4:05 PM Saturday17 - May 2025
ಬ್ರೇಕಿಂಗ್ ನ್ಯೂಸ್
ಆಪರೇಷನ್ ಸಿಂಧೂರ್; ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಕಾಂಗ್ರೆಸ್ ಅಂತರಾತ್ಮದ ದನಿ: ಕೇಂದ್ರ… Davanagere | ಸ್ವಾಭಿಮಾನದಿಂದ‌ ಎರಡನೇ ವರ್ಷದ ಸಂಭ್ರಮಾಚರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದುರ್ಬಲ ಗ್ರಾಪಂಗಳ ದತ್ತು ಪಡೆದು ಸಮಗ್ರ ಅಭಿವೃದ್ಧಿಪಡಿಸಿ: ಸಿಇಒಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ… ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಇಂದಿನಿಂದ ಜಾರಿ; ಪ್ರಾಧಿಕಾರ ರಚನೆ ಮರದ ಕೊಂಬೆಗಳ ಮಧ್ಯೆ ಸಿಲುಕಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯ ರಕ್ಷಣೆ: ಅಗ್ನಿಶಾಮಕ ದಳ… ಲೋಕಾಯುಕ್ತ ಅಧಿಕಾರಿಗಳಿಂದ ಮತ್ತೆ ಭ್ರಷ್ಟರ ಭೇಟೆ: ಬೆಂಗಳೂರು, ಮಂಗಳೂರು ಸಹಿತ 7 ನಗರಗಳ… ಮಂಗಳೂರು: ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ;… Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ

ಇತ್ತೀಚಿನ ಸುದ್ದಿ

Mangaluru | ಪಾಕಿಗೆ ಮೂರೇ ದಿನ ಯುದ್ದ ಮಾಡುವ ಸಾಮರ್ಥ್ಯ: ನಿವೃತ್ತ ವಾಯುಸೇನಾಧಿಕಾರಿ ಅರವಿಂದ ಕುದ್ಕೋಳಿ

30/04/2025, 20:42

ಮಂಗಳೂರು(reporterkarnataka.com): ಸೇನೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುವಲ್ಲಿ ಬ್ರಾಹ್ಮಣರು ಹಿಂದೆ ಉಳಿದಿಲ್ಲ. ನಾನು ಸೇನಾಧಿಕಾರಿಯಾಗಿ ಆಯ್ಕೆಯಾದ ಬ್ಯಾಚ್‌ನ 7 ಮಂದಿಯಲ್ಲಿ ಐವರು ಬ್ರಾಹ್ಮಣರೇ ಆಗಿದ್ದರು ಎಂದು ನಿವೃತ್ತ ವಾಯಸೇನಾ ಅಧಿಕಾರಿ ಅರವಿಂದ ಕುದ್ಕೋಳಿ ಹೇಳಿದರು.


ಕದ್ರಿ ಮಂಜುನಾಥ ಕ್ಷೇತ್ರ ಆವರಣದ ಮಾತಾಕೃಪಾದಲ್ಲಿ ಶಿವಳ್ಳಿ ಸ್ಪಂದನ ಆಯೋಜಿಸಿದ “ಯುಗಾದಿ ಸಂಭ್ರಮ”ದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ಪಾಕಿಸ್ತಾನ ವಿರುದ್ದ ಭಾರತ ಯುದ್ದ ಮಾಡಿದರೆ ಅದಕ್ಕೆ ಬೇರೆ ದೇಶಗಳ ಬೆಂಬಲ ಸಿಗದೇ ಇದ್ದಲ್ಲಿ ಕೇವಲ ಮೂರೇ ದಿನದಲ್ಲಿ ಯುದ್ಧ ಮುಗಿಯುತ್ತದೆ ಎಂದರು.
ನಮಗೆ ದೇಶದ ವಿಚಾರ ಮಾತನಾಡುವಾಗಲೇ ರೋಮಾಂಚನವಾಗುತ್ತದೆ. ಆ ರೀತಿಯ ತರಬೇತಿ ನಮಗೆ ನೀಡಲಾಗುತ್ತದೆ. ಬೆಟಾಲಿಯನ್‌ ಕಾರ್ಯಾಚರಣೆ ನಡೆಸುವ ವೇಳೆ ಜೈ ಶ್ರೀರಾಮ್‌ ಎಂದು ಉದ್ಘೋಷಿಸುವಾಗ ವೈರಿಗಳ ಗುಂಡಿಗೆ ಸೀಳುವ ಧೈರ್ಯ ಶಕ್ತಿ ಸಂಚಯವಾಗುತ್ತದೆ ಎಂದರು.
ಅಧ್ಯಕ್ಷತ ವಹಿಸಿದ್ದ ಕದ್ರಿ ಕ್ಷೇತ್ರದ ತಂತ್ರಿವರೇಣ್ಯ ವೇದಮೂರ್ತಿ ಶ್ರೀ ವಿಠ್ಠಲದಾಸ ತಂತ್ರಿ ಆಶೀರ್ವಚನ ನೀಡಿ, ಬ್ರಾಹ್ಮಣರು ಶಾಸ್ತ್ರ ಅಧ್ಯಯನ ನಡೆಸಿದರೆ ಸಾಲದು, ಶಸ್ತ್ರಗಳ ಬಳಕೆಯೂ ಗೊತ್ತಿರಬೇಕು. ಮೂರು ವೇದಗಳಲ್ಲಿ ಶಾಸ್ತ್ರಗಳ ಅಧ್ಯಯನ ಇದ್ದರೆ, ಅಥರ್ವ ವೇದದಲ್ಲಿ ಶತ್ರು ಸಂಹಾರ ವಿಚಾರಗಳಿವೆ ಎಂದರು. ಸಮಾಜದಲ್ಲಿರುವ ಸಮಸ್ಯೆ, ಸಂದೇಹಗಳ ಕುರಿತು ವಿಪ್ರ ಸಂಘಟನೆಗಳು ಸ್ವಾಮೀಜಿಗಳಿಗೆಮನವರಿಕೆ ಮಾಡಿಸಿ ಮಠಗಳು ಸಮುದಾಯಗಳ ಏಳಿಗೆಗೆ ಕೆಲಸ ಮಾಡುವಂತಾಗಬೇಕು ಎಂದರು.ಜ್ಯೋತಿಷ್ಯ ವಿದ್ವಾನ್‌ ವೇದ ಮೂರ್ತಿ ವಾದಿರಾಜ ಉಪಾಧ್ಯಾಯ ಪ್ರವಚನ ನೀಡಿ, ಯುಗಾದಿಯಂದು ದೇವಸ್ಥಾನಗಳಲ್ಲಿ ಪಂಚಾಂಗ ಶ್ರವಣ ಮಾಡಿ, ಆ ವರ್ಷದ ಮಳೆ-ಬೆಳೆ ಕುರಿತು ಜನರಿಗೆ ಹೇಳುತ್ತಿದ್ದರು. ಇತ್ತೀಚೆಗೆ ಅರ್ಚಕರು ಮಾತ್ರ ಹೇಳಿ ಮುಗಿಸುತ್ತಾರೆ. ಹಳೆಯ ಸಂಪ್ರದಾಯಗಳನ್ನು ತ್ಯಜಿಸದೆ ಸನಾತನ ಸಂಸ್ಕೃತಿ ಮುಂದುವರಿಯಬೇಕು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸ್ವಸ್ತಿಕ ನ್ಯಾಷನಲ್‌ ಬಿಸಿನೆಸ್ ಸ್ಕೂಲ್‌ ಪ್ರಾಂಶುಪಾಲೆ ಮಾಲಿನಿ ಹೆಬ್ಬಾರ್,‌ ಗಣೇಶ್ ಭಟ್ ಶರವು, ನಿವೃತ್ತ ವಾಯಸೇನಾ ಅಧಿಕಾರಿ ಅರವಿಂದ ಕುದ್ಕೋಳಿ, ಉದ್ಯಮಿ ಹರಿರಾವ್, ವಿಠಲದಾಸ ತಂತ್ರಿ, ವಿಜಯಲಕ್ಷ್ಮೀ ರಾವ್‌, ವಾದಿರಾಜ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಯಿತು. ಶ್ರೀನಿವಾಸ ಸಮೂಹ ಸಂಸ್ಥೆಯ ವಿಜಯಲಕ್ಷ್ಮೀ ರಾವ್, ಶಿವಳ್ಳಿ ಸ್ಪಂದನ ಸ್ಥಾಪಕ ಸದಸ್ಯ ವಾಸುದೇವ ಭಟ್‌ ಕುಂಜತ್ತೋಡಿ, ಕೋಶಾಧಿಕಾರಿ ರಘುರಾಮ ಭಟ್‌, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಮಾಮಣಿ, ಕದ್ರಿ ವಲಯ ಗೌರವಾಧ್ಯಕ್ಷ ರಾಮಚಂದ್ರ ಭಟ್‌ ಎಲ್ಲೂರು, ವಲಯ ಕಾರ್ಯದರ್ಶಿ ಶೀಲಾ ಜಯಪ್ರಕಾಶ, ಉಪಾಧ್ಯಕ್ಷ ನೋಡ್‌ ಹರೀಶ್‌ ಆಚಾರ್‌, ವಲಯ ಕೋಶಾಧಿಕಾರಿ ರವಿಕಾಂತ ಭಟ್‌, ಪದಾಧಿಕಾರಿ ಪ್ರದೀಪ್‌ ರಾವ್ ಇದ್ದರು.
ಸ್ಥಾಪಕಾಧ್ಯಕ್ಷ ಕೃಷ್ಣ ಭಟ್ ಸ್ವಾಗತಿಸಿದರು. ಕದ್ರಿ ವಲಯದ ಉಪಾಧ್ಯಕ್ಷ ಸುಧಾಕರ್ ಭಟ್ ಆರೂರು ವಂದಿಸಿದರು. ಸ್ಥಾಪಕ ಸದಸ್ಯ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ವಲಯಗಳ ಸದಸ್ಯರಿಂದ ಸಂಗೀತ, ನೃತ್ಯ, ಕೊಳಲು ವಾದನ, ಕಿರು ನಾಟಕ ನಡೆಯಿತು. ವನಿತಾ ಎಲ್ಲೂರು ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಯುಗಾದಿಯ ವಿಶೇಷ ಖಾದ್ಯಗಳೊಂದಿಗೆ ಉಪಹಾರವನ್ನು ಸಂಪ್ರದಾಯದಂತೆ ಉಣಬಡಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು