10:25 PM Saturday6 - December 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ: ಆಕಸ್ಮಿಕ ಗುಂಡಿನ ಚೂರು ತಗುಲಿ ಇಬ್ಬರು ಯುವಕರಿಗೆ ಗಾಯ ರಾಷ್ಟ್ರವ್ಯಾಪಿ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಸಚಿವ ಡಾ. ಶರಣಪ್ರಕಾಶ್‌ ಒತ್ತಾಯ ಸೌರಶಕ್ತಿಗೆ 3ನೇ ಅತಿದೊಡ್ಡ ಕೊಡುಗೆದಾರ ಭಾರತ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Shivamogga | ಬಸ್ ಚಾಲಕನ ಅತೀ ವೇಗ, ಅಜಾಗರೂಕತೆ: ಬೈಕ್ ಸವಾರ ಗಂಭೀರ ತೋಟಕ್ಕೆ ತೆರಳಿದ್ದ ಸಂದರ್ಭ ಏಕಾಏಕಿ ಹೆಜ್ಜೇನು ದಾಳಿ: ಮಹಿಳೆ ಸಹಿತ 3 ಮಂದಿಗೆ… ವಿರಾಜಪೇಟೆ | ಕ್ಷುಲ್ಲಕ ಕಾರಣ: ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲಿ ಯುವಕರ ಮಾರಮಾರಿ..!! “ಸ್ವಸ್ಥ ಮೈಸೂರು” ಅಭಿಯಾನ ಒಪ್ಪಂದಕ್ಕೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸಹಿ New Delhi | ಬೆಳ್ಳಿ ವಸ್ತು, ಆಭರಣಗಳಿಗಿನ್ನು BIS ಹಾಲ್‌ಮಾರ್ಕ್‌, HUID ಕಡ್ಡಾಯ ರಾಜ್ಯ ಸರಕಾರ ಅನ್ನದಾತ ರೈತನ ಬಗ್ಗೆ ಕಾಳಜಿ ವಹಿಸುತ್ತಿಲ್ಲ: ಮಾಜಿ ಗೃಹ ಸಚಿವ… ವಿಶೇಷ ಚೇತನರು ಇನ್ನು ವಿಮಾನವೇರುವುದು ಸುಲಭ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಮೊಬಿಲಿಟಿ…

ಇತ್ತೀಚಿನ ಸುದ್ದಿ

Mysore | ಹುಣಸೂರಿನ ಪಪ್ಪಾಯಿ ತ್ಯಾಜ್ಯ ಬಿಟ್ಟಂಗಾಲ ರಸ್ತೆ ಬದಿ ಡಂಪ್: 10 ಸಾವಿರ ರೂ. ದಂಡ, ಕಸ ಮತ್ತೆ ಪಾರ್ಸೆಲ್!

17/10/2025, 12:20

ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com

ಹುಣಸೂರಿನ ಪಪ್ಪಾಯಿ ತ್ಯಾಜ್ಯವನ್ನು ಬಿಟ್ಟಂಗಾಲದ ರಸ್ತೆ ಬದಿಯಲ್ಲಿ ಸುರಿದ ವಾಹನಕ್ಕೆ 10 ಸಾವಿರ ರೂ. ದಂಡ ಹಾಕಿ, ತ್ಯಾಜ್ಯವನ್ನು ಅದೇ ಲಾಯಿಯಲ್ಲಿ ಮರಳಿಸಿದ ಘಟನೆ ನಡೆದಿದೆ.
ಹುಣಸೂರಿನಿಂದ ಪಪ್ಪಾಯಿಯನ್ನು ಕೇರಳಕ್ಕೆ ತುಂಬಿಸಿಕೊಂಡು ಹೋದ ಅಶೋಕ್ ಲೈಲ್ಯಾಂಡ್ ವಾಹನವೊಂದು ಹಿಂತಿರುಗಿ ಬರುವಾಗ ಅದರ ತ್ಯಾಜ್ಯಗಳನ್ನು ಬಿಟ್ಟಂಗಾಲದ ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾಗ, ಸಾರ್ವಜನಿಕರು ಈ ವಾಹನವನ್ನು ಗಮನಿಸಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ಕ್ರಮಕ್ಕೆ ಮುಂದಾದ ಗ್ರಾಮ ಪಂಚಾಯಿತಿ ಈತನಿಗೆ 10,000 ದಂಡವನ್ನು ವಿಧಿಸಿ, ತ್ಯಾಜ್ಯವನ್ನು ಮತ್ತೆ ವಾಹನಕ್ಕೆ ತುಂಬಿಸಿ ಕಳಿಸಿರುವ ಘಟನೆ ಗುರುವಾ ಸಂಜೆ ನಡೆದಿದೆ.
ಕೊಡಗಿನ ಎಲ್ಲಾ ಭಾಗದಲ್ಲೂ ಇದೇ ರೀತಿ ಸಾರ್ವಜನಿಕರು ಎಚ್ಚೆತ್ತುಕೊಂಡು ತ್ಯಾಜ್ಯವನ್ನು ಕಂಡಲ್ಲಿ ಬಿಸಾಕುವವರನ್ನು ಪತ್ತೆ ಹಚ್ಚಿ ಗ್ರಾಮ ಪಂಚಾಯಿತಿ ಅಥವಾ ಪೊಲೀಸರಿಗೆ ಸುದ್ದಿ ಮುಟ್ಟಿಸಿ ದಂಡ ವಿಧಿಸಿದರೆ ಒಂದಿಷ್ಟು ಹೊರ ಜಿಲ್ಲೆಯ ಹೊರ ರಾಜ್ಯದ ತ್ಯಾಜ್ಯಗಳ ಸಂಖ್ಯೆ ಕೊಡಗಿನಲ್ಲಿ ವಿಲೇವಾರಿಯಾಗುವುದ್ದನ್ನು ತಪ್ಪಿಸಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು