7:36 AM Tuesday8 - July 2025
ಬ್ರೇಕಿಂಗ್ ನ್ಯೂಸ್
ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಮಾರ್ಚ್ 15: ಬೆಂಗಳೂರಿನಲ್ಲಿ ಪಂಚಮಸಾಲಿ ದುಂಡು ಮೇಜಿನ ಪರಿಷತ್; ಮೀಸಲಾತಿ ಹೋರಾಟಕ್ಕೆ ರೂಪುರೇಷೆ

13/03/2022, 10:18

ಬೆಂಗಳೂರು(reporterkarnataka.com):ಪಂಚಮ ಸಾಲಿ ದುಂಡು ಮೇಜಿನ ಪರಿಷತ್ತು ಹಾಗೂ  ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ( ಲಿಂಗಾಯತ ಗೌಡ ಮಲೆಗೌಡ ದೀಕ್ಷಾ ಲಿಂಗಾಯತ)ಮೀಸಲಾತಿ ಚಳುವಳಿಗಾರರ ಸಭೆ ಬೆಂಗಳೂರಲ್ಲಿ ಮಾರ್ಚ್15ರಂದು ಬೆಂಗಳೂರಿನ ರಾಜಭವನ ರಸ್ತೆಯಲ್ಕಿರುವ ಪರಾಗ್ ಹೊಟೇಲ್ ನಲ್ಲಿ ನಡೆಯಲಿದೆ. 

ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ಕೂಡಲಸಂಗಮ ಪ್ರಥಮ ಜಗದ್ಗುರುಗಳ ನೇತೃತ್ವದ ಸತ್ಯಾಗ್ರಹ ಸಂಧರ್ಭದಲ್ಲಿ ಸರಕಾರ ಕೊಟ್ಟ ಭರವಸೆಗೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಕುರಿತು ಸಿದ್ದತಾ ಸಭೆ ನಡೆಯಲಿದೆ.

ಪಂಚಮಸಾಲಿ ಮೀಸಲಾತಿ ಪಾದಯಾತ್ರೆ ಪ್ರವರ್ತಕ, ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಧರ್ಮಕ್ಷೇತ್ರ ಕೂಡಲಸಂಗಮ ಇದರ ಪ್ರಥಮ ಜಗದ್ಗುರು ಶ್ರಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಪಸ್ಥಿತರಿರುವರು.

ಸಭೆಯಲ್ಲಿ ಹಾಲಿ -ಮಾಜಿ ಜನಪ್ರತಿನಿಧಿಗಳು,ಅ.ಭಾ.ಲಿಂ.ಪಂಚಮಸಾಲಿ ಟ್ರಸ್ಟ್ , ಯವ ಘಟಕ, ಪಂಚ ಸೇನಾ, ಮಹಿಳಾ ಚನ್ನಮ್ಮ ನ ಬಳಗ , ರೈತ ಘಟಕ, ಎಲ್ ಪಿ ವಿ ಪಿ ಘಟಕ, ವೈದ್ಯಕೀಯ ಘಟಕ, ಸಾಮಾಜಿಕ ಜಾಲತಾಣ ಘಟಕ , ಐಟಿಬಿಟಿ ಘಟಕ ,ಸಾಹಿತ್ಯ ಘಟಕ , ಕಾನೂನು ಘಟಕ, ದಾಸೊಹ ಘಟಕ ವಿವಿಧ ರಾಷ್ಟ್ರೀಯ, ರಾಜ್ಯ ,ಜಿಲ್ಲಾ ,ತಾಲೂಕು ,ನಗರ ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.


ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್,  ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು, ಎಚ್ ಎಸ್ ಶಿವಶಂಕರ, ಮಾಜಿ ಮೇಯರ್ ಪುಟ್ಟರಾಜು, ಡಾ.ಬಿ.ಎಸ್.ಪಾಟೀಲ್ ನಾಗರಲ್ ಹುಲಿ,  ಕಿರಣ್ ಪಾಟೀಲ, ಶಿವಕುಮಾರ್ ಮೇಟಿ ಮುಂತಾದವರು ಉಪಸ್ಥಿತರಿರುವರು.

ಇತ್ತೀಚಿನ ಸುದ್ದಿ

ಜಾಹೀರಾತು