ಇತ್ತೀಚಿನ ಸುದ್ದಿ
ಖ್ಯಾತ ನಟ ಪುನೀತ್ ಗೆ ಮಸ್ತಿ ಶಾಸಕ ಬಸನಗೌಡ ತುರ್ವಿಹಾಳ ಶ್ರದ್ಧಾಂಜಲಿ
31/10/2021, 19:18
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ
ಅಂತರಗಂಗೆ ರಾಯಚೂರು
info.reporterkarnataka@gmail.com
ಕನ್ನಡ ಚಲನ ಚಿತ್ರರಂಗದ ಸಜ್ಜನಿಕೆಯ ಹಾಗೂ ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಮಸ್ಕಿಯ ದೈವದ ಕಟ್ಟೆ ಬಳಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಅಭಿಮಾನಿಗಳಲ್ಲಿ ಮತ್ತು ಕನ್ನಡ ಚಿತ್ರರಂಗದ ಕಲಾವಿದರಿಗೆ ಮರೆಯಲಾದ ದುಃಖವಾಗಿದೆ.
ಅವರು ಅಭಿಮಾನಿಗಳಿಗಾಗಿ ತಮ್ಮ ಜೀವನವನ್ನೇ ಲೆಕ್ಕಿಸದೆ ಕೆಲಸ ಮಾಡಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ನಮ್ಮದೇ ಸಿಗಲೆಂದು ಪ್ರಾರ್ಥಿಸಿದರು.
ಮಸ್ಕಿಯಲ್ಲಿ ಪುನೀತ್ ಅಭಿಮಾನಿಗಳು ಹಳ್ಳದ ದಂಡೆಯಲ್ಲಿ ನಿಂತು ದೇವರನ್ನು ಪ್ರಾರ್ಥಿಸುವ ಮೂಲಕ ಮೊರೆ ಹೋದರು. ನಂದಿ ಪಬ್ಲಿಕ್
ಸ್ಕೂಲ್ ನ ಶರಣು ನಾಯಕ್ ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಮುಖಂಡರಾದ ಹನುಮಂತಪ್ಪ ಮುದ್ದಾಪೂರು, ಪಂಪನಗೌಡ ಗುಡದೂರು, ಮೈಬುಸಾಬ ಮುದ್ದಾಪೂರು, ವೆಂಕಟರೆಡ್ಡಿ ಹಾಲಾಪುರ, ಕೃಷ್ಣ ಚಿಗರಿ, ಬಸನಗೌಡ ಮುದವಾಳ, ಸುರೇಶ್ ಬ್ಯಾಳಿ, ಆನಂದ ವಿರುಪೂರ, ಚಾಂದ್ ಸ್ಮೇಡ್ಮಿ, ಮಲ್ಲಯ್ಯ ಬಳ್ಳಾ, ಶರಣಪ್ಪ ಎಲಿಗಾರ, ಮಲ್ಲಯ್ಯ ಮುರಾರಿ, ಬಸನಗೌಡ ಮಾರಲದಿನ್ನಿ, ಮೈಬು ಹೆಣಿಗೆ, ಶಿವು, ಹಾಗೂ ಇನ್ನಿತರ ಉಪಸ್ಥಿತಿ ಇದ್ದರು.














