ಇತ್ತೀಚಿನ ಸುದ್ದಿ
ಪಿಎಫ್ ಐ ನಿಷೇಧ ಮಾಡಿಯೆಂದು ಯು.ಟಿ.ಖಾದರ್ ಕಣ್ಣೀರು ಹಾಕ್ತಾ ಇದ್ದರೆಂಬ ನಳಿನ್ ಹೇಳಿಕೆಗೆ ಪ್ರತಿಪಕ್ಷ ಉಪ ನಾಯಕ ಏನು ಹೇಳಿದರು ಗೊತ್ತೆ?
28/09/2022, 20:16

ಮಂಗಳೂರು(reporterkarnataka.com):ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜಕಾರಣದಲ್ಲಿ ಗಾಳಿಯಲ್ಲಿ ಗುಂಡು ಹೊಡೆದು ವಿಕೃತ ಖುಷಿ ತಗೊಳ್ಳುವ ವಿಚಾರದಲ್ಲಿ ಅತ್ಯಂತ ಹೆಸರುವಾಸಿ. ಸುಳ್ಳು ಹೇಳೋದು, ಆಮೇಲೆ ಸುಳ್ಳಿನ ಮೇಲೆ ರಾಜಕಾರಣ ಮಾಡೋದು. ಇದು ವಿಘ್ನ ಸಂತೋಷಿಗಳ ಲಕ್ಷಣ. ಸುಳ್ಳು ಹೇಳೋದ್ರಲ್ಲಿ ನಳಿನ್ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಹೇಳಿದರು.
ನಳಿನ್ ನ ಮುಂದೆ ಕಣ್ಣೀರು ಹಾಕುವ ಅವಶ್ಯಕತೆ ನನಗಿಲ್ಲ. ಅಂಥಹ ಅವಶ್ಯಕತೆ ಇನ್ನು ಮುಂದಕ್ಕೂ ಕೂಡಾ ಬರುವುದೂ ಇಲ್ಲ. ತಾನು ಮಾಡಿದ ಕೆಲಸವನ್ನು ನಾನೇ ಮಾಡಿದ್ದು ಎಂದು ಹೇಳುವಷ್ಟು ಸಾಮರ್ಥ್ಯ, ಧೈರ್ಯವಿಲ್ಲದವರು ಈ ರೀತಿಯ ಅಪಾದನೆ ಮಾಡುವುದು ಸಹಜ. ನಿಮಗೆ ನಿಜವಾದ ದೇಶಭಕ್ತಿಯಿದ್ದಲ್ಲಿ, ಧರ್ಮದ ಆಧಾರದಲ್ಲಿ ವಿಷ ಬೀಜ ಬಿತ್ತಿ ಸಮಾಜ ಸ್ವಾಸ್ಥ್ಯ ಕೆಡಿಸುವ, ಭಾರತದ ಶ್ರೇಷ್ಠ ಸಂವಿಧಾನವನ್ನು ವಿರೋಧಿಸಿ ಕಾನೂನು ಕೈಗೆತ್ತಿಕೊಳ್ಳುವ ಎಲ್ಲಾ ಸಂಘಟನೆಗಳನ್ನೂ ನಿಷೇಧ ಮಾಡಿಯೆಂದು ಕಟೀಲು ಅವರಿಗೆ ಖಾದರ್ ಸಲಹೆ ನೀಡಿದರು.