7:54 AM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಮೂಡಲಗಿ ಸಮೀಪದ ಹಳ್ಳೂರ ಗ್ರಾಮದ ನೂತನ ವೃತ್ತಕ್ಕೆ ಸಾವಿತ್ರಿಬಾಯಿ ಫುಲೆ ನಾಮಕರಣ: ಪುಷ್ಪನಮನ, ಗೌರವ ಸಲ್ಲಿಕೆ

02/07/2024, 19:35

ಸಂತೋಷ್ ಹನಮಂತ ಹೊಸಟ್ಟಿ ಬೆಳಗಾವಿ

info.reporterkarnataka@gmail.com

ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಹೊಸದಾಗಿ ವೃತ್ತಕ್ಕೆ ಸಾವಿತ್ರಿ ಬಾಯಿ ಫುಲೆ ನಾಮಕರಣ ಮಾಡಲಾಯಿತು.
ಬಡವ ದಿನ ದಲಿತರ ಹಿಂದುಳಿದ ವರ್ಗದ ಜನರಿಗೆ ಶಿಕ್ಷಣವನ್ನು ನೀಡಿ ಅವರ ಬಾಳಿಗೆ ಬೆಳಕು ನೀಡಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರು ವೃತ್ತಕ್ಕೆ ಹೆಸರು ಇಟ್ಟಿರುವುದು ಸಮಾಜಕ್ಕೆ ನೀಡಿರುವ ಅವರ ಕೊಡುಗೆ ಅಪಾರವಾದದ್ದು ಎಂದು ಭರತೇಶ ಉಪಾದ್ಯೆ ನುಡಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಂಗಣ್ಣ ಗುಜನಟ್ಟಿ ಮಾತನಾಡಿ, ಸಾವಿತ್ರಿ ಬಾಯಿ ಫುಲೆ ಅವರು ಜಾತಿ ಬೇಧ ಭಾವ ಮಾಡದೆ ಎಲ್ಲರಿಗೂ ಸಮಾಜದಲ್ಲಿ ಮಾದರಿಯಾಗಿದ್ದಾರೆ. ಶಾಲೆಯ ಹತ್ತಿರ ಸಾವಿತ್ರಿ ಬಾಯಿ ಫುಲೆ ವೃತ್ತ ಆದದ್ದು ಹೆಮ್ಮೆಯ ಸಂಗತಿಯಾಗಿದೆ. ಇವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.        ಗ್ರಾಮ ಆಡಳಿತ ಅಧಿಕಾರಿ ಸಂಜು ಅಗ್ನೆಪ್ಪಗೋಳ ಮಾತನಾಡಿ ಸಾವಿತ್ರಿ ಬಾಯಿ ಫುಲೆ ಅವರು ಶಿಕ್ಷಣ ಕಲಿಸಲು ದಾರಿಯಲ್ಲಿ ಹೊರಟಾಗ ಕೆಟ್ಟ ಜನರು ಸಗಣಿ, ಕಲ್ಲು ಎಸೆಯುತ್ತಿದ್ದರು. ಮಾನ ಅಪಮಾನಕ್ಕೆ ಹೆದರದೆ ಮುನ್ನಡೆದು ಶಿಕ್ಷಣ ನೀಡಿ ಶಿಕ್ಷಣದ ಕ್ರಾಂತಿಯನ್ನು ಮಾಡಿದ್ದಾರೆ ಎಂದು ಹೇಳಿದರು.              ಪ್ರಾರಂಭದಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ವೃತ್ತ ಫಲಕದ ಅನಾವರಣ ಪೂಜಾ ಸಮಾರಂಭವು , ಪುಷ್ಪ ನಮನ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ನಡೆಯಿತು. ಈ ಸಮಯದಲ್ಲಿ  ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಹೊಸಟ್ಟಿ, ಮಾಜಿ ಜಿಪಂ ಸದಸ್ಯೆ ವಾಸಂತಿ ತೇರದಾಳ. ಮಾಜಿ ಜಿಪಂ ಸದಸ್ಯ ಭೀಮಶಿ ಮಗದುಮ. ಮಾ, ತಾ ಪಂ ಸದಸ್ಯೆ ಸವಿತಾ ಡಬ್ಬನ್ನವರ. ಸಾವಿತ್ರಿ ಬಾಯಿ ಫುಲೆ ಮಹಿಳಾ ಮಂಡಳ ಅಧ್ಯಕ್ಷೆ ಬಂದವ್ವ ಕಾಗೆ.ಉಪಾಧ್ಯಕ್ಷೆ ಕಸ್ತೂರಿ ನಿಡೋಣಿ.ಮಾ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ, ಅರ್ಚಕ ಪಾವಡೆಪ್ಪ ಪೂಜೆರಿ, ಗ್ರಾಪಂ ಸದಸ್ಯ ಮಾದೇವ ಹೊಸಟ್ಟಿ, ಪಶು ವೈದ್ದಾಧಿಕಾರಿಗಳಾದ ವಿಶ್ವನಾಥ ಹುಕ್ಕೇರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ, ಮುಖಂಡರಾದ ಯಮನಪ್ಪ ನಿಡೋಣಿ, ಸಿದ್ದಪ್ಪ ಕೂಲಿಗೋಡಭೀಮಪ್ಪ ಹೊಸಟ್ಟಿ,ಅಡಿವೆಪ್ಪ ಪಾಲಬಾಂವಿ, ಹನಮಂತ ತೇರದಾಳ, ಶಂಕರ ಬೋಳನ್ನವರ, ಸುರೇಶ ಕತ್ತಿ, ಮುತ್ತಪ್ಪ ಲಿಗಾಡೆ, ಹನಮಂತ ಹಳ್ಳೂರ, ದುಂಡಪ್ಪ ಕುಲಿಗೋಡ, ಸತ್ಯೆಪ್ಪ ಮರಿಚಂಡಿ, ಪ್ರಧಾನ ಗುರುಗಳು‌ ಸರ್ಕಾರಿ ಶಾಲೆಯ ಎಸ್. ಎಚ್. ವಾಸನ,ದುಂಡಪ್ಪ ಕತ್ತಿ, ಶಾನೂರ ಹರಿಜನ,ರಾಮಣ್ಣ ಹೊಸೂರ,ಇಬ್ರಾಹಿಂ ಮುಜಾವರ, ಗೋಪಾಲ ಅಟ್ಟಮಟ್ಟಿ, ರಮೇಶ ಸವದಿ, ಲಕ್ಷ್ಮಣ ಕೌಜಲಗಿ, ಸೈದುಸಾಬ ಮುಜಾವರ,ಕಲ್ಲಪ್ಪ ಹುಬ್ಬಳ್ಳಿ ಸೇರಿದಂತೆ ಗ್ರಾಮದ ಗುರು ಹಿರಿಯರು ವಿದ್ಯಾರ್ಥಿಗಳು, ಶಿಕ್ಷಕ ಶಿಕ್ಷಕಿಯರು ಹಾಗೂ  ಸಾವಿತ್ರಿ ಬಾಯಿ ಫುಲೆ ಮಹಿಳಾ ಮಂಡಳ ಸದಸ್ಯರು ಉಪಸ್ಥಿತರಿದ್ದರು.
 

ಇತ್ತೀಚಿನ ಸುದ್ದಿ

ಜಾಹೀರಾತು