ಇತ್ತೀಚಿನ ಸುದ್ದಿ
ಮಾರುತಿ ಒಮ್ನಿ- ಸ್ಯಾಂಟ್ರೋ ಡಿಕ್ಕಿ: ಭದ್ರಾವತಿಗೆ ತೆರಳುತ್ತಿದ್ದ 4 ಮಂದಿ ಪ್ರಯಾಣಿಕರಿಗೆ ಗಾಯ
30/10/2021, 19:39

ಕಾರ್ಕಳ(reporterkarnataka.com): ಹಿರ್ಗಾನ ಶಾಲೆಯ ಸಮೀಪ ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ವಿಶ್ವನಾಥ(60), ಮಲ್ಲಿಕಾರ್ಜುನ(70), ಸಿದ್ಧೇಶಪ್ಪ(60), ಅರುಣಾ(40) ಎಂದು ಗುರುತಿಸಲಾಗಿದೆ.
ಹೆಬ್ರಿಯಿಂದ ಮಿಯ್ಯಾರು ಕಡೆಗೆ ಬರುತ್ತಿದ್ದ ಮಾರುತಿ ಓಮ್ನಿ ಹಾಗೂ ಮಂಗಳೂರು ಕಡೆಯಿಂದ ಭದ್ರಾವತಿ ಕಡೆಗೆ ಹೋಗುತ್ತಿದ್ದ ಸ್ಯಾಟ್ರೋ ಕಾರು ಮುಖಾಮುಖಿ ಡಿಕ್ಕಿ ಹೊಡೆದಿತ್ತು. ಭದ್ರಾವತಿ ಕಡೆಗೆ ಪ್ರಯಾಣಿಸುತ್ತಿದ್ದ ನಾಲ್ವರು ಘಟನೆಯಲ್ಲಿ ಗಾಯಗೊಂಡು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.