1:22 AM Monday8 - July 2024
ಬ್ರೇಕಿಂಗ್ ನ್ಯೂಸ್
ಪ್ರಧಾನಿ ಮೋದಿ ಮಾಸ್ಕೋ ಭೇಟಿ: ಭಾರತ- ರಷ್ಯಾ ಸಂಬಂಧ ಇನ್ನಷ್ಟು ಬಲಗೊಳಿಸಲು ಮಾತುಕತೆ ಜಿಲ್ಲಾಧಿಕಾರಿಗಳು ಮಹಾರಾಜರಲ್ಲ; ಅಧಿಕಾರಿಗಳ ಜತೆ ಸಮನ್ವಯತೆಯಿಂದ ಕೆಲಸ ಮಾಡಿ ಡೆಂಗ್ಯು ನಿಯಂತ್ರಿಸಿ: ಸಿಎಂ… ಜೀ ಕನ್ನಡದ ‘ಮಹಾನಟಿ’ ಗ್ರಾಂಡ್ ಫಿನಾಲೆಗೆ ಮೂಡುಬಿದ್ರೆಯ ಆರಾಧನಾ ಭಟ್: ಶಿಕ್ಷಣ ಕಾಶಿಯ… ಸ್ವಾಮೀಜಿಗಳು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಸಲ್ಲದು; ಬದಲಿಗೆ ಧರ್ಮದಲ್ಲಿರುವ ತಾರತಮ್ಯ ನಿವಾರಿಸಲಿ: ಪದ್ಮರಾಜ್… ಮೈಸೂರು ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ನೇರ ಪಾತ್ರ: ಮಾಜಿ ಸಿಎಂ, ಸಂಸದ ಜಗದೀಶ… ಬೆಲೆಯೇರಿಕೆ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ: ಶಾಸಕ ಡಾ. ಭರತ್ ಶೆಟ್ಟಿ… ಕೋಟರಿಂದ ತೆರವಾದ ಸ್ಥಾನದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್… ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ ಶಾಶ್ವತ ತಡೆಗೆ, ದ್ವೀಪವಾಸಿಗಳ ರಕ್ಷಣೆಗೆ ಜಿಲ್ಲಾ… ಶ್ರಮ ಸಂಸ್ಕೃತಿ ಗೌರವಿಸುವ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ: ಉತ್ತರ ಕರ್ನಾಟಕದಲ್ಲೆಡೆ ಭಾರೀ ಸಂಭ್ರಮ ಮಂಗಳೂರಿನ ವಿವಿಧಡೆ ಟ್ರಾಫಿಕ್ ಪೊಲೀಸರಿಂದ ಕರ್ಕಶ ಹಾರ್ನ್, ಎಲ್ಇಡಿ ಲೈಟ್ ತೆರವು ಕಾರ್ಯಾಚರಣೆ

ಇತ್ತೀಚಿನ ಸುದ್ದಿ

ಒತ್ತುವರಿ ತೆರವು ಮಾಡಿದ ಜಮೀನುಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಮಾಡಿ: ಸಾಮಾಜಿಕ ಕಾರ್ಯಕರ್ತ ಉಮೇಶ ಕೆ. ಮುದ್ನಾಳ ಒತ್ತಾಯ

05/07/2024, 21:28

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmal.com

ಯಾದಗಿರಿ ಜಿಲ್ಲೆಯ ವಡಗೇರಿ ತಾಲ್ಲೂಕಿನ ಸುಗೂರು ಮತ್ತು ಗೋಡಿಹಾಳ ಗ್ರಾಮಗಳಲ್ಲಿ ಅರಣ್ಯ ಮತ್ತು ಗೈರಾಣಿಗೆ ಸೇರಿದ ಸುಮಾರು 95 ಎಕರೆ ಜಮೀನು ಅತಿಕ್ರಮ ಒತ್ತುವರಿ ತೆರವು ಮಾಡಿದ ಜಾಗೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಒತ್ತುವರಿಯಿಂದ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಒತ್ತಾಯಿಸಿದ್ದಾರೆ.


ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾಧಿಕಾರಿಗಳು ವಡಗೇರಿ ತಾಲ್ಲೂಕಿನ ಅಗ್ನಿಹಾಳ ಗ್ರಾಮದಲ್ಲಿ ಕಂದಾಯ ದಿನಾಚರಣೆ ಅಂಗವಾಗಿ ಒತ್ತುವರಿ ತೆರವು ಮಾಡಿ ಆ ಸ್ಥಳದಲ್ಲಿ ಸಸಿ ನೆಡುವ ಕಾರ್ಯಕ್ರಮ ಮಾಡಿದರು. ಆದರೆ ಇದೇ ಮಾದರಿಯಲ್ಲಿ ಹೋರಾಟದ ಮೂಲಕ ಒತ್ತುವರಿ ಜಾಗೆ ತೆರವು ಮಾಡಿಸಿದ ಸುಗೂರದಲ್ಲಿ 47 ಎಕರೆ, ಗೋಡಿಹಾಳದಲ್ಲಿ 48 ಎಕರೆ ಸೇರಿ ಒಟ್ಟು 95 ಎಕರೆ ಜಾಗೆಯಲ್ಲಿಯೂ ವಿವಿಧ ತಳಿಯ ಸಸಿ ನೆಡುವ ಕಾರ್ಯಕ್ರಮ ಮಾಡುವಂತೆ ಒತ್ತಾಯಿಸಿದ್ದಾರೆ.
ಇದರಿಂದ ಒತ್ತುವರಿ ತೆರವು ಮಾಡಿದ ಜಮೀನು ರಕ್ಷಣೆಯೂ ಆಗುತ್ತದೆ ಬಿಸಿಲಿನ ತಾಪಕ್ಕೆ ಈಡಾಗಿರುವ ಈ ಪ್ರದೇಶದಲ್ಲಿ ಅರಣ್ಯ ಬೆಳೆಸಿದಂತೆಯೂ ಆಗುತ್ತದೆ. ಇದಕ್ಕೆ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ರೂಪಿಸಬೇಕೆಂದು ಅವರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಮಳೆಗಾಲ ಆರಂಭವಾಗಿರುವುದರಿಂದ ಇಗಲೇ ಕಾರ್ಯಕ್ರಮ ಮಾಡುವುದು ಸೂಕ್ತವಾಗಿದೆ. ಕೂಡಲೇ ಕಾರ್ಯಪ್ರವೃತ್ತರಾಗಿ ಒತ್ತುವರಿ ಜಾಗೆಯಲ್ಲಿ ಪರಿಸರ ರಕ್ಷಣೆ ಕಾರ್ಯಕ್ರಮ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಹಿಂದೆ ನಮ್ಮ ಹೋರಾಟಕ್ಕೆ ಎಚ್ಚೆತ್ತು ಪೊಲೀಸ್ ಬಂದೋಬಸ್ತ್ ನಲ್ಲಿ ಅರಣ್ಯ ಇಲಾಖೆಯವರ ಸಮ್ಮುಖದಲ್ಲಿಯೇ ಎರಡು ಗ್ರಾಮಗಳಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡಿದ್ದು ಇಂತಹ ಜಾಗೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಮಾಡುವುದರಿಂದ ಒತ್ತುವರಿ ಆಗದಂತೆ ನೋಡಿಕೊಳ್ಳಲು ಮತ್ತು ಅರಣ್ಯ ಬೆಳೆಸಿದಂತೆ ಆಗುತ್ತದೆ ಎಂದು ಅವರು ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ.


ಈ ಹಿಂದೆ ಒತ್ತುವರಿ ತೆರವು ಮಾಡಿ ನಾಮಫಲಕ ಅಳವಡಿಸಿದ್ದರೂ ಅವುಗಳನ್ನು ಬೀಳಿಸಿ ಮತ್ತೆ ಅತಿಕ್ರಮಣ ಮಾಡುವ ಕೆಲಸಗಳು ನಡೆಯುತ್ತಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕಿದೆ.

-ಉಮೇಶ ಕೆ. ಮುದ್ನಾಳ,
ಸಾಮಾಜಿಕ ಹೋರಾಟಗಾರು
ಯಾದಗಿರಿ

ಇತ್ತೀಚಿನ ಸುದ್ದಿ

ಜಾಹೀರಾತು