12:31 PM Tuesday31 - March 2026
ಬ್ರೇಕಿಂಗ್ ನ್ಯೂಸ್
ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ಬಾಗಲಕೋಟೆ ಉಪ ಚುನಾವಣೆ: ಆಲಮಟ್ಟಿ ಬಳಿ ರಾತೋರಾತ್ರಿ ಸಿಎಂ ಭೇಟಿಯಾದ ಮುಸ್ಲಿಂ​ ಮುಖಂಡರು;… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ರಂಗೇರಿದ ಉಪ ಚುನಾವಣಾ ಕಣ: ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ; ಕೈ, ಕಮಲ… ಕೌಟುಂಬಿಕ ಕಲಹ: ಭದ್ರಾ ಬಲದಂಡೆ ನಾಲೆ ಬ್ರಿಡ್ಜ್ ನಿಂದ ಹಾರಿ ಸೂಪರ್ ವೈಸರ್… ಗ್ಯಾಸ್ ಸಿಲಿಂಡರ್ ಗೆ ರೆಗ್ಯುಲೇಟರಿ ಅಳವಡಿಸುವಾಗ ಏಕಾಏಕಿ ಸ್ಫೋಟ: ಮನೆ ಛಿದ್ರಛಿದ್ರ; 4… ಭಕ್ತ ಸಾಗರದ ಹರ್ಷೋದ್ಗಾರದೊಂದಿಗೆ ನಡೆದ ನಂಜನಗೂಡಿನ ದೊಡ್ಡ ಜಾತ್ರೆ: ಶ್ರೀ ಗೌತಮ ಪಂಚ… ನಿಯಂತ್ರಣ ತಪ್ಪಿದ ಸರಕಾರಿ ಬಸ್: ಮಡಿಕೇರಿ ಬಸ್ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ Madikeri | ಕೊಡಗು ಜಿಲ್ಲೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಎಂ.… Kodagu | ಶನಿವಾರಸಂತೆ: ಟ್ರ್ಯಾಕ್ಟರ್ -ಕಾರು ಅಪಘಾತ; ಟ್ರ್ಯಾಕ್ಟರ್ ಚಾಲಕ ಸಾವು

ಇತ್ತೀಚಿನ ಸುದ್ದಿ

ಮೈಸೂರಿನ ಮೈಲಾರಿ ಹೊಟೇಲ್ ನಲ್ಲಿ ದೋಸೆ ಹೊಯ್ದ ಪ್ರಿಯಾಂಕಾ ವಾದ್ರ!: ಜನರಿಗೆ ಖುಷಿಯೇ ಖುಷಿ

26/04/2023, 23:46

ಮೈಸೂರು(reporterkarnataka.com); ಜನ ಸಾಮಾನ್ಯರ ಜತೆ ಬೆರೆಯುವ ಮೂಲಕವೇ ಗಾಂಧಿ ಕುಟುಂಬ ಪ್ರಸಿದ್ಧಿಗೆ ಬಂದಿರುವುದು. ಇದೀಗ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ ಪ್ರಿಯಾಂಕಾ ವಾದ್ರ ಇಲ್ಲಿನ ಮೈಲಾರಿ ಹೋಟೆಲ್ ಗೆ ಭೇಟಿ ನೀಡಿ ದೋಸೆ ಹೊಯ್ದು ಸುದ್ದಿ ಮಾಡಿದರು.


ಮೈಸೂರಿನ ಮೈಲಾರಿ ಹೋಟೆಲ್ ಅಂದ್ರೆ ಲಲಿತ ಮಹಲ್ ಪ್ಯಾಲೇಸ್, ಬಾಂಬೆಯ ಅಶೋಕ, ದಿಲ್ಲಿಯ ಮೌರ್ಯ ಹೋಟೆಲ್ ತರಹ ಸ್ಟಾರ್ ಹೋಟೆಲ್ ಅಲ್ಲ. ಬದಲಿಗೆ ಅದೊಂದು ಸಣ್ಣ ಗೂಡಿನ ಮಾದರಿಯ ಹೋಟೆಲ್ ಆಗಿದೆ. ಕಾಂಗ್ರೆಸ್ ನ ಯುವ ರಾಣಿ ಪ್ರಿಯಾಂಕಾ ಅವರು ಹೋಟೆಲಿಗೆ ಭೇಟಿ ಕೊಟ್ಟವರು ನೇರವಾಗಿ ನುಗ್ಗಿದ್ದು ಅಡುಗೆ ಮನೆಗೆ. ಪ್ರಿಯಾಂಕಾ ಅವರಿಗೆ ದಕ್ಷಿಣ ಭಾರತದ ದೋಸೆ ಕುರಿತು ಕುತೂಹಲ. ಹೋಟೆಲಿನ ಮಾಲೀಕ ಕಮ್ ಅಡುಗೆ ಭಟ್ಟರಲ್ಲಿ ಮಾಹಿತಿ ಪಡೆದ ಪ್ರಿಯಾಂಕಾ ವಾದ್ರ ಅವರು ಕಾದ ಕಾವಲಿಯ ಮೇಲೆ ದೋಸೆ ಹೊಯ್ದೇ ಬಿಟ್ಟರು. ಉದ್ದಿನ ದಪ್ಪ ದೋಸೆಯನ್ನು ಮಗುಚಿ ಹಾಕಬೇಕೆನ್ನುವ ಮಾಹಿತಿ ಇಲ್ಲದ ಪ್ರಿಯಾಂಕಾ ಅವರು ಅದನ್ನು ಸಿಂಗ್ ಫೋಲ್ಡ್ ಮಾಡಿ ಕಾವಲಿಯಿಂದ ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಹೋಟೆಲ್ ನ ಅಡುಗೆ ಭಟ್ಟರು ಅದನ್ನು ತಿರುಗಿಸಿ ಹಾಕುವ ಬಗ್ಗೆ ಮಾಹಿತಿ ನೀಡಿದರು. ಒಟ್ಟಿನಲ್ಲಿ ಪ್ರಿಯಾಂಕಾ ಅವರು ದೋಸೆ ಹಾಕುವ ಕುರಿತು ಮಾಹಿತಿ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು