4:37 AM Tuesday2 - July 2024
ಬ್ರೇಕಿಂಗ್ ನ್ಯೂಸ್
ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದ ಎಳನೀರು ವಾಹನದ ಚಾಲಕನ ಮೇಲೆ ಕೇಸ್; ಚಾಲಕನಿಂದಲೇ… ಪಿಎಂ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಕಲ್ಯಾಣ ಕರ್ನಾಟಕ ಅಭಿವೃದ್ದಿ, ಬೆಂಗಳೂರಿನಲ್ಲಿ ಸುರಂಗ… 1.80 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬೆಳಗೇರಾ ಸೇತುವೆ ಸಂಚಾರಕ್ಕೆ ರೆಡಿ: ಹೋರಾಟಕ್ಕೆ ಸಂದ… ಶಹಪುರ್ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಬದನೆ ಸಾಂಬಾರಿನಲ್ಲಿ ಹುಳ… ನಿಮ್ಮ ಕನಸಿನ ಮನೆಯನ್ನು ಬಹುಮಾಮವಾಗಿ ಗೆಲ್ಲಬೇಕೆ ? ಹಾಗಿದ್ದರೆ ಇಲ್ಲಿದೆ ಸುವರ್ಣಾವಕಾಶ ಫುಟ್ ಪಾತ್ ಇರುವುದು ಸಾರ್ವಜನಿಕರಿಗೆ; ಅನಧಿಕೃತ ಗೂಡಂಗಡಿಗಳ ತೆರವಿಗೆ ಕ್ರಮ: ಮೇಯರ್ ಸುಧೀರ್… ಜಪ್ಪಿನಮೊಗರು ನೆರೆ ಸಮಸ್ಯೆ ಮಳೆಯಿಂದಲ್ಲ, ಅವೈಜ್ಞಾನಿಕ ಲೇಔಟ್ ನಿಂದ!!: ಪಾಲಿಕೆ, ಮುಡಾ ಇನ್ನಾದರೂ… ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ತುಂಬಿ ಹರಿಯುತ್ತಿರುವ ತುಂಗಾ- ಭದ್ರಾ: ಹೆಬ್ಬಾಳೆ ಸೇತುವೆಗೆ… ಪುತ್ತೂರು: ಮನೆ ಮೇಲೆ ತಡೆಗೋಡೆ ಕುಸಿತ; ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳ ರಕ್ಷಿಸಿದ… ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿರುವ ಮನೆಗಳ ತಕ್ಷಣ ಸರ್ವೆ: ದ.ಕ. ಜಿಲ್ಲಾಡಳಿತಕ್ಕೆ ಕಂದಾಯ ಸಚಿವ…

ಇತ್ತೀಚಿನ ಸುದ್ದಿ

ಶಾಸಕರಿಗೆ ಸರಕಾರದ ಖರ್ಚಿನಲ್ಲಿ ವಿದೇಶ ಪ್ರವಾಸಕ್ಕೆ ಅವಕಾಶ ನೀಡೊಲ್ಲ: ಸ್ಪೀಕರ್ ಖಾದರ್

29/06/2024, 23:25

ಮಂಗಳೂರು(reporterkarnataka.com): ಸರಕಾರದ ಖರ್ಚಿನಲ್ಲಿ ಯಾವುದೇ ಶಾಸಕರಿಗೆ ವಿದೇಶ ಪ್ರವಾಸ ಮಾಡಲು ಅವಕಾಶ ನೀಡುವುದಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಸದ್ಯ ಸರಕಾರದ ಖರ್ಚಿನಲ್ಲಿ ವಿದೇಶಕ್ಕೆ ಕಳುಹಿಸಲು ನಿಯಮದಲ್ಲಿ ಅವಕಾಶ ಇಲ್ಲ. ಶಾಸಕರು ತಮ್ಮ ವೈಯುಕ್ತಿಕ ಖರ್ಚಿನಲ್ಲಿ ವಿದೇಶಕ್ಕೆ ಹೋಗಬಹುದು. ಯಾವತ್ತೂ ಯಾರೂ ಶಾಸಕರನ್ನು ವೈರಿಗಳೆಂದು ಭಾವಿಸದೆ, ಸಹೋದರರು ಹಾಗೂ ಮಿತ್ರರಂತೆ ಕಾಣುಬೇಕು ಎಂದು
ನಗರದಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು ನುಡಿದರು.
ರಾಜ್ಯದ ವಿವಿಧ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಮತ್ತು ಸಂತ್ರಸ್ತರಿಗೆ ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರ ವಿತರಣೆ ಆಗದೇ ಇದ್ದರೂ ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯ ಶಾಸಕರು ಅಧ್ಯಯನದ ಹೆಸರಿನಲ್ಲಿ ವಿದೇಶಗಳಿಗೆ ಪ್ರವಾಸ ಕೈಗೊಳ್ಳಲು ತಯಾರಿ ನಡೆಸಿದ್ದಾರೆ ಎಂಬ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್,ಶಾಸಕರ ವಿವಿಧ ಸಮಿತಿ ಅಧ್ಯಯನಕ್ಕೆ ದೇಶದ ವಿವಿಧ ರಾಜ್ಯಗಳಿಗೆ ಪ್ರವಾಸ ಮಾಡಬಹುದು. ಅಂಥ ರಾಜ್ಯ ಪ್ರವಾಸಗಳಿಗೆ ಮನವಿ ಕೊಟ್ಟಾಗ ಒಪ್ಪಿಗೆ ಕೊಟ್ಟಿದ್ದೇನೆ ಎಂದು ಅವರು ಹೇಳಿದರು.
ಶಾಸಕರು ಪ್ರವಾಸ ಹೋಗುವಾಗ ಎಲ್ಲರಿಗೂ ನೋವು ಬರುತ್ತದೆ. ಆಗ ಮಾತ್ರ ದೇಶಕ್ಕೆ, ರಾಜ್ಯಕ್ಕೆ ಕಷ್ಟಗಳು ಬರುತ್ತವೆ. ಶಾಸಕರು ಬೆಳಿಗ್ಗಿನಿಂದ ಸಂಜೆ ತನಕ ಜನರ ಮಧ್ಯೆ ಕೆಲಸ ಮಾಡುತ್ತಾರೆ. ಅವರಿಗೂ ಸಮಸ್ಯೆ ಇರುತ್ತದೆ. ಜನಸೇವೆ ಮಾಡುವಾಗ ಸವಲತ್ತು ತಗೋಬಾರದು ಅಂದ್ರೆ ಆಗುತ್ತಾ ಎಂದು ಶಾಸಕರ ಪರ ಸ್ಪೀಕರ್ ವಾದಿಸಿದರು.
ಅಧಿಕಾರ ಇಲ್ಲದಾಗ ಅವರ ಬಳಿ ಏನೂ ಇರದ ಉದಾಹರಣೆ ಇದೆ. ಹಲವರಿಗೆ ಆಸ್ಪತ್ರೆ ಸೇರಿ ಡಿಸ್ಚಾರ್ಜ್ ಆಗೋಕು ಹಣ ಇರದ ಉದಾಹರಣೆ ಇದೆ ಎಂದು ಅವರು ಎಷ್ಟೋ ಮಾಜಿ ಮಂತ್ರಿಗಳು ಹಾಗೂ ಶಾಸಕರು ಆಸ್ಪತ್ರೆಯಲ್ಲಿ ಹಣ ಇಲ್ಲದೇ ಸಮಸ್ಯೆ ಎದುರಿಸಿದ ಉದಾಹರಣೆಗಳು ಇವೆ. ಮಾಜಿ ಶಾಸಕರು ಜನಸೇವೆ ಮಾಡುವಾಗ ಬಸ್ಸಿನಲ್ಲಿ ಹೋಗಿ ತೀರಿ ಹೋದ ಉದಾಹರಣೆ ಇದೆ. ಶಾಸಕರಿಗೆ ಏನು ಸಿಗುತ್ತದೆ? ಅವರಿಗೆ ಸಿಗುವ ಸಂಬಳ ಡಿಸೇಲ್‌ಗೂ ಸಾಕಾಗಲ್ಲ. ಜೊತೆಯಲ್ಲಿ ಬರೋರಿಗೆ ಕಾಫಿ ತೆಗೆದುಕೊಡೋಕು ಸಾಕಾಗಲ್ಲ. ಶಾಸಕರ ಮನೆಗೆ ಮಗಳ ಮದುವೆ, ಮಕ್ಕಳ ಫೀಸ್ ಅಂತ ಬರ್ತಾರೆ ಎಂದು ಅವರು ಶಾಸಕರ ಸಮಸ್ಯೆಗಳನ್ನು ಪಟ್ಟಿ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು