ಇತ್ತೀಚಿನ ಸುದ್ದಿ
ಮದುವೆ ಛತ್ರದಲ್ಲಿ ನಾಟಕ ಮಾಡ್ಲಿಕ್ಕಾಗುತ್ತಾ ? ಮಂಗಳೂರಿಗೂ ರಂಗ ಮಂದಿರ ಬೇಕು : ಅಡ್ಡಂಡ ಕಾರ್ಯಪ್ಪ
10/05/2022, 21:37

ಮಂಗಳೂರು(ReporterKarnataka.com) ಮಂಗಳೂರಿಗೂ ರಂಗ ಮಂದಿರ ಬೇಕು. ಮದುವೆಯ ಛತ್ರದಲ್ಲಿ ನಾಟಕ ಮಾಡ್ಲಿಕೆ ಆಗುತ್ತಾ ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪ್ರಶ್ನಿಸಿದ್ದಾರೆ.
ಅವರು ಮಂಗಳವಾರ ನಗರದ ಪುರಭವನದಲ್ಲಿ ಪ್ರದರ್ಶನಗೊಂಡ ಪರ್ವ ಮಹಾ ರಂಗ ಪ್ರಯೋಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಂಗಳೂರಿಗೂ ರಂಗ ಮಂದಿರ ಬೇಕೆಂಬ ಕೂಗು ನಲ್ವತ್ತು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಇನ್ನೂ ಸಾಕಾರಗೊಂಡಿಲ್ಲ, ಇಲ್ಲಿಯ ಕಲಾವಿದರೊಂದಿಗೆ ನಾನೂ ಧ್ವನಿಗೂಡಿಸುತ್ತಿದ್ದೇನೆ, ಲಕ್ಷಗಟ್ಟಲೆ ಹಣ ಖರ್ಚು ಮಾಡಿ ನಾಟಕ ಪ್ರದರ್ಶನ ಮಾಡುವುದು ಸುಲಭ ಸಾಧ್ಯವಲ್ಲ, ಸಂಸ್ಕೃತಿ ಸಚಿವರಿಗೂ ಈ ಕೂಗು ಕೇಳಲಿ ರಂಗಮಂದಿರ ನಿರ್ಮಾಣವಾಗಲಿ ಎಂದರು.
ಎಸ್.ಎಲ್.ಭೈರಪ್ಪನವರಂತಹ ಮೇರು ಸಾಹಿತಿಯ ಮಹಾ ಕಾವ್ಯ ಪರ್ವವನ್ನು ರಂಗದಲ್ಲಿ ಬಿತ್ತರಿಸುವುದು ಕಠಿಣ ಕಾರ್ಯವಾಗಿತ್ತು ಅದನ್ನು ಬಹಳ ನಾಜೂಕಾಗಿ ನಿರ್ದೇಶಕ ಪ್ರಕಾಶ್ ಬೆಳವಾಡಿ ಮಾಡಿದ್ದಾರೆ. ಮಂಗಳೂರಿನಲ್ಲಿ ಇದು 33ನೇ ಪ್ರದರ್ಶನ ಕಾಣುತ್ತಿದೆ ಎಂದರು.
ಈ ಸಂದರ್ಭ ಹಿರಿಯ ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ, ತುಳು ರಂಗಭೂಮಿ ನಟ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಉಪಸ್ಥಿತರಿದ್ದರು.