ಇತ್ತೀಚಿನ ಸುದ್ದಿ
ಭಾರತದಲ್ಲಿ ವಿದ್ಯಾರ್ಥಿಗಳ ಸಾಧನೆ ಸಂಭ್ರಮಿಸುವ ಪಿವಿಐ 3ನೇ ಘಟಿಕೋತ್ಸವ
21/02/2026, 19:19
ಬೆಂಗಳೂರು(reporterkarnataka.com): ಪಿವಿಐ ಎಂದು ಪ್ರೀತಿಯಿಂದ ಕರೆಯಲ್ಪಡುವ ಪ್ರಾಕ್ರಮಿಕಾ ವೃತ್ತಿಪರ ಸಂಸ್ಥೆಯು, ಯಲಹಂಕದ ಉತ್ತರ ಬೆಂಗಳೂರಿನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ಬ್ಯಾಚ್ಗಾಗಿ ತನ್ನ ಮೂರನೇ ಘಟಿಕೋತ್ಸವವನ್ನು ಆಯೋಜಿಸಿತ್ತು.
ಈ ಅಪೂರ್ವ ಮುಂಜಾನೆ ಘನತೆ, ಫಲಿತಾಂಶ ಮತ್ತು ನೈಜ ಜಗತ್ತಿನ ಸರ್ವಸನ್ನದ್ಧತೆಯನ್ನು ಬಿಂಬಿಸುವ ಕಲಿಕಾರ್ಥಿಗಳು, ಕುಟುಂಬಗಳು, ಶಿಕ್ಷಣತಜ್ಞರು, ಉದ್ಯೋಗಿಗಳು ಮತ್ತು ಸಮುದಾಯ ಪಾಲುದಾರರನ್ನು ಒಂದೆಡೆ ಸೇರಿಸಿತು.
ಒಂದು ವರ್ಷ ಮತ್ತು ಎರಡು ವರ್ಷಗಳ ಕಲಿಕೆ ಮತ್ತು ವೈಯಕ್ತಿಕ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಕಲಿಕಾರ್ಥಿಗಳಿಗೆ ಔಪಚಾರಿಕ ಪದವಿ ಪ್ರದಾನ ಸಮಾರಂಭ, ವಿಶೇಷ ಅತಿಥಿಗಳ ಸ್ಪೂರ್ತಿದಾಯಕ ಭಾಷಣಗಳು ಮತ್ತು ಪಿವಿಐನ ಸೇರ್ಪಡೆಗಾಗಿ ಪ್ರತಿಜ್ಞೆಯ ಮೂಲಕ ಸಾಮೂಹಿಕ ಕ್ರಮಕ್ಕಾಗಿ ಬಲವಾದ ಸಂದೇಶ ಕಾರ್ಯಕ್ರಮದ ವಿಶೇಷವಾಗಿತ್ತು.
“ಮೆಗಾ ಕನಸಿನ ಯೋಜನೆ”ಯಾಗಿ ಪ್ರಸ್ತುತಪಡಿಸಲಾದ ಮತ್ತು ವಿಶೇಷ ಶಿಕ್ಷಕರು ಮತ್ತು ಸಮಗ್ರ ತರಗತಿ ಕೊಠಡಿಗಳಿಗೆ ಪ್ರಾಯೋಗಿಕ, ರಚನಾತ್ಮಕ ಸಂಪನ್ಮೂಲವಾಗಿ ಇರಿಸಲಾಗಿರುವ “ಬಿಯಾಂಡ್ ದ ಲೇಬಲ್’ ವಿಶೇಷ ಶಾಲೆಗಳಿಗೆ ಉಲ್ಲೇಖ ಮಾರ್ಗದರ್ಶಿ” ಎಂಬ ಕಿರು ಹೊತ್ತಗೆ ಸಮಾರಂಭದ ಮತ್ತೊಂದು ಪ್ರಮುಖ ಅಂಶವಾಗಿತ್ತು. ಪಿವಿಐನ ಸಂಸ್ಥಾಪಕ ನಿರ್ದೇಶಕಿ ಡಾ. ಗಾಯತ್ರಿ ನರಸಿಂಹನ್ ಕೃತಿ ಪರಿಚಯಿಸಿದರು ಮತ್ತು ಕರ್ನಾಟಕ ಸರ್ಕಾರದ ಅಂಗವಿಕಲ ಇಲಾಖೆ ಆಯುಕ್ತ ದಾಸ್ ಸೂರ್ಯವಂಶಿ ಅವರ ಸಮ್ಮುಖದಲ್ಲಿ ಔಪಚಾರಿಕವಾಗಿ ಬಿಡುಗಡೆ ಮಾಡಲಾಯಿತು. ತಿರುವಳ್ಳೂರಿನ ಇಂದಿರಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಸ್ತುತ ಉಪ ಪ್ರಾಂಶುಪಾಲರು ಮತ್ತು ಶರೀರಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿರುವ ಡಾ. ಬೃಂದಾ ವೆಂಕಟರಾಮನ್, ಯಲಹಂಕದ ಶೇಷಾದ್ರಿಪುರಂ ಪ್ರೌಢಶಾಲೆಯ ಅಧ್ಯಕ್ಷರು ಮತ್ತು ತುಮಕೂರು ಶಾಖೆಯ ಶೇಷಾದ್ರಿಪುರಂ ಕಾಲೇಜಿನ ಅಧ್ಯಕ್ಷರು ಮತ್ತು ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್ನ ಶಾಶ್ವತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ್ ಡಬ್ಲ್ಯೂ.ಡಿ, ರಾಷ್ಟ್ರಪತಿಗಳಿಂದ ನಾರಿ ಶಕ್ತಿ ಪುರಸ್ಕಾರ ಪ್ರಶಸ್ತಿ ಪುರಸ್ಕøತೆ ಮತ್ತು ಭಾರತೀಯ ಲೇಖಕಿ, ಐಟಿ ವೃತ್ತಿಪರ ಮತ್ತು ಸ್ವಯಂಸೇವಕಿ ಪುಷ್ಪಾ ಪ್ರಿಯಾ ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿದ್ದರು. ಪುಸ್ತಕ ಬಿಡುಗಡೆ ಸಮಾರಂಭದ ನಂತರ ಪ್ರಕಟಣೆಗೆ ನೆರವಾದ ದಾನಿಗಳು, ಸಚಿತ್ರಕಾರರು, ಮಾರ್ಗದರ್ಶಕರು ಮತ್ತು ಬೆಂಬಲಿಗರನ್ನು ಗೌರವಿಸಲಾಯಿತು.
2015 ರಲ್ಲಿ ಸ್ಥಾಪನೆಯಾದ ಪಿವಿಐ, ಪ್ರಮಾಣೀಕೃತ ಆನ್ಲೈನ್ ಕೌಶಲ್ಯ-ಅಭಿವೃದ್ಧಿ, ಕಲಿಕಾರ್ಥಿಗಳ ಬೆಂಬಲ ಮತ್ತು ಇಂಟರ್ನ್ಶಿಪ್ಗಳು ಹಾಗೂ ಉದ್ಯೋಗಗಳಿಗೆ ಮಾರ್ಗಗಳನ್ನು ಸಂಯೋಜಿಸುವ ಮಾದರಿಯನ್ನು ನಿರ್ಮಿಸಿದೆ. ಶಿಕ್ಷಕರು, ಶಿಕ್ಷಕರು, ಪೋಷಕರು ಮತ್ತು ಆರೈಕೆದಾರರಿಗೆ ತರಬೇತಿ ನೀಡುವ ಮೂಲಕ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಪಿವಿಐನ ಕಾರ್ಯಕ್ಷೇತ್ರ ಭೌಗೋಳಿಕವಾಗಿ ವಿಸ್ತರಿಸುತ್ತಾ ಬಂದಿದೆ. ಇದರಲ್ಲಿ ಅಮೆರಿಕದ ಭಾರತೀಯ ವಲಸೆಗಾರರೊಂದಿಗೆ ತೊಡಗಿಸಿಕೊಳ್ಳುವಿಕೆ, ಜಾಗತಿಕ, ಸಮುದಾಯ ಚಾಲಿತ ಪ್ರಯತ್ನವಾಗಿ ಸೇರ್ಪಡೆಯ ದೃಷ್ಟಿಕೋನವನ್ನು ಬಲಪಡಿಸುವುದು ಸೇರಿದೆ.


ದೀಪ ಬೆಳಗುವುದು, ಪ್ರಾರ್ಥನೆ, ಪ್ರದರ್ಶನಗಳು, ಸ್ವಾಗತ ಮತ್ತು ಮುಖ್ಯ ಭಾಷಣಗಳು, ಪ್ರತಿಜ್ಞೆ ಬಿಡುಗಡೆ, ಪುಸ್ತಕ ಬಿಡುಗಡೆ ಮತ್ತು ಕಲಿಕಾರ್ಥಿಗಳ ಪದವಿ ಮತ್ತು ಸನ್ಮಾನ ಹೀಗೆ ಆಕರ್ಷಕ ಕ್ಷಣಗಳಿಗೆ ಕಾರ್ಯಕ್ರಮ ಸಾಕ್ಷಿಯಾಯಿತು. ಸೇರ್ಪಡೆಯು ವೈಯಕ್ತಿಕ ಕ್ರಿಯೆ ಮಾತ್ರವಾಗಿರದೇ ಹಂಚಿಕೆಯ ಜವಾಬ್ದಾರಿಯೂ ಹೌದು ಎನ್ನುವ ಸಂದೇಶವನ್ನು ಪಿವಿಐ ಪ್ರತಿಜ್ಞೆ ಬಿಂಬಿಸಿತು. “ಇಡೀ ಪಿವಿಐ ಕುಟುಂಬದಿಂದ ಧ್ವನಿಮುದ್ರಿಸಲ್ಪಟ್ಟ” ಪ್ರತಿಜ್ಞೆ ವೀಡಿಯೊವು ಪ್ರತಿಯೊಬ್ಬ ಭಾಗವಹಿಸುವವರನ್ನು ಸಭಾಂಗಣವನ್ನು ಮೀರಿ ಮತ್ತು ದೈನಂದಿನ ಜೀವನಕ್ಕೆ ಬದ್ಧತೆಯನ್ನು ಸಾಗಿಸಲು ಆಹ್ವಾನಿಸಿತು.
ಪದವಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಸಮಾರಂಭದ ಜೊತೆಗೆ, ಕಲಿಕೆಯನ್ನು ಜೀವನೋಪಾಯಕ್ಕೆ ಸಂಪರ್ಕಿಸುವ ಸಂವಾದಗಳನ್ನು ಸಹ ಈ ಕಾರ್ಯಕ್ರಮ ಒಳಗೊಂಡಿತ್ತು. “ಸಬಲೀಕರಣ ಸಾಮಥ್ರ್ಯ: ಪ್ರತಿಭಾ ಅಭಿವರ್ಧಕರು ಮತ್ತು ಒಳಗೊಳ್ಳುವ ಉದ್ಯೋಗದಾತರ ನಡುವಿನ ಸಂವಾದ” ಎಂಬ ಶೀರ್ಷಿಕೆಯ ಗುಂಪುಚರ್ಚೆಯು ತರಬೇತಿ ಸಂಸ್ಥೆಗಳು ಮತ್ತು ಕಾರ್ಯಕ್ಷೇತ್ರಗಳು ಕೌಶಲ್ಯಗಳಿಂದ ಅರ್ಥಪೂರ್ಣ ವೃತ್ತಿಜೀವನಕ್ಕೆ ಹೇಗೆ ಮಾರ್ಗಗಳನ್ನು ಸಹ ಸೃಷ್ಟಿಸಬಹುದು ಎಂಬುದನ್ನು ಅನ್ವೇಷಿಸಿತು. ಅಧಿವೇಶನವನ್ನು ಶ್ರೀಮತಿ ರಶ್ಮಿ ಸೂದ್ ಆನಂದ್ ನಿರ್ವಹಿಸಿದರು ಮತ್ತು ಲಹರಿ (ಸೇರ್ಪಡೆ ನೇಮಕಾತಿ, ವಿಶೇಷ ಸೌಲಭ್ಯ ವಿಭಾಗದ ಮುಖ್ಯಸ್ಥರು) ಮತ್ತು ಅರ್ಚನಾ ಜಿ ಎಸ್ (ಮುಖ್ಯಸ್ಥರು, ಆಟಿಸಂ ಅಟ್ ವರ್ಕ್ ಪೆÇ್ರೀಗ್ರಾಂ, ಎಸ್ಎಪಿ ಲ್ಯಾಬ್ಸ್ ಇಂಡಿಯಾ) ಅವರು ಭಾಗವಹಿಸಿದ್ದರು. ಸೇರ್ಪಡೆಯಾದವರ ನೇಮಕಾತಿ, ಕೆಲಸದ ಸ್ಥಳ ವಿನ್ಯಾಸ ಮತ್ತು ದೀರ್ಘಾವಧಿಯ ವೃತ್ತಿ ಸಕ್ರಿಯಗೊಳಿಸುವಿಕೆಯಿಂದ ದೃಷ್ಟಿಕೋನಗಳನ್ನು ಒದಗಿಸಿತು.












