10:25 PM Thursday26 - March 2026
ಬ್ರೇಕಿಂಗ್ ನ್ಯೂಸ್
ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ… ಲ್ಯಾಂಬೊರ್ಗಿನಿ ಕಾರು ಗಿರಿಗಿಟ್ಲೆ ಹೊಡೆಸಿದ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ,… ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌… ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆ ಕೋರಿ ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್…

ಇತ್ತೀಚಿನ ಸುದ್ದಿ

ಪೊಲೀಸ್ ಠಾಣೆಗಳಲ್ಲಿ ಸಿಸಿ ಕ್ಯಾಮೆರಾ, ಬಯೋಮೆಟ್ರಿಕ್ ಅಳವಡಿಕೆಗೆ ಜಿಲ್ಲಾಧಿಕಾರಿಗೆ ಮನವಿ

13/07/2024, 16:52

*ಪೊಲೀಸ್ ಠಾಣೆಗಳಲ್ಲಿ ಅಕ್ರಮ ತಡೆಯಲು ಉಮೇಶ್ ಮುದ್ನಾಳ್ ಡಿಸಿಗೆ ದೂರು*

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmail.com

ಯಾದಗಿರಿ ಗ್ರಾಮೀಣ ಹಾಗೂ ವಡಗೇರಾ ಪೊಲೀಸ್ ಠಾಣೆಯಲ್ಲಿ ಸಿಸಿ ಕ್ಯಾಮೆರಾ ಹಾಗೂ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮೀಣ ಹಾಗೂ ವಡಗೇರಾ ಪೊಲೀಸ್ ಠಾಣೆಯಲ್ಲಿ ಅಕ್ರಮ ಹೆಚ್ಚಾಗಿವೆ ಎಂಬ ಆರೋಪ ನಿತ್ಯ ಕೇಳಿ ಬರುತ್ತಿವೆ. ಈ ಎರಡು ಠಾಣೆಗೆ ದೂರು ಕೊಡಲು ಬರುವ ಗ್ರಾಮೀಣ ಮುಗ್ದ ಜನರಿಗೆ ಪೊಲೀಸರು ಶೋಷಣೆ ಮಾಡ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ದೂರು ನೀಡಲು ಹೋದ ಸಾರ್ವಜನಿಕರಿಗೆ ಮೊಬೈಲ್ ಒಳಗಡೆ ತರುವಂತಿಲ್ಲ ಎಂವ ಅಲಿಖಿತ ಹೇರುತ್ತಿದ್ದಾರೆ. ದೂರು ನೀಡಲು ಹೋದವರ ಬಳಿಯೇ ಹಣ ಪಡೆಯಿತ್ತಿದ್ದಾರೆ. ಆರೋಪಿಗಳೇ ಪೊಲೀಸರ ಪಾಲಿನ ಪಿರ್ಯಾಧಿದಾರರಾಗಿದ್ದಾರೆ. ಎರಡು ಠಾಣೆಯಲ್ಲಿ ರೌಡಿ ಶೀಟರ್ ಪರೆಡ್ ನಡೆಸಿಲ್ಲ. ಜೊತೆಗೆ ರೌಡಿಗಳ ನಾಮಫಲಕ, ಛಾಯಾಚಿತ್ರ ಫಲಕ ಅಳವಡಿಸಿಲ್ಲ. ಇಂತಹ ಸಮಾಜ ಘಾತುಕರಿಗೆ ಪೊಲೀಸರು ಠಾಣೆಗಳಲ್ಲಿ ರಾಜ ಮರ್ಯಾದೆ ಕೊಡುತ್ತಿದ್ದಾರೆ. ಹೀಗಾಗಿ ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿ ಠಾಣೆಗೆ ಬಂದು ಹೋಗುವವರ ಮೇಲೆ ಮೇಕಾಧಿಕಾರಿಗಳು ನಿಗಾ ಇಡುವಂತೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ವೀರಣ್ಣಗೌಡ್, ಶಾಂತಪ್ಪ ಗೌಡ, ತಿಪ್ಪಣ್ಣ ಕಮದಲ್, ಶರಣು ಅಂಗಡಿ, ಗೋವಿಂದ ಮರಾಠ, ಅಯ್ಯಣ್ಣ ನಟೇಕರ್, ಶೇಖಪ್ಪಮಡಿವಾಳ, ದುರ್ಗಪ್ಪ ತಾತ, ಮಲ್ಲಪ್ಪ ಮೂಸಿ, ನಿಂಗಪ್ಪ ಮೂಸಿ, ಅಯ್ಯಪ್ಪ ನತೀಕರ್, ಪರಶುರಾಮ್ ಛಲವಾದಿ, ಪ್ರಭು, ತಾರಾಸಿಂಗ ಯಲ್ಲಪ್ಪ, ರಾಜು, ಹಣಮಂತ, ಶಿವು, ಸಾಬಣ್ಣ ಮರೆಪ್ಪ, ವಿಶ್ವ ನಾಥ, ಮಹೇಂದ್ರ, ಮರಲಿಂಗ, ಸಿದ್ದುನಾನೇಕ ಸೇರಿದಂತೆ ಅನೇಕರು ಭಾಗವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು