ಇತ್ತೀಚಿನ ಸುದ್ದಿ
ಮಸ್ಕಿ: ಸಡಗರ ಸಂಭ್ರಮದ 70ನೇ ಕನ್ನಡ ರಾಜ್ಯೋತ್ಸವ ಚಿನ್ನರ ಜತೆ ಕುಣಿದು ಕುಪ್ಪಳಿಸಿದ ಶಾಸಕ ತುರುವಿಹಾಳ
02/11/2025, 08:22
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ಪಟ್ಟಣದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರುವಿಹಾಳ ಕನ್ನಡ ಬಾವುಟ ಹಿಡಿದು ಮನಸಾರೆ ಕುಣಿದು ಕುಪ್ಪಳಿಸಿದರು.
ಕನ್ನಡ ಪರ ಸಂಘಟನೆಗಳು ಮಸ್ಕಿ ಪಟ್ಟಣವನ್ನು ಶೃಂಗರಿಸಿ, ಮದುಮಗಳ ದುಬ್ಬಣ ದಂತೆ ಸಂಭ್ರಮ ಆಚರಣೆ ನಡೆಸಿತು.
ಪುರಸಭೆ ಮುಖ್ಯ ಅಧಿಕಾರಿ ನರಸಾ ರೆಡ್ಡಿ, ಅಧ್ಯಕ್ಷ ಅಂಬಾಡಿ ಮಲ್ಲಯ್ಯ ಸಿಬ್ಬಂದಿ ವರ್ಗ ಪುರಸಭೆಯಲ್ಲಿ ಧ್ವಜಾರೋಹಣ ಮಾಡಿದರು.



ಅಶೋಕ ವೃತ್ತದಲ್ಲಿ ಬಸವರಾಜ ಡಿ. ಉದ್ಬಾಳ್ ಧ್ವಜಾರೋಹಣ ಮಾಡಿದರು.
ಕಾರ್ಯಕ್ರಮದ ಕನ್ನಡ ಬಾವುಟ ಧ್ವಜಾರೋಹಣ ವನ್ನು ಜಯ ಕರ್ನಾಟಕ ಸಂಘಟನೆ ಮಸ್ಕಿ ತಾಲೂಕು ಸಮಿತಿ ವತಿಯಿಂದ ಕವಿತಾಳ ವೃತ್ತದಲ್ಲಿ ತಾಲೂಕು ಅಧ್ಯಕ್ಷರಾದ ಕಿರಣ್ ವಿ ಮುರಾರಿ ಯವರು ನೆರವೇರಿಸಿದರು.
ತುಂಗಭದ್ರಾ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಮುದ್ದಾಪುರನಲ್ಲಿ ಇರುವ ತುಂಗಭದ್ರಾ ಪದವಿ ಪೂರ್ವ ಕಾಲೇಜಿನಲ್ಲಿ 69 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಮಣ್ಣ ನಾಯಕ, ಕಾಲೇಜಿನ ಪ್ರಾಚಾರ್ಯ ಲಕ್ಷ್ಮಣ ಕರ್ಲಿ, ಉಪನ್ಯಾಸಕರಾದ ಶಂಕ್ರಪ್ಪ, ಅಕ್ಕಮಹಾದೇವಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಎಲ್ಲೆಡೆ ಕನ್ನಡದ ಬಾವುಟ ಸಂಭ್ರಮ ಕಂಡು ಬಂದಿತು.












