ಇತ್ತೀಚಿನ ಸುದ್ದಿ
ಮಂಗಳೂರು ಕ್ಲಾಕ್ ಟವರ್ ಸಮೀಪ ಅಗ್ನಿ ದುರಂತ ; ಸುಟ್ಟು ಕರಕಲಾದ ಅಂಗಡಿಯೊಳಗಿನ ವಸ್ತುಗಳು
14/06/2025, 12:18

ಮಂಗಳೂರು (reporterkarnataka.com)
ಮಂಗಳೂರಿನ ಕ್ಲಾಕ್ ಟವರ್ ಬಳಿಯ ಗುಜರಿ ಅಂಗಡಿಯಲ್ಲಿ ಶನಿವಾರ ಬೆಳಗ್ಗಿನ ಜಾವ ಅಗ್ನಿ ದುರಂತ ಸಂಭವಿಸಿ ಪಕ್ಕದ ಬಟ್ಟೆ ಅಂಗಡಿಗೂ ಬೆಂಕಿ ತಗುಲಿ ಅಪಾರ ನಷ್ಟ ಉಂಟಾಗಿದೆ.
ಗುಜರಿ ಅಂಗಡಿಯಲ್ಲಿ ಶಾರ್ಡ್ ಸರ್ಕ್ಯೂಟ್ನಿಂದಾಗಿ ಬೆಂಕಿ ತಗುಲಿರಬಹುದು ಎನ್ನಲಾಗುತ್ತಿದ್ದು, ಪಕ್ಕದ ಅಂಗಡಿಗಳಿಗೂ ಬೆಂಕಿ ಹಬ್ಬಿದೆ. ಮುಂಜಾವಿನ 2.30ರ ವೇಳಗೆ ಅಗ್ನಿ ದುರಂತ ಸಂಭವಿಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದರೂ ಅಂಗಡಿಗಳು ಸುಟ್ಟು ಕರಕಲಾಗಿವೆ.
ಟೆಂಪೋ, ಅಂಗಡಿ ಹಾಗೂ ವಸ್ತುಗಳು ಸುಟ್ಟು ಸುಮಾರು 15ಲಕ್ಷ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.