6:17 AM Monday30 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ… ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರಕಾರಿ ಶುಶ್ರೂಷಾ ಕಾಲೇಜು 2ನೇ ಘಟಿಕೋತ್ಸವ ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಇತ್ತೀಚಿನ ಸುದ್ದಿ

ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಿ: ಕೋಲಾರ ಜಿಲ್ಲಾಧಿಕಾರಿ ಕರೆ

10/10/2023, 22:28

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನಗೆ ಅರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಹಾಗೂ ಈ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕನ್ನರೆನ್ಸ್ ಹಾಲ್‌ನಲ್ಲಿ ನಡೆದ ಜಿಲ್ಲಾ ಕೈಗಾರಿಕ ಇಲಾಖೆಯ ಪಿಎಂ ವಿಶ್ವಕರ್ಮ ಯೋಜನೆಯ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಯೋಜನೆಯ ಬಗ್ಗೆ ಪ್ರತಿ ನಗರ ಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಟೋ ಹಾಗೂ ಡಂಗೂರ ಹೊಡಿಸುವ , ಕಸವನ್ನು ಸಂಗ್ರಹಣೆ ಮಾಡುವ ವಾಹನಗಳ ಮೂಲಕ ಜನರಲ್ಲಿ ಹೆಚ್ಚಿನ ಯೋಜನೆಯ ಬಗ್ಗೆ ಅರಿವು ಮೂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು ಹಾಗೂ ಒಂದು ವಾರದ ತನಕ ಪ್ರತಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಸಿ.ಎಸ್.ಆರ್ ಸೆಂಟರ್‌ಗಳನ್ನು ತೆರೆದು ಅರ್ಹ ಫಲಾನುಭವಿಗಳು ಹೆಚ್ಚು ನೋಂದಣಿಯಾಗುವಂತೆ ಮಾಡಬೇಕು.

ಜಿಲ್ಲೆಯಲ್ಲಿ ಸಂಬಂಧಪಟ್ಟ ಸಂಘ – ಸಂಸ್ಥೆಗಳಿಗೆ ಹಾಗೂ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಈ ಯೋಜನೆಯ ನೊಂದಣಿಯಾಗುವಂತೆ ತಿಳಿಹೇಳಬೇಕು ಎಂದು ಹೇಳಿದರು. ಈ ಯೋಜನೆಯ ಫಲಾನುಭವಿಗಳ ನೋಂದಣಿ ಮಾಡುವುದಕ್ಕಾಗಿ ಒಂದು ತಂಡವನ್ನು ಮಾಡಿ , ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು.

ಕೇಂದ್ರ ಸರ್ಕಾರದ ವಿಶ್ವಕರ್ಮ ಜನಾಂಗದವರಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯನ್ನು ತಮ್ಮ ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಕರಕುಶಲಿಗರು ಮತ್ತು ಕುಶಲಕರ್ಮಿಗಳಿಗೆ ಸಂಪೂರ್ಣ ಬೆಂಬಲವನ್ನು ಒದಗಿಸಲು ಪ್ರಧಾನ ಮಂತ್ರಿಯವರು 17 ನೇ ಸೆಪ್ಟೆಂಬರ್ , 2023 ರಂದು ಪ್ರಾರಂಭಿಸಿದರು.

ಈ ಯೋಜನೆಯ 18 ರೀತಿಯ ವ್ಯಾಪಾರಗಳಲ್ಲಿ ತೊಡಗಿರುವ ಕರಕುಶಲಿಗರು ಮತ್ತು ಕುಶಲಕರ್ಮಿಗಳನ್ನು ಒಳಗೊಳ್ಳುತ್ತದೆ. ಅಂದರೆ ಬಡಗಿ , ದೋಣಿ ತಯಾರಕರು , ಕೃಷಿ ಸಲಕರಣೆಗಳು ತಯಾರಿಸುವವರು , ಕಮ್ಮಾರರು , ಸುತ್ತಿಗೆ ಮತ್ತು ಟೂಲ್ ಕಿಟ್ ಮಾಡುವವರು . ಬೀಗ ತಯಾರಿಸುವವರು , ಅಕ್ಕಸಾಲಿಗರು , ಕುಂಬಾರರು , ಶಿಲ್ಪಿಗಳು , ಕಲ್ಲು ಒಡೆಯುವವರು , ಚಮ್ಮಾರರು , ಮೇಸ್ತ್ರಿ , ಬುಟ್ಟಿ / ಚಾಪೆ / ಮೊರಕೆ / ಸೆಣಬು ನೇಯುವವರು , ಸಾಂಪ್ರದಾಯಿಕ ಗೊಂಬೆ ಮತ್ತು ಆಟಿಕೆ ತಯಾರಕರು , ಕ್ಷೌರಿಕರು , ಹೂಮಾಲೆ ತಯಾರಕರು , ಮಡಿವಾಳರು , ಟೈಲರ್ ಮತ್ತು ಮೀನಿನ ಬಲೆಯ ತಯಾರಕರು.

ಈ ಯೋಜನೆಯು ಕುಶಲಕರ್ಮಿಗಳು ಮತ್ತು ಕರಕುಶಲಿಗರಿಗೆ ಗುರುತಿಸುವಿಕೆ : ಪಿ.ಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಐಡಿ ಕಾರ್ಡ್ ಮೂಲಕ ಕುಶಲಕರ್ಮಿಗಳು ಮತ್ತು ಕರಕುಶಲಿಗರನ್ನು ಗುರುತಿಸುವುದು. ಕೌಶಲ್ಯ ಉನ್ನತೀಕರಣ : 5-7 ದಿನಗಳ ಮೂಲಭೂತ ತರಬೇತಿ ಮತ್ತು 15 ದಿನಗಳ ಅಥವಾ ಅದಕ್ಕಿಂತ ಹೆಚ್ಚಿನ ಸುಧಾರಿತ ತರಬೇತಿ ಜೊತೆಗೆ ದಿನಕ್ಕೆ ರೂ .500 ರ ಶಿಷ್ಯವೇತನ , ಟೂಲ್ಕಿಟ್ ಪ್ರೋತ್ಸಾಹ : ರೂ .15000 ವರೆಗಿನ ಟೂಲ್ಕಿಟ್ ಪ್ರೋತ್ಸಾಹ , ಮೂಲಭೂತ ಕೌಶಲ್ಯ ತರಬೇತಿಯ ಆರಂಭದಲ್ಲಿ ಇ – ವೋಚರ್ಗಳ ರೂಪದಲ್ಲಿ ಕೊಡಮಾಡಲಾಗುವುದು.

ಸಾಲದ ನೆರವು : ಭಾರತ ಸರ್ಕಾರದ 8 % ರಷ್ಟು ಸಹಾಯಧನದೊಂದಿಗೆ , ಮೇಲಾಧಾರ ಉಚಿತ ಉದ್ಯಮ ಅಭಿವೃದ್ಧಿ ಸಾಲಗಳು ‘ ರೂ . ಲಕ್ಷದವರೆಗೆ ಎರಡು ಹಂತಗಳಲ್ಲಿ ರೂ .1 ಲಕ್ಷ ಮತ್ತು ರೂ .2 ಲಕ್ಷಕ್ಕೆ ಅನುಕ್ರಮವಾಗಿ 18 ತಿಂಗಳು ಮತ್ತು 30 ತಿಂಗಳುಗಳ ಅವಧಿಯೊಂದಿಗೆ , ರಿಯಾಯಿತಿ ದರದಲ್ಲಿ 5 % ಗೆ ನಿಗಧಿಪಡಿಸಲಾಗಿದೆ.

ಮೂಲ ತರಬೇತಿಯನ್ನು ಪೂರ್ಣಗೊಳಿಸಿದ ಫಲಾನುಭವಿಗಳು ರೂ .1 ಲಕ್ಷದವರೆಗಿನ ಮೊದಲ ಹಂತದ ಸಾಲದ ನೆರವನ್ನು ಪಡೆಯಲು ಅರ್ಹರಾಗಿರುತ್ತಾರೆ . ಎರಡನೇ ಸಾಲದ ಭಾಗವು 1 ನೇ ಕಂತನ್ನು ಪಡೆದುಕೊಂಡ ಮತ್ತು ಪ್ರಮಾಣಿತ ಸಾಲದ ಖಾತೆಯನ್ನು ನಿರ್ವಹಿಸಿದ ಮತ್ತು ತಮ್ಮ ವ್ಯವಹಾರದಲ್ಲಿ ಡಿಜಿಟಲ್ ವಹಿವಾಟುಗಳನ್ನು ಅಳವಡಿಸಿಕೊಂಡ ಅಥವಾ ಸುಧಾರಿತ ತರಬೇತಿ ಪಡೆದ ಫಲಾನುಭವಿಗಳಿಗೆ ಲಭ್ಯವಿರುತ್ತದೆ.

ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹ : ಒಂದು ಮೊತ್ತದ 1 ರೂಪಾಯಿಯನ್ನು ಪ್ರತಿ ಡಿಜಿಟಲ್ ವಹಿವಾಟಿಗೆ ಗರಿಷ್ಠ 100 ವಹಿವಾಟುಗಳವರೆಗೆ ಮಾಸಿಕ ಪ್ರತಿ ಡಿಜಿಟಲ್ ಪೇ – ಔಟ್ ಅಥವಾ ರಸೀದಿಗಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡಲಾಗುತ್ತದೆ . ಮಾರ್ಕೆಟಿಂಗ್ ಬೆಂಬಲ : ಗುಣಮಟ್ಟದ ಪ್ರಮಾಣೀಕರಣ , ಬ್ರಾಂಡಿಂಗ್ , ಇ – ಕಾಮರ್ಸ್ ವೇದಿಕೆಗಳಾದ ಜಿಇಎಂ , ಜಾಹೀರಾತು , ಪ್ರಚಾರ ಮತ್ತು ಇತರ ಮಾರ್ಕೆಟಿಂಗ್ ಚಟುವಟಿಕೆಗಳಲ್ಲಿ ಮೌಲ್ಯ ಸರಪಳಿಗೆ ಸಂಪರ್ಕವನ್ನು ಸುಧಾರಿಸಲು ಕುಶಲಕರ್ಮಿಗಳು ಮತ್ತು ಕರಕುಶಲಿಗರಿಗೆ ಮಾರ್ಕೆಟಿಂಗ್ ಬೆಂಬಲವನ್ನು ಒದಗಿಸಲಾಗುತ್ತದೆ.

ಮೇಲೆ ತಿಳಿಸಿದ ಪ್ರಯೋಜನಗಳ ಜೊತೆಗೆ , ಔಪಚಾರಿಕ ಅತಿ ಸಣ್ಣ , ಸಣ್ಣ ಮತ್ತು ಮಾಧ್ಯಮ ಉದ್ಯಮಗಳ ವ್ಯವಸ್ಥೆಯಲ್ಲಿ ‘ ಉದ್ಯಮಿಗಳನ್ನಾಗಿ ‘ ಉದ್ಯಮ್ ಅಸಿಸ್ಟ್ ಪ್ಲಾಟ್ಟಾರಂ’ನಲ್ಲಿ ಫಲಾನುಭವಿಗಳನ್ನು ಯೋಜನೆಯು ಸೇರಿಸುತ್ತದೆ . ಪಿಎಂ ವಿಶ್ವಕರ್ಮ ಪೋರ್ಟಲ್‌ನಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಫಲಾನುಭವಿಗಳ ನೋಂದಣಿಯನ್ನು ಮಾಡಲಾಗುತ್ತದೆ .

ಫಲಾನುಭವಿಗಳ ದಾಖಲಾತಿಯು ಮೂರು – ಹಂತದ ಪರಿಶೀಲನೆಯನ್ನು ಅನುಸರಿಸುತ್ತದೆ . ಇದರಲ್ಲಿ ಗ್ರಾಮ ಪಂಚಾಯತ್ /ಯುಎಲ್ಬಿ ಮಟ್ಟದಲ್ಲಿ ಪರಿಶೀಲನೆ , ಜಿಲ್ಲಾ ಅನುಷ್ಠಾನ ಸಮಿತಿಯ ಪರಿಶೀಲನೆ ಮತ್ತು ಶಿಫಾರಸು , ಪರಿಶೀಲನಾ ಸಮಿತಿ ( ನಿಂಗ್ ಕಮಿಟಿ ) ಯಿಂದ ಅನುಮೋದನೆ .

ಹೆಚ್ಚಿನ ಮಾಹಿತಿಗಾಗಿ ಪಿಎಂ ವಿಶ್ವಕರ್ಮದ ಮಾರ್ಗಸೂಚಿಗಳನ್ನು pmvishwakarma.gov.in ನಲ್ಲಿ ಕಾಣಬಹುದು . ಯಾವುದೇ ಪ್ರಶ್ನೆಗಳಿಗೆ , ಕುಶಲಕರ್ಮಿಗಳು ಮತ್ತು ಕರಕುಶಲಿಗರು 18002677777 ಕ್ಕೆ ಕರೆ ಮಾಡಬಹುದು ಅಥವಾ http : //pm-vishwakarma@dcmsme.gov.in ಗೆ ಇ – ಮೇಲ್ ಮಾಡಬಹುದು ಕೇಂದ್ರ ಸರ್ಕಾರದ ಈ ಯೋಜನೆಯನ್ನು ವಿಶ್ವಕರ್ಮ ಜನಾಂಗದವರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ .

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ , ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರೂಪದೇವಿ , ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ . ಜಗದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು