ಇತ್ತೀಚಿನ ಸುದ್ದಿ
ಎದುರುಪದವು: ‘ಮಿಹ್ರಜಾನುಲ್ ಬಿದಾಯ’ 2026-27ನೇ ವರ್ಷದ ಮದರಸ ಆರಂಭೋತ್ಸವ
31/03/2026, 11:04
ಮಂಗಳೂರು(reporterkarnataka.com): ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದಲ್ಲಿ “ಮಿಹ್ರಜಾನುಲ್ ಬಿದಾಯ” 2026-27ನೇ ವರ್ಷದ ಮದರಸ ಆರಂಭೋತ್ಸವ ಕಾರ್ಯಕ್ರಮ ಎದುರುಪದವಿನ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಸಭಾಂಗಣದಲ್ಲಿ ನೆರವೇರಿತು.
ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಖತೀಬ್ ಸಿರಾಜುದ್ದೀನ್ ಫೈಝಿ ಅಲ್ ಮಅಬರಿ ದುಆ ಮೂಲಕ ಉದ್ಘಾಟಿಸಿದರು. ಈ ವೇಳೆ ಮಸೀದಿ ಸದರ್ ಉಸ್ತಾದ್ ಮುಹಮ್ಮದ್ ಇಖ್ಬಾಲ್ ಮಕ್ದೂಮಿ ಫೈಝಿ ಮದರಸ ವಿದ್ಯಾಭ್ಯಾಸದ ಮಹತ್ವ ಮತ್ತು ಘನತೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಅಧ್ಯಕ್ಷರಾದ ಎ. ಪಿ ಇಕ್ಬಾಲ್, ಮುಅಲ್ಲಿಂ ಉಸ್ತಾದ್ ಅಬ್ದುಲ್ ಖಾದರ್ ಸಅದಿ, ಉಪಾಧ್ಯಕ್ಷ ಅಬ್ದುಲ್ ರಝಾಕ್ ಎ ಆರ್, ಪ್ರಧಾನ ಕಾರ್ಯದರ್ಶಿ ಸಾಜುದ್ದೀನ್, ಕೋಶಾಧಿಕಾರಿ ಇಮ್ರಾನ್ ಅಲಿ, ಹಿರಿಯರಾದ ಹಾಜಿ ಹನೀಫ್ ಮೌಲವಿ ಮತ್ತಿತರರು ಉಪಸ್ಥಿತರಿದ್ದರು.












