10:32 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ಪ್ರತಿಷ್ಠಿತ ಸಂದೇಶ ಪ್ರಶಸ್ತಿ ಫೆ. 22ರಂದು ಪ್ರದಾನ: ಸಾಹಿತಿ ಬರಗೂರು, ಡಾ. ಟಿ.ಸಿ. ಪೂರ್ಣಿಮಾ ಸಹಿತ 14 ಮಂದಿ ಆಯ್ಕೆ; ಪತ್ರಿಕೆ ಹಾಗೂ ಸಂಘಟನೆಗೂ ಪುರಸ್ಕಾರ

11/02/2022, 12:00

ಮಂಗಳೂರು(reporterkarnataka.com);

ಮಂಗಳೂರಿನ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಸಾಹಿತ್ಯ, ಶಿಕ್ಷಣ, ಮಾಧ್ಯಮ, ಕಲೆ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಘಟನೆಗಳಿಗೆ ನೀಡುವ ವಾರ್ಷಿಕ 2020-21 ಮತ್ತು 2021-22ನೇ ಸಾಲಿನ ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿಗೆ ಸಾಧಕರು, ಒಂದು ಸಂಘಟನೆ ಮತ್ತು ಒಂದು ಪತ್ರಿಕೆಯನ್ನು ಆಯ್ಕೆ ಮಾಡಿದೆ.

ಸಂದೇಶ ಪ್ರತಿಷ್ಠಾನದ ವಿಶ್ವಸ್ಥ ರೊಯ್‌ ಕ್ಯಾಸ್ತಲಿನೊ ಪತ್ರಿಕಾಗೊಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಸಾಹಿತ್ಯ ಪ್ರಶಸ್ತಿ: ಕನ್ನಡ- ಬರಗೂರು ರಾಮಚಂದ್ರಪ್ಪ (ತುಮಕೂರು), ಕೊಂಕಣಿ- ಅಮರ್‌ ಕೊಂಕಣಿ (ಮಂಗಳೂರು ಸಂತ ಅಲೋಶಿಯಸ್‌ ಕಾಲೇಜಿನ ಕೊಂಕಣಿ ಸಂಸ್ಥೆ ವತಿಯಿಂದ ಆರಂಭವಾದ ಪತ್ರಿಕೆ), ತುಳು- ಡಾ. ಸುನಿತಾ ಎಂ. ಶೆಟ್ಟಿ (ದಕ್ಷಿಣ ಕನ್ನಡ), ಮಾಧ್ಯಮ ಪ್ರಶಸ್ತಿ- ನಾಗೇಶ ಹೆಗಡೆ (ಉತ್ತರ ಕನ್ನಡ), ಕೊಂಕಣಿ ಸಂಗೀತ ಪ್ರಶಸ್ತಿ-ಮೀನ ರೆಬಿಂಬಸ್‌ (ದ.ಕ.), ಕಲಾ ಪ್ರಶಸ್ತಿ- ಅವಿತಾಸ್‌ ಎಡೋಲಸ್‌ ಕುಟಿನ್ಹಾ (ದ.ಕ.), ಶಿಕ್ಷಣ ಪ್ರಶಸ್ತಿ- 

ಡಾ. ಲಕ್ಷ್ಮಣ್‌ ಸಾಬ್‌ ಚೌರಿ (ಬಾಗಲಕೋಟೆ) ವಿಶೇಷ ಪ್ರಶಸ್ತಿ- ಸಮರ್ಥನಂ ಟ್ರಸ್ಟ್‌ (ಬೆಂಗಳೂರು) 2021ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಾಹಿತ್ಯ ಪ್ರಶಸ್ತಿ: ಕನ್ನಡ – ರಹ್ಮತ್‌ ತರೀಕೆರೆ (ಚಿಕ್ಕಮಗಳೂರು), ಕೊಂಕಣಿ – ಮೆಲ್ವಿನ್‌ ರಾಡ್ರಿಗಸ್‌ (ದ.ಕ.), ತುಳು- ಬಿ.ಕೆ. ಗಂಗಾಧರ್‌ ಕಿರೋಡಿಯನ್‌ (ದ.ಕ.), ಮಾಧ್ಯಮ ಪ್ರಶಸ್ತಿ- 

ಡಾ. ಟಿ.ಸಿ. ಪೂರ್ಣಿಮಾ ( ಮೈಸೂರು), ಕೊಂಕಣಿ ಸಂಗೀತ ಪ್ರಶಸ್ತಿ- ಆಲ್ವಿನ್‌ ನೊರೊನ್ಹಾ (ದ.ಕ.), ಕಲಾ ಪ್ರಶಸ್ತಿ- ಕಾಸರಗೋಡು ಚಿನ್ನಾ (ಕಾಸರಗೋಡು), ಶಿಕ್ಷಣ ಪ್ರಶಸ್ತಿ- ಡಾ. ಪಿ.ಕೆ. ರಾಜಶೇಖರ್‌ (ಮೈಸೂರು), ವಿಶೇಷ ಪ್ರಶಸ್ತಿ- ಸ. ರಘುನಾಥ್‌ (ಚಿಕ್ಕಬಳ್ಳಾಪುರ) 2022ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರಿಗೆ ಫೆಬ್ರವರಿ 22ರ ಸಂಜೆ 4.30 ಕ್ಕೆ ಸಂದೇಶ ಪ್ರತಿಷ್ಠಾನ ಆವರಣ ತುಮಕೂರು ಮಂಗಳೂರು ಇಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ವಲೇರಿಯನ್‌ ರಾಡ್ರಿಗಸ್‌ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ. ಬಿ.ಎಸ್‌. ತಲ್ವಾಡಿ, 

ಡಾ. ನಾ.ದಾ.ಶೆಟ್ಟಿ, ಕೊನ್‌ಸೆಪಾr ಆಳ್ವ, ಚಂದ್ರಕಲಾ ನಂದಾವರ ಮತ್ತು ಮೊಹಮ್ಮದ್‌ ಬಡೂರು ಸದಸ್ಯರಾಗಿದ್ದಾರೆ. ಪ್ರತಿಷ್ಠಾನದ ನಿರ್ದೇಶಕ ಫಾ| ಫ್ರಾನ್ಸಿಸ್‌ ಅಸ್ಸಿಸಿ ಅಲ್ಮೆಡಾ, ಮ್ಯಾನೇಜರ್‌ ಸೈಮನ್‌ ಡಿ’ಸೋಜಾ ಉಪಸ್ಥಿತರಿದ್ದರು.                    

ಇತ್ತೀಚಿನ ಸುದ್ದಿ

ಜಾಹೀರಾತು