9:42 PM Tuesday22 - April 2025
ಬ್ರೇಕಿಂಗ್ ನ್ಯೂಸ್
ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ…

ಇತ್ತೀಚಿನ ಸುದ್ದಿ

ಪುಟಾಣಿಗಳಿಂದಲೇ ಮಕರ ಸಂಕ್ರಮಣ ಆಚರಣೆ: ಶುಭ ಕೋರಿ ಸಾರ್ವಜನಿಕರ ಮನಗೆದ್ದ ಜಾಣೆಯರು

16/01/2022, 17:10

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀಪೇಟೆಬಸವೇಶ್ವರ ನಗರದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು, ಮಕ್ಕಳು ತುಂಬಾ ವಿಶಿಷ್ಟವಾಗಿ ಆಚರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರ‍ಾಗಿದ್ದಾರೆ.


ಬೆಳ್ಳಂಬೆಳಿಗ್ಗೆ ದೈನಂದಿನ ಕಾರ್ಯಗಳನ್ನು ಪೂರೈಸಿ ಶುಭ್ರವಾದ ಧಿರಿಸುಗಳನ್ನು ಧರಿಸಿದ ಮಕ್ಕಳು,ತಮ್ಮ ತಮ್ಮ ಮನೆಗಳಿಂದ ಸಕ್ಕರೆ ಉರಿದ ಕಡಲೆ ಹಾಗೂ ಎಳ್ಳು ಮಿಶ್ರಿತ ಅಥವಾ ಬೆಲ್ಲ ಎಳ್ಳು ಹಾಗೂ ಉರಿದಕಡಲೆ ಮಿಶ್ರಿತ ಪಾದಾರ್ಥವನ್ನು.ಬಟ್ಟಲಿನಲ್ಲಿ ತುಂಬಿಕೊಂಡು ಮನೆ ಮನೆಗೆ ತೆರಳಿ ಮೆನೆಯ ಮಂದಿಗೆಲ್ಲ ಸಿಹಿ ಹಂಚಿದ್ದಾರೆ. ಈ ಮೂಲಕ ಮಕ್ಕಳು ಸಾಮೂಹಿಕವಾಗಿ ಸಿಹಿ ಹಂಚಿ ಸರ್ವರಿಗೂ ಶುಭಕೋರಿದ್ದಾರೆ. ಶ್ರಿಪೇಟೆಬಸವೇಶ್ವರ ನಗರದ ಮಕ್ಕಳು ಈ ಮೂಲಕ ಪಟ್ಟಣದೆಲ್ಲೆಡೆಗಳಲ್ಲಿ, ಮಕರ ಸಂಕ್ರಾಂತಿ  ಸಿಹಿಯನ್ನು ಹಂಚುವ ಮೂಲಕ ಸರ್ವರಿಗೂ ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದ್ದಾರೆ. ಗಲ್ಲಿಯ ಮಕ್ಕಳು ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳೋದರ ಮೂಲಕ ಪರಸ್ಪರ ಶುಭಕೋರಿ ಸೌಹಾರ್ಧತೆ ಮೆರೆದರು. ತಾವು ಮನೆಯಿಂದ ತಯಾರಿಸಿಕೊಂಡು ತಂದಿದ್ದ ಸಿಹಿಯನ್ನು ಎಲ್ಲರೂ ಒಟ್ಟಾಗಿ ಗಲ್ಲಿಯ ಪ್ರತಿಯೊಂದು ಮನೆ ಮನೆಗೆ ತೆರಳಿ ಸಿಹಿ ಹಂಚಿ ಶುಭ ಕೋರಿದ್ದಾರೆ. ದಾರಿಯಲ್ಲಿ ಎದುರಾದ ಪ್ರತಿಯೊಬ್ಬ ರಿಗೂ ಸಿಹಿ  ಸಂಕ್ರಾಂತಿ ಶುಭ ಕೋರಿ ವೈಶಿಷ್ಟ್ಯತೆ ಮೆರೆದರು.ಈ ಮೂಲಕ ಮಕ್ಕಳು ಪಟ್ಟಣ ಮಾತ್ರವಲ್ಲ,ತಾಲೂಕಿನ ಮಾಡಿನ ಸಮಸ್ತ ಯುವಪೀಳಿಗೆಗೆ ಮಾದರಿಯಾಗಿದದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು