11:29 AM Tuesday25 - June 2024
ಬ್ರೇಕಿಂಗ್ ನ್ಯೂಸ್
ಸೋಮವಾರಪೇಟೆ ಪ್ರವಾಸಕ್ಕೆ ತೆರಳಿದ್ದ ಪುತ್ತೂರಿನ ಕುಟುಂಬದ ಮೇಲೆ ಇಬ್ಬರು ಗೂಂಡಾಗಳಿಂದ ಹಲ್ಲೆ, ದೌರ್ಜನ್ಯ:… 18ನೇ ಲೋಕಸಭೆ ಪ್ರಥಮ ವಿಶೇಷ ಅಧಿವೇಶನ ಆರಂಭ: ಹಂಗಾಮಿ ಸ್ಪೀಕರ್ ಆಯ್ಕೆ; ನೂತನ… ಮುಳಿಯ ಜ್ಯುವೆಲ್ಸ್ ನಲ್ಲಿ ‘ಚಿನ್ನದಂತ ಅಪ್ಪ ನನ್ನ ಅಪ್ಪ’ ವಿಶೇಷ ಅನುಬಂಧ ಕಾರ್ಯಕ್ರಮ ಪಿಲಿಕುಳದಲ್ಲಿ 2 ದಿನಗಳ ಹಣ್ಣು ಹಂಪಲು ಮೇಳ: ಗಮನ ಸೆಳೆದ ಫ್ರುಟ್ಸ್- ವೆಜಿಟೇಬಲ್ಸ್… ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ಚಿತ್ತರಂಜನ್ ಬೋಳಾರ್‌ ಅವರಿಗೆ ಸಿದ್ಧಗಂಗಾ ರಾಷ್ಟ್ರೀಯ… ಮಂಗಳೂರು ವಿವಿ ಯಕ್ಷಮಂಗಳ ಪ್ರಶಸ್ತಿ ಪ್ರಕಟ: ಶ್ರೀಧರ ಹಂದೆ, ಎಂ.ಕೆ.ರಮೇಶ್ ಆಚಾರ್ಯ ಆಯ್ಕೆ:… ಅಂತಾರಾಷ್ಟ್ರೀಯ ಯೋಗ ದಿನ ಮತ್ತು ವಿಶ್ವ ಸಂಗೀತ ದಿನದಂದು ಯೋಸಿಕ್ ಲೈಫ್ ಅಳವಡಿಸಿಕೊಳ್ಳಲು… ಬರ್ಬರವಾಗಿ ಹತ್ಯೆಗೀಡಾದ ರೇಣುಕಾ ಸ್ವಾಮಿ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ:… ಬಿಜೆಪಿ ನಾಯಕ ಭಾನುಪ್ರಕಾಶ್ ಹೃದಯಾಘಾತಕ್ಕೆ ಬಲಿ: ರಾಜ್ಯ ಸರಕಾರ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿ… ಮಂಗಳೂರು ವಿವಿ 42ನೇ ಘಟಿಕೋತ್ಸವ: 155 ಮಂದಿಗೆ ಪಿಎಚ್.ಡಿ; ಮೂವರು ಉದ್ಯಮಿಗಳಿಗೆ ಗೌರವ…

ಇತ್ತೀಚಿನ ಸುದ್ದಿ

ಮಂಗಳೂರು ವಿವಿ ಘಟಿಕೋತ್ಸವ ರಾಜ್ಯಪಾಲರಿಂದ ಹೈಜಾಕ್?: ಪಿಎಚ್ ಡಿ ವಿದ್ಯಾರ್ಥಿಗಳ ಫೋಟೋ ಕ್ಲಿಕ್ಕಿಸುವ ಕನಸಿಗೆ ಕಲ್ಲು ಚಪ್ಪಡಿ ಎಳೆದ ಗೆಹ್ಲೋಟ್!

15/06/2024, 23:54

ಮಂಗಳೂರು(reporterkarnataka.com): ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ವಿವಿ ಘಟಿಕೋತ್ಸವ ಕಾರ್ಯಕ್ರಮವನ್ನು ರಾಜ್ಯಪಾಲರು ಹೈಜಾಕ್ ಮಾಡಿದ ಘಟನೆ ನಡೆದಿದೆ. ರಾಜ್ಯಪಾಲರ ಮೊಂಡುತನದಿಂದ ಪಿಎಚ್ ಡಿ ಪಡೆದ ವಿದ್ಯಾರ್ಥಿಗಳು ಅವರ(ರಾಜ್ಯಪಾಲರ) ಕೈಯಿಂದ ಸರ್ಟಿಫಿಕೇಟ್ ಪಡೆಯುವ ಅವಕಾಶದಿಂದ ವಂಚಿತರಾಗಿದ್ದಾರೆ.
ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದ ಈ ಎಲ್ಲ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಕುಲಾಧಿಪತಿಯೂ ಆಗಿರುವ ಘನವೆತ್ತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಡೀ ಕಾರ್ಯಕ್ರಮವನ್ನು ತನಗೆ ಬೇಕಾದಂತೆ ಬದಲಾಯಿಸಿ ದರ್ಬಾರು ನಡೆಸಿದರು.
ಪ್ರತಿ ವರ್ಷದಂತೆ ಶಿಷ್ಠಾಚಾರ ಪ್ರಕಾರ ಸಮಾರಂಭ ನಡೆಸಲು ಮಂಗಳೂರು ವಿವಿ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಿದ್ಧತೆ ನಡೆಸಿದ್ದರು. ಆದರೆ ರಾಜ್ಯಪಾಲ ಗೆಹ್ಲೋಟ್ ಅದನ್ನೆಲ್ಲ ತಲೆಕೆಳಗೆ ಮಾಡಿಬಿಟ್ಟರು. ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲರು
ಕುಳಿತಲ್ಲಿಂದಲೇ ಏರುಧ್ವನಿಯಲ್ಲೇ ತಮಗೆ ಬೇಕಾದ ರೀತಿಯಲ್ಲಿ ಕಾರ್ಯಕ್ರಮ ನಡೆಸಲು ನಿರ್ದೇಶಿಸುತ್ತಿದ್ದರು. ರಾಜ್ಯಪಾಲರ ಅಂಗರಕ್ಷಕ್ಕೆ ಸಹಾಯಕ್ಕೆ ನಿಂತಿದ್ದರು.
ರಾಜ್ಯಪಾಲರು ಘಟಿಕೋತ್ಸವದ ಕೊನೆಯಲ್ಲಿ ಹಾಡಬೇಕಿದ್ದ ರಾಷ್ಟ್ರಗೀತೆಯನ್ನು ಆರಂಭದಲ್ಲೇ ಹಾಡಲು ಸೂಚಿಸಿದರು. ಹಾಗೆ ಡಾಕ್ಟರೇಟ್ ಪಡೆದ ವಿದ್ಯಾರ್ಥಿಗಳು ಈ ಬಾರಿ ರಾಜ್ಯಪಾಲರಿಂದ ಪಿಎಚ್ ಡಿ ಸರ್ಟಿಫಿಕೇಟ್ ಪಡೆದು ಫೋಟೋ ಕ್ಲಿಕ್ಕಿಸಿಕೊಳ್ಳುವ ಅವಕಾಶದಿಂದ ವಂಚಿತರಾಗಬೇಕಾಯಿತು. ಸಾಮಾನ್ಯವಾಗಿ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿಯನ್ನು ರಾಜ್ಯಪಾಲರು ತಮ್ನ ಕೈಯಿಂದಲೇ ನೀಡುವುದು ವಾಡಿಕೆ. ಸಾಧನೆ ಮಾಡಿ ಪಿಎಚ್ ಡಿ ಪಡೆದ ವಿದ್ಯಾರ್ಥಿಗಳು ರಾಜ್ಯಪಾಲರಿಂದ ಸರ್ಟಿಫಿಕೇಟ್ ಪಡೆಯುವ ಸಂತಸ ಹಾಗೂ ಹೆಮ್ಮೆಯ ಕ್ಷಣವನ್ನು ಅವಿಸ್ಮರಣೀಯಗೊಳಿಸಲು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಇಂತಹ ಅವಕಾಶಕ್ಕೆ ರಾಜ್ಯಪಾಲರು ಕಲ್ಲು ಚಪ್ಪಡಿ ಎಳೆದಿದ್ದಾರೆ. ಸಂಶೋಧನಾರ್ಥಿಗಳಿಗೆ ಪಿಎಚ್.ಡಿ. ಸರ್ಟಿಫಿಕೇಟ್‌ನ್ನು ಕಾರ್ಯಕ್ರಮದ ಮೊದಲೇ ಹಂಚಿ ನಂತರ ಎಲ್ಲರನ್ನೂ ಒಟ್ಟಿಗೆ ವೇದಿಕೆಗೆ ಕರೆದು ರಾಜ್ಯಪಾಲರು ಗ್ರೂಪ್ ಪೊಟೋಗೆ ಫೋಸ್ ನೀಡಿ ಕೈತೊಳೆದುಕೊಂಡಿದ್ದಾರೆ. ಕೇಂದ್ರ ಸರಕಾರ ಈ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಲಿ ಎನ್ನುವುದು ಈಗ ಕೇಳಿ ಬರುತ್ತಿರುವ ಹಕ್ಕೊತ್ತಾಯ.

ಇತ್ತೀಚಿನ ಸುದ್ದಿ

ಜಾಹೀರಾತು