12:36 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

Mangaluru | ಮದುವೆ ಸಂಬಂಧದ ಬಗ್ಗೆ ಮನಸ್ತಾಪ ; ಚಿಕ್ಕಪ್ಪನನ್ನೆ ಕೊಂದ ಮುಸ್ತಾಫ

23/05/2025, 10:34

ಮಂಗಳೂರು (www.reporterkarnataka.com)

ಮದುವೆ ಸಂಬಂಧ ವಿಚಾರ ಕುರಿತು ತನ್ನ ಚಿಕ್ಕಪ್ಪನನ್ನೇ ಚೂರಿ ಇರಿದು ಕೊಂದ ಘಟನೆ ಮಂಗಳೂರಿನ ವಳಚ್ಚಿಲ್ ಬಳಿ ಗುರುವಾರ ರಾತ್ರಿ ನಡೆದಿದೆ. ವಾಮಂಜೂರಿನ ನಿವಾಸಿ ಸುಲೈಮಾನ್ (50) ಮೃತರಾಗಿದ್ದು, ಅವರ ತಮ್ಮನ ಮಗ ವಳಚ್ಚಿಲ್ ನಿವಾಸಿ ಮುಸ್ತಫಾ(30) ಚೂರಿ ಇರಿದು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಸುಲೈಮಾನ್ ಅವರ ಮಕ್ಕಳಾದ ರಿಯಾಬ್ ಹಾಗೂ ಸಿಯಾಬ್ ಅವರಿಗೂ ಮುಸ್ತಫಾ ಚೂರಿ ಇರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ : ಮದುವೆ ಬ್ರೋಕರ್ ಆಗಿ ಕೆಲಸ ಮಾಡುತ್ತಿರುವ ಸುಲೈಮಾನ್ ಅವರು ಎಂಟು ತಿಂಗಳ ಹಿಂದೆ ಮುಸ್ತಾಫ ಅವರಿಗೆ ಅಡ್ಡೂರು ಮೂಲದ ಶಹೀನಾಝ್ ಎನ್ನುವ ಹುಡುಗಿ ಹುಡುಕಿ ಮದುವೆ ಸಂಬಂಧವನ್ನು ಕುದುರಿಸಿದ್ದರು. ಮದುವೆಯಾದ ಬಳಿಕ ನಿರಂತರವಾಗಿ ಮುಸ್ತಾಫ ಹಾಗೂ ಪತ್ನಿಯ ನಡುವೆ ಮನಸ್ತಾಪ ಉಂಟಾಗುತ್ತಿತ್ತು ಹಾಗೂ ಹುಡುಗಿ ಮುಸ್ತಾಫ ಅನುಮತಿ ಇಲ್ಲದೆ ತವರು ಮನೆಗೆ ಹೋಗುತ್ತಿದ್ದಳು, ಮಾತ್ರವಲ್ಲದೆ ಇನ್ನೂ ಹಲವು ವಿಚಾರಗಳ ಬಗ್ಗೆ ಮುಸ್ತಾಫ ಕುಪಿತಗೊಂಡಿದ್ದ.
ಘಟನೆಯಾದ ದಿನದಂದು ಮುಸ್ತಾಫ ಸುಲೈಮಾನ್ ಅವರಿಗೆ ಕಾಲ್‌ ಮಾಡಿ ಅವಾಚ್ಯವಾಗಿ ಬೈದಿದ್ದು, ಅದಕ್ಕೆ ಪ್ರತಿಯಾಗಿ ವಿಚಾರದ ಕುರಿತು ಚರ್ಚಿಸಲು ಸುಲೈಮಾನ್ ತಮ್ಮ ಮಕ್ಕಳ ಜತೆಗೆ ವಳಚ್ಚಿಲ್‌ನ ಮುಸ್ತಾಫ ನಿವಾಸಕ್ಕೆ ತೆರಳಿದ್ದರು. ವಾಗ್ವಾದ ನಡೆದು ಫಲಕಾರಿಯಾಗಲಿಲ್ಲ ಎಂದು ಸುಲೈಮಾನ್ ವಾಪಾಸ್ ಮನೆ ಗೇಟ್‌ಗೆ ಬರುತ್ತಿದ್ದ ಸಂದರ್ಭ ಮುಸ್ತಾಫ ಚೂರಿ ತೆಗೆದುಕೊಂಡು ಬಂದು ಸುಲೈಮಾನ್ ಕುತ್ತಿಗೆಯ ಬಲ ಭಾಗಕ್ಕೆ ಇರಿದಿದ್ದು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಬಳಿಕ ಇಬ್ಬರೂ ಪುತ್ರರ ಮೇಲೂ ಚೂರಿಯಿಂದ ದಾಳಿ ಮಾಡಿದ್ದು, ಗಾಯಾಳುಗಳನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಸುಲೈಮಾನ್ ದಾರಿ ಮಧ್ಯದಲ್ಲಿ ಸಾವಿಗೀಡಾಗಿದ್ದಾರೆ.

ಮುಸ್ತಾಫನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು