2:10 AM Thursday31 - July 2025
ಬ್ರೇಕಿಂಗ್ ನ್ಯೂಸ್
ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ… ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಏನಿಲ್ಲ ಏನಿಲ್ಲ ಎನ್ನುವುದರ ನಡುವೆ ಸಿಕ್ಕೇ ಬಿಡ್ತು… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭ ಬಾಲಮಂದಿರ, ಮಹಿಳಾ ನಿಲಯಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಭೇಟಿ: ಚಿಣ್ಣರನ್ನು ಮುದ್ದಾಡಿದ…

ಇತ್ತೀಚಿನ ಸುದ್ದಿ

ನೈಟ್ ಕರ್ಫ್ಯೂ ನೆಪದಲ್ಲಿ ಪೊಲೀಸ್ ದರ್ಬಾರ್: ಸಂಕಷ್ಟದಲ್ಲಿ ಫುಡ್ ಡೆಲಿವರಿ ಬಾಯ್ ಗಳು, ಸಾರ್ವಜನಿಕರು!

03/08/2022, 22:49

ಸಾಂದರ್ಭಿಕ ಚಿತ್ರ
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ರಾತ್ರಿ ಕರ್ಫ್ಯೂ ಬಂದೋಬಸ್ತ್ ನೆಪದಲ್ಲಿ ಪೊಲೀಸ್ ದರ್ಬಾರ್ ಜಾಸ್ತಿಯಾಗಿದ್ದು, ಸಿಕ್ಕ ಸಿಕ್ಕ ಕಡೆ ವಾಹನ ಸವಾರರ ಮೇಲೆ ದಂಡ ಹಾಕುವ, ದಾಖಲೆ ಪರಿಶೀಲಿಸುವ ಕೆಲಸ ನಡೆಯುತ್ತಿದೆ ಎಂಬ ಸಾರ್ವಜನಿಕರ ದೂರು ಕೇಳಿ ಬರುತ್ತಿದೆ.

ಸುರತ್ಕಲ್ ನಲ್ಲಿ ಫಾಝಿಲ್ ಕೊಲೆ ನಡೆದ ಬಳಿಕ ‘ಊರು ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಮುಚ್ಚಿದರು’ ಎನ್ನುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಸಂಜೆ 6ರ ಬಳಿಕ ನೈಟ್ ಕರ್ಫ್ಯೂ ವಿಧಿಸಿ ಬಡ ಹಾಗೂ ಕೆಳ ಮಧ್ಯಮ ವರ್ಗದ ಜನರ ಹೊಟ್ಟೆ ಮೇಲೆ ಕಲ್ಲು ಚಪ್ಪಡಿ ಎಳೆದಿದೆ. 

ಮುಂಜಾಗರುಕತೆ ಕ್ರಮವಾಗಿ ಸಂಜೆ 6 ಗಂಟೆಯ ನಂತರ ರಸ್ತೆಯ ಆಯಕಟ್ಟಿನ ಜಾಗದಲ್ಲಿ ಬ್ಯಾರಿಗೇಟ್ ಹಾಕಿ ತಪಾಸಣೆ ನಡೆಸುವ ನೆಪದಲ್ಲಿ ಡೆಲಿವರಿ ಬಾಯ್ ಆರಂಭಗೊಂಡು ಜನಸಾಮಾನ್ಯರನ್ನು ಪೀಡಿಸಲು ಆರಂಭಿಸಿದೆ. ದ್ವಿಚಕ್ರ ವಾಹನಗಳು, ಹಳೆಯ ಸಣ್ಣ ಕಾರುಗಳ ಮಾಲೀಕರು ಇವರ ಟಾರ್ಗೆಟ್. ಐಷಾರಾಮಿ ಕಾರಿನಲ್ಲಿ ಪ್ರಯಾಣಿಸುವವರಿಗೆ ಇವರದ್ದೇನು ತೊಂದರೆ ಇಲ್ಲ.

ಪೊಲೀಸರು ದಂಡದ ನೆಪದಲ್ಲಿ ವಿಚಾರಣೆ, ಆರ್ಡರ್ ಪ್ರೊಫ್ ಇದ್ದರೂ ಡಾಕ್ಯುಮೆಂಟ್ ಚೆಕ್ಕಿಗ್ ನೆಪದಲ್ಲಿ  ದರ್ಬಾರ್ ನಡೆಸುತ್ತಾರೆ. ಫುಡ್ ಡೆಲಿವರಿ ಬಾಯ್ ಗಳಂತೂ ಇದರಿಂದ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಡೆಲಿವರಿ ವಿಳಂಬವಾದರೆ ಗ್ರಾಹಕರು ಡೆಲಿವರಿ ಬಾಯ್ ಜತೆ ಜಗಳಕ್ಕೆ ನಿಲ್ಲುತ್ತಾರೆ. ಆರ್ಡರ್ ಕ್ಯಾನ್ಸಲ್ ಆದ ನಿದರ್ಶನವೂ ಇದೆ. ಇದ್ಯಾವುದೂ ಜಿಲ್ಲಾಧಿಕಾರಿಗಳಿಗಾಗಲಿ, ಪೊಲೀಸ್ ಕಮಿಷನರ್ ಅವರಿಗಾಲಿ ಅಥವಾ ನಮ್ಮನ್ನು ಆಳುವವರಿಗಾಗಲಿ ಅರ್ಥವಾಗುವುದಿಲ್ಲ.
ವಿಶೇಷ ಎಂದರೆ 9 ಗಂಟೆಯ ನಂತರ ಯಾವ ಪೊಲೀಸರು ಬ್ಯಾರೀಕೆಡ್ ಪಕ್ಕ ಇಲ್ಲ.ಯಾವ ತಪಾಸಣೆಯು ಇಲ್ಲ.


ಈ ಹಿಂದೆ ಪೊಲೀಸ್ ಆಯುಕ್ತ  ನೀಡಿರುವ ಆದೇಶ ಪ್ರಕಾರ ಫುಡ್ ಡೆಲಿವರಿಯ ಫುಡ್ ಆರ್ಡರ್ ದಾಖಲೆ ತೋರಿಸಿ ಸಂಚರಿಸಲು ಅವಕಾಶ ಇತ್ತು. ಆದರೀಗ ಗಂಟೆ ಗಟ್ಟಲೆ ನಿಲ್ಲಿಸಿ ಡಾಕ್ಯುಮೆಂಟ್ ಚೆಕ್ಕಿಂಗ್,  ದಂಡ ವಸೂಲಿಯಿಂದ ಎಲ್ಲೂ ಕಷ್ಟವಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತರು ಕಾರ್ಯ ನಿರತ ಪೊಲೀಸರಿಗೆ ಮಾರ್ಗದರ್ಶನ ನೀಡಬೇಕಾದ ಅನಿವಾರ್ಯ ಎದುರಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು