2:05 PM Sunday22 - June 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರದಲ್ಲಿ ಕಮೀಶನ್ ದಂಧೆ 224 ಶಾಸಕರಿಗೂ ಗೊತ್ತಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಅಜಾಗರೂಕತೆಯಿಂದ ಚಾಲನೆ ಮಾಡಿದರೆ ಚಾಲಕರ ವಿರುದ್ಧ ಕಠಿಣ ಕ್ರಮ: ಸಾರಿಗೆ ಸಚಿವ ರಾಮಲಿಂಗಾ… Bagalkote | ಪಟ್ಟದಕಲ್ಲು ವಿಶ್ವ ಪರಂಪರೆ ತಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… Udupi | ನೈತಿಕ ಪಾಠ ಶಾಸಕ ಸುನಿಲ್ ಕುಮಾರ್ ಹೇಳಿ ಕೊಡಬೇಕಿಲ್ಲ: ಸಚಿವೆ… ಜಿಲ್ಲಾಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿ ಯೋಗ ಮಂದಿರ ಸ್ಥಾಪನೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪಾಲಿಕೆ ಮೇಲೆ ಲೋಕಾಯುಕ್ತ ದಾಳಿ: ಕಂದಾಯ, ಆರೋಗ್ಯ ಹಾಗೂ ಎಂಜಿನಿಯರಿಂಗ್ ವಿಭಾಗಗಳ ತೀವ್ರ… Bangalore | ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ: ರಾಜ್ಯಾದ್ಯಂತ ಪರಿಸರ… Power Minister | ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ; ನೌಕರರ ಬೇಡಿಕೆಗಳಿಗೆ ಸ್ಪಂದನೆ:… ವಿದ್ಯುತ್ ಪ್ರಸರಣ ಇಲಾಖೆಯ 532 ಮಂದಿ ಪೌರ ಕಾರ್ಮಿಕರ ಹುದ್ದೆ ಕಾಯಂ: ಮುಖ್ಯಮಂತ್ರಿ… ಎಂಜಿಎನ್ ವಿವೈ ಕ್ರಿಯಾ ಯೋಜನೆ ಸಿದ್ಧಪಡಿಸದ ಅಧಿಕಾರಿಗಳ ವಿರುದ್ಧ ಕ್ರಮ: ನಗರಾಭಿವೃದ್ಧಿ ಸಚಿವ…

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ: ಪ್ರಬಲ ಹೋರಾಟಕ್ಕೆ ಸಜ್ಜು

14/10/2024, 20:40

ಮಂಗಳೂರು(reporterkarnataka.com):
ಹೈ ಕೋರ್ಟ್  ಪೀಠ ಹೋರಾಟ ಸಮಿತಿಯ ಸಭೆ ನಗರದ ಎಸ್ ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಹೈಕೋರ್ಟ್  ಪೀಠ ರಚನೆ
ಹೋರಾಟದ ಕಾನೂನು  ಮತ್ತು ಕೈಗೊಳ್ಳಬೇಕಾದ ಕ್ರಮ ಗಳ ಬಗ್ಗೆ ನ್ಯಾಯವಾದಿಗಳಾದ ಎಂ. ಪಿ. ನರೋನ್ನಾ ಅವರು ವಿವರಿಸಿದರು.
*ಸಭೆಯ ಮುಖ್ಯ ಅಂಶಗಳು:
*ಎಲ್ಲಾ ಸಾರ್ವಜನಿಕ ವಲಯದ ಜನತೆಯ ಪ್ರತಿನಿಧಿ ಗಳನ್ನು ಒಳಗೊಂಡ ನಿಯೋಗ ರಾಜ್ಯದ ಮುಖ್ಯಮಂತ್ರಿ, ಕಾನೂನು ಸಚಿವರನ್ನು ಭೇಟಿ ಯಾಗಿ ಮನವಿ ಸಲ್ಲಿಸಿ  ಪೀಠ ಸ್ಥಾಪನೆಗೆ ಒತ್ತಾಯಿಸುವುದು.

*ಸಾಧ್ಯವಾದರೆ ಮಂಗಳೂರು ನಗರದ ಒಳಗೆ ಅಥವಾ ಮಂಗಳೂರು ಉಡುಪಿ ಮದ್ಯದಲ್ಲಿ ಜಾಗ ನಿಗದಿ ಪಡಿಸಲು ಪ್ರಯತ್ನ ಮಾಡುವುದು.
ಮಂಗಳೂರನಲ್ಲಿ ಸರ್ಕಿಟ್ ಹೌಸ್ ಹತ್ತರದಲ್ಲಿ  ಇರುವ   ಸುಮಾರು 8 ಜಾಗವನ್ನು ಹೈ ಕೋರ್ಟ್ ಪೀಠಕ್ಕೆ ಮೀಸಲು ಇಡಲು ಪ್ರವಾಸೋದ್ಯಮ ಸಚಿವರಿಗೆ ಮನವಿ ಮಾಡುವುದು.
*ಹೋರಾಟದ ಭಾಗವಾಗಿ ಜನಭಿಪ್ರಾಯ ಮೂಡಿಸಲು ಮುಲ್ಕಿಯಿಂದ ಮಂಗಳೂರಿಗೆ  ಪಾದಯಾತ್ರೆ ನಡೆಸುವುದು.
*ಪೀಠ ಸ್ಥಾಪನೆಗೆ ಅಗ್ರಹಿಸಿ ಮಂಗಳೂರು ಬಂದ್ ಗೆ  ಕರೆ ನೀಡುವುದು.
*ಮುಂಬರುವ ರಾಜ್ಯ ಬಜೆಟ್ ನಲ್ಲಿ  ಹೈಕೋರ್ಟ್ ಪೀಠ ಸ್ಥಾಪನೆಗೆ 25 ಕೋಟಿ ಅನುದಾನ ಒದಗಿಸುವಂತೆ  ಸರ್ಕಾರವನ್ನು ಅಗ್ರಹಿಸುವುದು.
*ರಾಜಕೀಯ, ಸಾಮಾಜಿಕ, ಧಾರ್ಮಿಕ, ಮತ್ತು ಇತರ ಎಲ್ಲಾ ವಲಯ ದ ಪ್ರಭಾವಿ ವ್ಯಕ್ತಿಗಳ ಬೆಂಬಲ ಒಡೆದು ಕೊಳ್ಳುವುದು.
*ಆರು ಜಿಲ್ಲೆಯ ಪ್ರಮುಖರನ್ನು ಮುಖತಃ ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಕೇಳುವುದು.
*ಆರು ಜಿಲ್ಲೆಯ ಪ್ರಮುಖ, ಪ್ರಭಾವಿ ವ್ಯಕಿಗಳನ್ನು ಒಳಗೊಂಡ ಶಾಶ್ವತ ಹೈಕೋರ್ಟ್ ಹೋರಾಟ ಸಮಿತಿ ರಚಿಸುವುದು.
*ಆರು ಜಿಲ್ಲೆಯ ಎಲ್ಲಾ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳನ್ನು ಸಭೆ ನಡೆಸಿ ಹೋರಾಟದಲ್ಲಿ ಭಾಗವಹಿಸುವಂತೆ ಸಭೆಗಳನ್ನು ಮಾಡುವುದು.
*ಹೈಕೋರ್ಟ್ ಸಂಚಾರಿ ಪೀಠ ಕ್ಕೆ ಒತಾಯ ಮಾಡುವುದು
*ಕಲಬರ್ಗಿ ಮತ್ತು ಧಾರಾವಾಡ ಪೀಠಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ತಯಾರಿ.
*ವೀರಪ್ಪ ಮೊಯ್ಲಿ ಸೇರಿ ಅನೇಕ ಪ್ರಭಾವಿ ವ್ಯಕಿಗಳನ್ನು ಭೇಟಿ ಮಾಡಿ ಬೆಂಬಲ ಕೇಳುವುದು.

*ಈ ಕುರಿತು ರಾಜ್ಯ ಪ್ರವಾಸಕ್ಕೆ ತಂಡ ರಚನೆ.
*ಕಾನೂನು ಹೋರಾಟಕ್ಕೆ, ಸಾರ್ವಜನಿಕರ ಭೇಟಿ, ವಕೀಲರು ಸಂಘದ ಭೇಟಿ, ಪ್ರಚಾರ ಮತ್ತು ಮಾಧ್ಯಮ ಸಮಿತಿ ಹೀಗೆ ಅಗತ್ಯಕ್ಕೆ ತಕ್ಕುದಾಗಿ ಸಮಿತಿ ರಚನೆ ಮಾಡುವುದು
*ಪ್ರತಿ ತಾಲ್ಲೂಕಿನಲ್ಲಿ ಹಕ್ಕೋತ್ತಾಯ ಸಭೆ /ಕಾರ್ಯಕ್ರಮ ಆಯೋಜನೆ ಮಾಡುವುದು
*ಹೋರಾಟದ ಪರವಾಗಿ ಇರುವ ಎಲ್ಲ ಉಚ್ಚ ನ್ಯಾಯಾಲಯಗಳ ಅದೇಶ ಗಳಿಗೆ ಅನುಗುಣವಾಗಿ ಹೋರಾಟದ ರೂಪುರೆಷೆ ರಚನೆ.
*ಬೆಂಬಲ ಕೋರಿ ಸಹಿ ಸಂಗ್ರಹ ಅಭಿಯಾನ ನಡೆಸುವುದು
*ವಿವಿಧ ಸಂಘಟನೆ ಗಳನ್ನು ಹೋರಾಟದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವುದು
*ದ. ಕ ಜಿಲ್ಲೆಯ ಎಲ್ಲಾ ವಕೀಲರು ಸಂಘ ದ ಅಧ್ಯಕ್ಷರು, ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ, ಉಪಾಧ್ಯಕ್ಷರು, ಖಜಾಂಜಿ ಸೇರಿ ಕೋರ್ ಕಮಿಟಿ ರಚಿಸಲಾಯಿತು ಮತ್ತು ಈ ಕಮಿಟಿಯ whatapp group ಮಾಡುವುದು.
ಸಭೆಯಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಸಂಚಾಲಕರು ಐವನ್ ಡಿ ಸೋಜಾ,  ಹೈಕೋರ್ಟ್ ಪೀಠ  ಸಮಿತಿ ಅಧ್ಯಕ್ಷರು ಮತ್ತು ಮಂಗಳೂರು ವಕೀಲರ  ಸಂಘ ದ ಅಧ್ಯಕ್ಷರು ಹೆ. ವಿ. ರಾಘವೇಂದ್ರ, ಎಸ್ ಡಿಎಂ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ಮಹೇಶ್ಚಂದ್ರ, ಹಿರಿಯ ವಕೀಲರಾದ ಟಿ. ಎನ್. ಪೂಜಾರಿ, ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರುಗಳಾದ ಎಂ. ಆರ್. ಬಲ್ಲಾಳ್, ಪ್ರಥ್ವಿರಾಜ್ ರೈ, ಮಾಜಿ ಕಾರ್ಯದರ್ಶಿ ಶ್ರೀಧರ್ ಯೆನ್ಮಾಕಜೆ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು