8:31 PM Saturday2 - August 2025
ಬ್ರೇಕಿಂಗ್ ನ್ಯೂಸ್
Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ… ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ… ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ…

ಇತ್ತೀಚಿನ ಸುದ್ದಿ

ಮೈಸೂರಿನ ಮೈಲಾರಿ ಹೊಟೇಲ್ ನಲ್ಲಿ ದೋಸೆ ಹೊಯ್ದ ಪ್ರಿಯಾಂಕಾ ವಾದ್ರ!: ಜನರಿಗೆ ಖುಷಿಯೇ ಖುಷಿ

26/04/2023, 23:46

ಮೈಸೂರು(reporterkarnataka.com); ಜನ ಸಾಮಾನ್ಯರ ಜತೆ ಬೆರೆಯುವ ಮೂಲಕವೇ ಗಾಂಧಿ ಕುಟುಂಬ ಪ್ರಸಿದ್ಧಿಗೆ ಬಂದಿರುವುದು. ಇದೀಗ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ ಪ್ರಿಯಾಂಕಾ ವಾದ್ರ ಇಲ್ಲಿನ ಮೈಲಾರಿ ಹೋಟೆಲ್ ಗೆ ಭೇಟಿ ನೀಡಿ ದೋಸೆ ಹೊಯ್ದು ಸುದ್ದಿ ಮಾಡಿದರು.


ಮೈಸೂರಿನ ಮೈಲಾರಿ ಹೋಟೆಲ್ ಅಂದ್ರೆ ಲಲಿತ ಮಹಲ್ ಪ್ಯಾಲೇಸ್, ಬಾಂಬೆಯ ಅಶೋಕ, ದಿಲ್ಲಿಯ ಮೌರ್ಯ ಹೋಟೆಲ್ ತರಹ ಸ್ಟಾರ್ ಹೋಟೆಲ್ ಅಲ್ಲ. ಬದಲಿಗೆ ಅದೊಂದು ಸಣ್ಣ ಗೂಡಿನ ಮಾದರಿಯ ಹೋಟೆಲ್ ಆಗಿದೆ. ಕಾಂಗ್ರೆಸ್ ನ ಯುವ ರಾಣಿ ಪ್ರಿಯಾಂಕಾ ಅವರು ಹೋಟೆಲಿಗೆ ಭೇಟಿ ಕೊಟ್ಟವರು ನೇರವಾಗಿ ನುಗ್ಗಿದ್ದು ಅಡುಗೆ ಮನೆಗೆ. ಪ್ರಿಯಾಂಕಾ ಅವರಿಗೆ ದಕ್ಷಿಣ ಭಾರತದ ದೋಸೆ ಕುರಿತು ಕುತೂಹಲ. ಹೋಟೆಲಿನ ಮಾಲೀಕ ಕಮ್ ಅಡುಗೆ ಭಟ್ಟರಲ್ಲಿ ಮಾಹಿತಿ ಪಡೆದ ಪ್ರಿಯಾಂಕಾ ವಾದ್ರ ಅವರು ಕಾದ ಕಾವಲಿಯ ಮೇಲೆ ದೋಸೆ ಹೊಯ್ದೇ ಬಿಟ್ಟರು. ಉದ್ದಿನ ದಪ್ಪ ದೋಸೆಯನ್ನು ಮಗುಚಿ ಹಾಕಬೇಕೆನ್ನುವ ಮಾಹಿತಿ ಇಲ್ಲದ ಪ್ರಿಯಾಂಕಾ ಅವರು ಅದನ್ನು ಸಿಂಗ್ ಫೋಲ್ಡ್ ಮಾಡಿ ಕಾವಲಿಯಿಂದ ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಹೋಟೆಲ್ ನ ಅಡುಗೆ ಭಟ್ಟರು ಅದನ್ನು ತಿರುಗಿಸಿ ಹಾಕುವ ಬಗ್ಗೆ ಮಾಹಿತಿ ನೀಡಿದರು. ಒಟ್ಟಿನಲ್ಲಿ ಪ್ರಿಯಾಂಕಾ ಅವರು ದೋಸೆ ಹಾಕುವ ಕುರಿತು ಮಾಹಿತಿ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು