೂಕ್ತವಾಗಿ ಕಾಣಿಸದೆ ಹೊರನಾಡಿಗೆ ಹೋಗುತ್ತಿದ್ದ ಹಾಗೂ ಹೊರನಾಡಿನಿಂದ ಬರುತ್ತಿದ್ದ ಎರಡು ಕಾರುಗಳು ತಿರುವಿನಲ್ಲಿ ಮುಖಾಮುಖಿ ಡಿಕಿಯಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಎರಡು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಳಸ ತಾಲೂಕಿನ ಅನ್ನಪೂರ್ಣೇಶ್ವರಿ ದರ್ಶನಕ್ಕೆ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಶೃಂಗೇರಿ ಶಾರದಾಂಬೆ ದರ್ಶನ ಮುಗಿಸಿಕೊಂಡು ಹೊರನಾಡಿಗೆ ಬರುವವರು ಬೇರೆ ಮಾರ್ಗ ಅನುಸರಿಸುತ್ತಾರೆ. ಆದ್ರೆ, ಹೊರನಾಡಿಗಷ್ಟೆ ಬರುವವರು ಹೆಚ್ಚಾಗಿ ಕೊಟ್ಟಿಗೆಹಾರದಿಂದ ಜಾವಳಿ-ಹಿರೇಬೈಲು-ಕಳಸ ಮೂಲಕ ಹೊರನಾಡು ತಲುಪುತ್ತಾರೆ. ರಾಜ್ಯದ ಯಾವುದೇ ಮೂಲೆಯಿಂದ ಬಂದರೂ ಕೊಟ್ಟಿಗೆಹಾರಕ್ಕೆ ಬಂದು ಜಾವಳಿ-ಕೆಳಗೂರು-ಹಿರೇಬೈಲು-ಕಳಸದಿಂದ ಹೊರನಾಡಿಗೆ ಹೋಗುತ್ತಾರೆ. ಆದರೆ, ಕೊಟ್ಟಿಗೆಹಾರದಿಂದ ಕಳಸದವರೆಗೂ ಹಾವು-ಬಳುಕಿನ ಮೈಕಟ್ಟಿನ ಗಾಡ್ ಸೆಕ್ಷನ್ ರಸ್ತೆಯಿದ್ದು ರಸ್ತೆ ಇಕ್ಕೆಲಗಳ ಮರಗಿಡಗಳು ಹುಲುಸಾಗಿ ಬೆಳೆದು ನಿಂತಿದೆ. ರಸ್ತೆ ಸಮರ್ಪಕವಾಗಿ ಕಾಣಿಸಿದೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ಸ್ಥಳಿಯರು ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ. ಇದೀಗ, ನವರಾತ್ರಿಯ ಸಮಯ ನಿತ್ಯ ಹಗಲು-ರಾತ್ರಿ ಎನ್ನದೆ ನೂರಾರು ವಾಹನಗಳ ಓಡಾಟವಿರುತ್ತೆ. ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಬದಿಯ ಮರಗಿಡಗಳಲ್ಲಿ ಹುಲುಸಾಗಿ ಬೆಳೆದಿರುವ ಜಂಗಲ್‍ಗಳನ್ನ ಕಡಿಸಬೇಕಿದೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಈ ರೀತಿಯ ಅಪಘಾತಗಳು ಹೆಚ್ಚಾದರೂ ಆಗಬಹುದು. ಸ್ಥಳಿಯರಿಗೆ ಹಾಗೂ ಪೊಲೀಸರಿಗೆ ವಾಹನ ಸವಾರರ ಜಗಳ, ಟ್ರಾಫಿಕ್ ಕ್ಲಿಯರ್ ಮಾಡೋದೆ ಒಂದು ಕೆಸಲವಾಗೋದು ಖಂಡಿತ. ಹಾಗಾಗಿ, ಕೂಡಲೇ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ಪ್ರವಾಸಿ ಹಾಗೂ ಭಕ್ತರ ವಾಹನಳಿಗೆ ಯಾವುದೇ ತೊಂದರೆಯಾಗಂತೆ ಮರಗಿಡಗಳನ್ನ ತೆರವು ಮಾಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು