ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ಕದ್ರಿ ರೋಲರ್ಸ್ ಸ್ಕೇಟಿಂಗ್ ಕ್ಲಬ್ ಆರಂಭ: ನೂತನ ಅಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆ
03/07/2022, 20:20

ಮಂಗಳೂರು(reporterkarnataka.com):ಮಂಗಳೂರಿನಲ್ಲಿ ನೂತನವಾಗಿ “ಕದ್ರಿ ರೋಲರ್ಸ್ ಸ್ಕೇಟಿಂಗ್ ಕ್ಲಬ್(ರಿ)” ಆರಂಭಗೊಂಡಿದ್ದು, ಸ್ಥಾಪಕಾಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆಯಾಗಿದ್ದಾರೆ.
ನಗರದ ಕೆಪಿಟಿ ಸರ್ಕಲ್ ನ ಬಳಿಯ ಕದ್ರಿ ಪಾರ್ಕ್ ನಲ್ಲಿರುವ “ಅನಘಾಸ್ ಸ್ಕೇಟಿಂಗ್ ಅಕಾಡೆಮಿ”ಯಲ್ಲಿ ಇತ್ತೀಚೆಗೆ ನಡೆದ ಕ್ಲಬ್ ನ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದು, ಸರ್ವಾನುಮತದಿಂದ ಡಾ.ರಾಜೇಶ್ ಹುಕ್ಕೇರಿ ಅವರನ್ನು ಸ್ಥಾಪಕ ಅಧ್ಯಕ್ಷ ರಾಗಿ ಆಯ್ಕೆ ಮಾಡಲಾಗಿದೆ. ಕ್ಲಬ್ ನ ಉಪಾಧ್ಯಕ್ಷರಾಗಿ ಲಕ್ಷ್ಮೀಶ್ ಭಂಡಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸುಖ್ ಪಾಲ್ ಪೊಳಲಿ, ಜತೆ ಕಾರ್ಯದರ್ಶಿಯಾಗಿ ಅಖಿಲ್ ಆರ್.ಉಚ್ಚಿಲ್, ಖಜಾಂಚಿಯಾಗಿ ಡಾ.ಅನಿತಾ ರಾಜೇಶ್ ಹಾಗೂ ಸಮಿತಿ ಸದಸ್ಯರಾಗಿ ಯತೀಶ್ ಬೈಕಂಪಾಡಿ, ರವೀಂದ್ರನಾಥ್ ಉಚ್ಚಿಲ್, ರಾಜೇಶ್ ನಾಯರ್, ಡಾ.ಅಕ್ಷತಾ ಚರಣ್ ಆಳ್ವ ಆಯ್ಕೆಯಾಗಿದ್ದಾರೆ.