7:51 AM Saturday20 - December 2025
ಬ್ರೇಕಿಂಗ್ ನ್ಯೂಸ್
ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ

ಇತ್ತೀಚಿನ ಸುದ್ದಿ

ನೋಡುಗರ ಕೌತುಕಕ್ಕೆ ಕಾರಣವಾಗಿ ವಿಚಿತ್ರ ಅಣಬೆ!: ಪ್ರಕೃತಿ ವೈಚಿತ್ರ್ಯದ ಸೊಬಗು ಇಲ್ಲಿದೆ ನೋಡಿ!

14/10/2023, 12:02

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.ಕಂ

ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಗಿರೀಶ್ ಎಂಬುವರ ತೋಟದಲ್ಲಿ ವಿಚಿತ್ರ ಅಣಬೆವೊಂದು ಹುಟ್ಟಿದ್ದು ನೋಡುಗರ ಕೌತುಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಅಣಬೆಗಳು ಹುಟ್ಟೋದೇ ರಾತ್ರಿ ವೇಳೆ. ರಾತ್ರಿ ಹುಟ್ಟಿ ಸಂಜೆ ವೇಳೆಗೆ ಬಾಡಿ ಹೋಗುತ್ತೆ. ಆದ್ರೆ, ನಿನ್ನೆ ಸಂಜೆ ಇಲ್ಲದ ಈ ವಿಚಿತ್ರ ಅಣಬೆ ಬೆಳಗಾಗುವಷ್ಟರಲ್ಲಿ ವಿಚಿತ್ರವಾಗಿ ಬೆಳೆದಿದೆ. ಈ ರೀತಿಯ ಅಣಬೆಗಳು ಬೆಳೆಯುತ್ತೆ. ಆದರೆ, ತುಂಬಾ ವಿರಳ. ಇದನ್ನ ಮೆಟ್ಟಿಲು ಅಣಬೆ ಅಥವ ಬಲೆ ಅಣಬೆ ಅಂತಾನೂ ಕರೆಯುತ್ತಾರೆ. ಗುಡುಗು-ಸಿಡಿಲು-ಮಿಂಚು ಬರುವ ವೇಳೆ ಈ ರೀತಿಯ ಅಣಬೆಗಳು ಹುಟ್ಟುತ್ತೆ ಅನ್ನೋದು ಹಿರಿಯ ನಂಬಿಕೆ. ನಿನ್ನೆ ಸಂಜೆ ಚಿಕ್ಕಮಗಳೂರು

ತಾಲೂಕಿನ ಮಲೆನಾಡು ಭಾಗದಲ್ಲಿ ಸಮೃದ್ಧ ಮಳೆಯಾಗಿದೆ.

ಮಲ್ಲಂದೂರು ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಗುಡುಗು-ಮಿಂಚು-ಸಿಡಿಲು ಕೂಡ ಇತ್ತು. ಹಾಗಾಗಿ, ನಿನ್ನೆ ಸಂಜೆ ಇಲ್ಲದ ಈ ಅಣಬೆ ಬೆಳಗಾಗುವಷ್ಟರಲ್ಲಿ ಈ ರೀತಿ ವಿಚಿತ್ರವಾಗಿ ಬೆಳೆದಿದ್ದು ನೋಡುಗುರ ಪ್ರಕೃತಿಯಲ್ಲಿನ ವೈಚಿತ್ರ್ಯದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ, ಇತ್ತೀಚಿನ ಹಲವು ವರ್ಷಗಳಲ್ಲಿ ಈ ರೀತಿಯ ಇಷ್ಟು ದೊಡ್ಡ ಬಲೆ ಅಣಬೆ ಬೆಳೆದಿರಲಿಲ್ಲ. ಈ ಬಾರಿ ಮಳೆಗಾಲದಲ್ಲಿ ಸಮರ್ಪಕ ಮಳೆ ಆಗಿಲ್ಲ. ಈಗ ಧಾರಾಕಾರ ಮಳೆ ಸುರಿಯುತ್ತಿದೆ. ಈಗ ಬೆಳೆದಿರುವುದು ಪ್ರಕೃತಿಯ ಅಸಮಾತೋಲನದಿಂದಲೇ ಈ ರೀತಿಯ ಬಲೆ ಅಣಬೆ ಹುಟ್ಟಿದೆ ಅನ್ನೋದು ಸ್ಥಳಿಯರು ಮಾತು.

ಇತ್ತೀಚಿನ ಸುದ್ದಿ

ಜಾಹೀರಾತು