5:32 PM Friday11 - April 2025
ಬ್ರೇಕಿಂಗ್ ನ್ಯೂಸ್
ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:… Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್…

ಇತ್ತೀಚಿನ ಸುದ್ದಿ

ಮಸ್ಕಿ ಜಲಾಶಯಕ್ಕೆ ನೂತನ ಶಾಸಕ ತುರ್ವಿಹಾಳ ಬಾಗಿನ ಸಮರ್ಪಣೆ; ರಸ್ತೆ ಕಾಮಗಾರಿಗೆ ಚಾಲನೆ

08/08/2021, 13:35

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com

ಮಸ್ಕಿ ಮಾರಲದಿನ್ನಿ ಡ್ಯಾಂ ಜಲಾಶಯಕ್ಕೆ ನೂತನ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಬಾಗಿನ ಸಮರ್ಪಿಸಿದರು.

ರೈತರ ಹಿತಕ್ಕಾಗಿ, ರೈತರಿಗೆ ಅನುಕೂಲವಾಗುವ ಯಾವುದೇ ಕೆಲಸ ಮಾಡಿಕೊಡಲು ಸದಾ ಸಿದ್ದ. ನನ್ನ ಅವಧಿಯಲ್ಲಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ  ಶಾಸಕ ಬಸವನಗೌಡ ತುರುವಿಹಾಳ ಹೇಳಿದರು.

ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಕಾಂಗ್ರೆಸ್ ಮುಖಂಡರಾದ ಸಿದ್ದಣ್ಣ ಹೂವಿನಭಾವಿ, ಹನುಮಂತಪ್ಪ ಮುದ್ದಾಪೂರು, ಎಚ್. ಬಿ. ಮುರಾರಿ, ಮೈಬುಸಾಬ ಮುದ್ದಾಪೂರು ಹಾಗೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಂಜಿನಿಯರಿಂಗ್ ಇಲಾಖೆ 2020-21ನೇ ಸಾಲಿನ ಬಿ ಆರ್ ಜಿ ಎಫ್ ಯೋಜನೆಡಿಯಲ್ಲಿ ಮಸ್ಕಿ ಲಿಂಗಸಗೂರು ಎನ್ ಎಚ್ 150ಎ ರಸ್ತೆಯಿಂದ ಮಾರಲದಿನ್ನಿವರೆಗೆ ರಸ್ತೆ ಕಾಮಗಾರಿ ಭೂಮಿ ಪೂಜೆಗೆ ಬಸನಗೌಡ ತುರವಿಹಾಳ ಚಾಲನೆ ನೀಡಿದರು. ಮಧ್ಯಾಹ್ನ ಗಚ್ಚಿನ ಹಿರೇಮಠದ ಕಲ್ಯಾಣ ಮಂಟಪದಲ್ಲಿ ನೌಕರರ ಸಂಘದ ಮತ್ತು ಶಿಕ್ಷಕರ ಸಂಘ ಸ್ಕೌಟ್ ಅಂಡ್ ಗೈಡ್ಸ್ ವತಿಯಿಂದ ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಮೂರು ಸಂಘದ ವತಿಯಿಂದ ಶಾಸಕರಿಗೆ ಸನ್ಮಾನ ಮಾಡಲಾಯಿತು. ವೇದಿಕೆಯನ್ನು ಉದ್ದೇಶಿಸಿ ಮಾತನಾಡಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಸ್ವಾಮಿ ಶಿಕ್ಷಕ ಹಂಪನಾಳ,

ಶಿಕ್ಷಕರ ಮತ್ತು ಅವರ ಬೇಡಿಕೆಗಳು ಈಡೇರಿಸಬೇಕು ಮತ್ತು  ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಮಸ್ಕಿ ಕಾಯಂಗೊಳಿಸಬೇಕು. ಲಿಂಗಸ್ಗೂರು ಮಾನ್ವಿ ಸಿಂಧನೂರ್ ಸಂಪನ್ಮೂಲ ಶಿಕ್ಷಣ ಕೇಂದ್ರ ಕಿರಲ್ ಆಗುವುದರಿಂದ ಶಿಕ್ಷಕರ ಬಹಳ ತೊಂದರೆಯಾಗುತ್ತಿದ್ದು, ಆದ ಕಾರಣ ಮಸ್ಕಿ ಕ್ಷೇತ್ರಕ್ಕೆ ಸಂಬಂಧಪಡುವ ಸಂಪನ್ಮೂಲ ಕಲ್ಪಿಸಿಕೊಡಬೇಕು. 

ಸರಕಾರಿ ನೌಕರರ ಸಮಸ್ಯೆಯ 
ಪರಿಹರಿಸಬೇಕು, ಹಳೆ ಶಾಲಾ ಕಟ್ಟಡಗಳು ನಿರ್ಮಾಣ ಹಂತದಲ್ಲಿರುವ ಶಾಲಾ ಕಟ್ಟಡಗಳ ಪೂರ್ಣಗೊಳಿಸಬೇಕು, ಶಿಕ್ಷಕರಿಗೆ ಸಂಬಂಧ ಎಲ್ಲಾ ಸಮಸ್ಯೆ ಪರಿಹರಿಸಬೇಕು, ಮಸ್ಕಿ ತಾಲೂಕ್ ಆಗಿ ಮೂರು ವರ್ಷ ಗತಿಸಿದರು ಮಸ್ಕಿಯಲ್ಲಿ ಸುಮಾರು 48 ಸರಕಾರಿ ಕಚೇರಿಗಳು ಮಸ್ಕಿಯಲ್ಲಿ ಆದರೆ ಹೆಸರಿಗಷ್ಟೇ 4 ಅಥವಾ 5 ಸರಕಾರಿ ಕಚೇರಿಗಳು ಪ್ರಾರಂಭವಾಗಿವೆ, ಮಿಕ್ಕದನ್ನು ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿದರು.

ಪುರಸಭೆ ಮುಖ್ಯ ಅಧಿಕಾರಿ, ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಅವರನ್ನು ಸನ್ಮಾನಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು