ಇತ್ತೀಚಿನ ಸುದ್ದಿ
ರಾಜ್ಯ ನಿಗಮ- ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ: ಮಣಿರಾಜ ಶೆಟ್ಟಿಗೆ ಮತ್ತೆ ಅಧ್ಯಕ್ಷ ಸ್ಥಾನ
26/07/2022, 10:55

ಬೆಂಗಳೂರು(reporterkarnataka.com):
20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ರಾಜ್ಯ ಸರಕಾರ ಆದೇಶವನ್ನು ಹೊರಡಿಸಿದ್ದು, ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಸೇರಿದಂತೆ ರಘು ಕೌಟಿಲ್ಯಅವರಿಗೆ ಮತ್ತೆ ಅಧ್ಯಕ್ಷ ಸ್ಥಾನ ದೊರೆತಿದೆ.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ -ಎಂ. ಶರವಣ ಕರಕುಶಲ ಅಭಿವೃದ್ಧಿ ನಿಗಮ -ಮಾರುತಿ ಮಲ್ಲಪ್ಪ ಅಷ್ಟಗಿ, ಕಾಡಾ -ತುಂಗಭದ್ರಾ ಯೋಜನೆ -ಕೊಲ್ಲಾಶೇಷಗಿರಿ ರಾವ್, ಕಾಡಾ -ಕಾವೇರಿ ಜಲಾನಯನ ಯೋಜನೆ -ಜಿ ನಿಜಗುಣರಾಜು,ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ -ಕೆ.ವಿ. ನಾಗರಾಜ, ಮದ್ಯಪಾನ ಸಂಯಮ ಮಂಡಳಿ -ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ, ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ -ದೇವೇಂದ್ರನಾಥ್, ಕಾಡುಗೊಲ್ಲ ಅಭಿವೃದ್ಧಿ ನಿಗಮ -ಚಂಗಾವರ ಮಾರಣ್ಣ, ರಾಜ್ಯ ಮಾವು ಅಭಿವೃದ್ಧಿ ನಿಗಮ -ಎಂ.ಕೆ. ವಾಸುದೇವ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ -ಎಂ.ಕೆ. ಶ್ರೀನಿವಾಸ್, ದ್ರಾಕ್ಷಿ ಮತ್ತು ವೈನ್ ಬೋರ್ಡ್ -ಎಂ. ರವಿನಾರಾಯಣ ರೆಡ್ಡಿ, ರೇಷ್ಮೆ ಮಾರಾಟ ಮಂಡಳಿ -ಬಿ.ಸಿ. ನಾರಾಯಣಸ್ವಾಮಿ, ಲಿಂಬೆ ಅಭಿವೃದ್ಧಿ ಮಂಡಳಿ -ಚಂದ್ರಶೇಖರ ಕವಟಗಿ, ರಾಜ್ಯ ಗೇರು ಅಭಿವೃದ್ಧಿ ನಿಗಮ -ಮಣಿರಾಜ ಶೆಟ್ಟಿ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ -ಗೋವಿಂದ ಜಟ್ಟಪ್ಪ ನಾಯಕ, ಮೈಸೂರು ಮೃಗಾಲಯ ಪ್ರಾಧಿಕಾರ -ಎಂ. ಶಿವಕುಮಾರ್, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ – ಎನ್. ರೇವಣಪ್ಪ ಕೊಳಗಿ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ- ಕೆ.ಪಿ. ವೆಂಕಟೇಶ್ ನೇಮಕ ಮಾಡಿದೆ.