4:20 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಮೊಹರಂ ಆಚರಣೆಗೆ ಕೊರೊನಾ ಕರಿನೆರಳು: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹಬ್ಬಕ್ಕೆ ಮಹಾಮಾರಿಯ ಕೊಡಲಿಯೇಟು

19/08/2021, 08:27

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ್ ಅಂತರಗಂಗೆ ರಾಯಚೂರು

info.reporterkarnataka@gmail.com

ಮೊಹರಂ ಹಬ್ಬವೆಂದರೆ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ದೊಡ್ಡ ಆಚರಣೆ. ಗ್ರಾಮೀಣ ಭಾಗದಲ್ಲಿ ಹಿಂದುಗಳು ಹೆಚ್ಚಾಗಿ ಸಂಭ್ರಮ ಸಡಗರದಿಂದ ಮೊಹರಂ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಕೊರೊನಾದಿಂದ ಈ ಬಾರಿಯ ಮೊಹರಂ ಹಬ್ಬ ಫುಲ್ ಮಂಕಾಗಿದೆ.

ಮೊಹರಂ ಹಬ್ಬವನ್ನು ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಜನರು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ.ಹಿಂದೂ-ಮುಸ್ಲಿಂ ಭೇದವಿಲ್ಲದೆ ಜನರು ಭಾವೈಕ್ಯತೆಯಿಂದ ಆವರಿಸಿಕೊಂಡು ಬರುತ್ತಿದ್ದಾರೆ. ದೂರದ ನಗರಗಳಿಗೆ ದುಡಿಯಲು ಹೋದವರು ಮೊಹರಂ ಹಬ್ಬಕ್ಕೆ ತಪ್ಪದೆ  ಊರಿಗೆ ಮರಳಿ ಬರುತ್ತಾರೆ. ಹಬ್ಬದ ಮುನ್ನ ದಿನವೇ ತಮ್ಮ ತಮ್ಮ ಗ್ರಾಮಗಳಿಗೆ ಬಂದು ಸೇರುತ್ತಾರೆ.

ಮತ್ತೆ ಹಬ್ಬ ಮುಗಿಸಿ ತಮ್ಮ ತಮ್ಮ ಕೆಲಸಗಳಿಗೆ ಪಟ್ಟಣಗಳಿಗೆ ತೆರಳುತ್ತಾರೆ. ಆದರೆ ಈ ಬಾರಿ ಮೊಹರಂ ಆಚರಣೆ ಸರಕಾರದ ಆದೇಶದಂತೆ ನಡೆಯಲಿದೆ. ಗುದ್ದಲಿ ಹಾಕೋದಿಲ್ಲ. ಮೊಹರಂ ಕುಣಿತ ಇಲ್ಲ. ಜನ ಸೇರುವಂತಿಲ್ಲ. ಇದು ಸರಕಾರದ ಆದೇಶವಾಗಿದೆ. ಇದಕ್ಕೆಲ್ಲ ಕಾರಣ ಮಹಾಮಾರಿ ಕೊರೊನಾ. ಕೇವಲ ಸಾಂಕೇತಿಕ ಆರಣೆಗೆ ಮಾತ್ರ ಸೀಮಿತವಾಗಿದೆ.

ಮೊಹರಂ ಬರುವುದಕ್ಕಿಂತ ತಿಂಗಳು ಮುನ್ನವೇ ಗ್ರಾಮೀಣ ಪ್ರದೇಶದ ಜನರು ಮನೆ ಸ್ವಚ್ಛಗೊಳಿಸಿ ಬಣ್ಣ ಬಳಿಯುತ್ತಾರೆ. ಮನೆ ಮಂದಿಗೆ ಬಣ್ಣ ಬಣ್ಣದ ಹೊಸ ಬಟ್ಟೆಗಳನ್ನು ಖರೀದಿಸಲಾಗುತ್ತದೆ. ತಮ್ಮ ಬಂಧು ಬಾಂಧವರನ್ನು ಕರೆಸಿ ಕಂಜುರಿ ಮಾಡಿಸಿ ಊಟ ನೀಡಲಾಗುತ್ತದೆ.

ಹಾಡುಗಳ ಸ್ಪರ್ಧೆ ಏರ್ಪಡಿಸಿ ಬೆಳತನಕ ಗೀಗಿ ಪದ, ಸವಾಲ್ ಪದ, ಜವಾಬು ಪದ ನಡೆಯುತ್ತದೆ. ಅಡ್ಡ ಸೋಗು ಪಾತ್ರಗಳು ಕಂಡುಬರುತ್ತವೆ. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಛತ್ರಿ ಹಿಡಿದುಕೊಂಡು ತಾಳಕ್ಕೆ ತಕ್ಕಂತೆ ಕುಣಿಯುವುದು ತಂಡಗಳು ಬಹಳ ರಂಜನೀಯವಾಗಿರುತ್ತದೆ. ದೇವರು ಕುಳಿತ ಸ್ಥಳದಲ್ಲೇ ಅಲೆಕುಣಿ ತೆಗೆದು ಅದರಲ್ಲಿ ಬೆಂಕಿ ಹಚ್ಚಿ ಅದರ ಸುತ್ತಲೂ ತಮ್ಮ ಬೇಡಿಕೆಗಳ ಈಡೇರಿಸಿ ಕೊಳ್ಳುತ್ತಾ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ಕೆಲವರು ಬೆಂಕಿಯಲ್ಲಿ ನಡೆಯುತ್ತಾರೆ. 

ದೇವರ ಎದುರು-ಬದುರು ಅಪ್ಪಿಕೊಳ್ಳುವುದು ನಡೆಯುತ್ತದೆ. ಆದರೆ ಈ ಬಾರಿ ಕರಿನೆರಳು ಕರೆದಿರುವುದರಿಂದ ದೇವರಿಗೆ ಕೂಡಿಸುವುದು ಕಡಿಮೆ. ಜನರು ಮನದಲ್ಲಿ ಸ್ಮರಿಸುವಂತಾಗಿದೆ. ಒಟ್ಟಿನಲ್ಲಿ ಗ್ರಾಮೀಣ ಜನರ ಬದುಕಿಗೆ ರಂಗು ನೀಡುವ ಮೊಹರಂ ಹಬ್ಬಕ್ಕೆ ಕೊರೊನಾದ  ಕರಿನೆರಳು ಬಿದ್ದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು