7:04 PM Friday3 - April 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆಯಲ್ಲಿ ಸಂಭ್ರಮದ ಹನುಮ ಜಯಂತಿ ಆಚರಣೆ: ಸಹಸ್ರಾರು ಸಂಖ್ಯೆಯಲ್ಲಿ ಸಮಾಗಮ ಪಾಟೀಲ್ – ಯತ್ನಾಳ್ ವಾಕ್ಸಮರ | ಒಂದು ದಿನ ಅವರೇ ಅಪ್ಪ-ಮಕ್ಕಳನ್ನು ಕೈಬಿಟ್ಟು… ದಾವಣಗೆರೆ ಉಪ ಚುನಾವಣೆ: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ ಸಿದ್ದಗಂಗಾ ಮಠಕ್ಕೆ ಬಂದಿದ್ದು ನನ್ನ ಜೀವನದ ಸೌಭಾಗ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು ದಾವಣಗೆರೆ, ಬಾಗಲಕೋಟೆಯಲ್ಲಿ ಸಚಿವ ಜಮೀರ್ ಪ್ರಚಾರ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ…

ಇತ್ತೀಚಿನ ಸುದ್ದಿ

ನಿಮಗೆ ತಾಕತ್ತಿದ್ರೆ, ಧಮ್‌ ಇದ್ರೆ ಮೀಸಲಾತಿ ತೆರವು ಮಾಡಿ: ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪುಣಚ ಸವಾಲು

28/01/2022, 22:01

ಮಂಗಳೂರು(reporterkarnataka.com): ಅಧಿಕಾರ ನಿಮ್ಮಲ್ಲಿದೆ. ನಿಮಗೆ ತಾಕತ್ತಿದ್ರೆ, ಧಮ್‌ ಇದ್ರೆ ಮೀಸಲಾತಿ ತೆರವು ಮಾಡಿ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಕಿರಣ್‌ ಪುಣಚ ಸವಾಲೆಸೆದರು.


ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ. ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರ ತೆಗೆಸಿ ಅವಮಾನ ಮಾಡಿದ ಘಟನೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದ.ಕ ಜಿಲ್ಲಾ ಶಾಖೆ
ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

2013ರ ನಂತರ ಈ ದೇಶ ಒಂದು ಧಾರ್ಮಿಕ ಆಫೀನಲ್ಲಿ ಬೆಳೆದಿತ್ತು. ಅದಕ್ಕೂ ಮೊದಲು ಶಿಕ್ಷಣ ಇಲ್ಲದವರು ಮಾತಿನ ಮೋಡಿಗೆ ಒಳಗಾಗುತ್ತಿದ್ದರು.

ಆದರೆ 2013ರ ನಂತರ ಸುಶಿಕ್ಷಿತರು ಸಹ ಭಾವನಾತ್ಮಕ ಲೋಕದಲ್ಲಿ ತೇಲಾಡುತ್ತಿದ್ದಾರೆ. ನಮ್ಮ ದೇಶ ವಿಶ್ವ ಗುರುವಾಗುತ್ತದೆ, ನಾವು ಇಡೀ ಪ್ರಪಂಚಕ್ಕೆ ಮಾದರಿಯಾಗುತ್ತೇವೆ, ನಮ್ಮ ದೇಶ ಅಭಿವೃದ್ಧಿ ಪಥದತ್ತ ಹೋಗುತ್ತದೆ ಎಂದು ಸೂಲಿಬೆಲೆ ಹುಡುಗ್ರನ್ನು ಹಾಳು ಮಾಡಿ, ತಲೆಕೆಡಿಸಿದ ಎಂದು ಹೇಳಿದರು.

ಅಂಬೇಡ್ಕರ್‌ನನ್ನು ದೇವರಂಥೆ ಪೂಜೆ ದಲಿತ ಸಮುದಾಯವರು ಮಾಡುತ್ತಿದ್ದಾರೆ. ಬಂಟರು, ಬಿಲ್ಲವರು, ಕ್ರಿಶ್ಚಿಯನ್‌, ಗೌಡರು, ಮುಸ್ಲಿಂಮರು ಅಂಬೇಡ್ಕರ್‌ನಿಂದ ನಾವು ಏನೂ ಪಡೆದುಕೊಂಡಿಲ್ಲವೇ ಎಂದು ಅವರು ಪ್ರಶ್ನಿಸಿದರು.

ನಿಮ್ಮಲ್ಲಿ ಸಂಪೂರ್ಣ ಅಧಿಕಾರ ಇದೆ. ನಿಮಗೆ ಧಮ್‌ ಇದ್ರೆ, ತಾಕತ್ತಿದ್ರೆ ಮೀಸಲಾತಿ ತೆರವು ಮಾಡಿ ಎಂದು ಸವಾಲೆಸೆದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಮಾತನಾಡಿ, ಸಂವಿಧಾನವನ್ನು ರಚಿಸಿ,ಅದಕ್ಕೊಂದು ಹೊಸ ರೂಪ ಕೊಟ್ಟುವರು ಅಂಬೇಡ್ಕರ್‌ ಎಂದರು.

ಕಮ್ಯುನಿಸ್ಟ್  ನಾಯಕ ಸುನಿಲ್‌ ಕುಮಾರ್‌ ಬಜಾಲ್‌ ಹಾಗೂ ದಲಿತ ಮುಖಂಡರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು