3:18 AM Sunday13 - July 2025
ಬ್ರೇಕಿಂಗ್ ನ್ಯೂಸ್
Kodagu | ದಕ್ಷಿಣ ಕೊಡಗಿನಲ್ಲಿ ಹಸುಗಳ ಮೇಲೆ ವ್ಯಾಘ್ರ ದಾಳಿ: ಒಂದು ಬಲಿ;… ಶರಾವತಿ ನದಿಗೆ ಹೊಲೆ ಬಾಗಿಲಿನಲ್ಲಿ ನಿರ್ಮಿಸಿದ ನೂತನ ಸೇತುವೆ: ಕೇಂದ್ರ ಭೂ ಸಾರಿಗೆ… Kodagu | ಕಾಡಾನೆಗಳ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ: 18 ಸಲಗಗಳು ಮರಳಿ… ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ… ಚಿಕ್ಕಮಗಳೂರು- ತಿರುಪತಿ ರೈಲಿಗೆ ಚಾಲನೆ: ಕಾಫಿನಾಡಿಗರ ದಶಕಗಳ ಕನಸು ಕೊನೆಗೂ ನನಸು Kodagu | ವಿರಾಜಪೇಟೆ ಕ್ಷೇತ್ರದ 1600 ಆದಿವಾಸಿಗಳಿಗೆ ಜಮೀನು ಹಕ್ಕುಪತ್ರ ವಿತರಣೆಗೆ ಅಸ್ತು:… ಹೆಚ್ಚುತ್ತಿರುವ ಕಾಡಾನೆಗಳ ದಾಂಧಲೆ: ವಿರಾಜಪೇಟೆ ತಿತಿಮತಿ ವ್ಯಾಪ್ತಿಯಲ್ಲಿ ಬಿರುಸುಗೊಂಡ ಕಾಡಿಗಟ್ಟುವ ಕಾರ್ಯಾಚರಣೆ Bangaluru | ನಾಗರಬಾವಿಯ ವಿಟಿಯು ಹಬ್ ಆ್ಯಂಡ್ ಸ್ಪೋಕ್ ಕೇಂದ್ರ ಉದ್ಘಾಟನೆ: ಕೇಂದ್ರ… SCSP-TSP ಯೋಜನೆ | ಅಧಿಕಾರಿಗಳು ಮೈಮರೆತರೆ ಪ್ರಕರಣ ದಾಖಲು ಗ್ಯಾರಂಟಿ: ಸಚಿವ ಡಾ.…

ಇತ್ತೀಚಿನ ಸುದ್ದಿ

ಕೂಡ್ಲಿಗಿ ಹಾಗೂ ಕುಪ್ಪನಕೇರಿ: ಶ್ರೀಆಂಜನೇಯ ರಥೋತ್ಸವ; ಲಿಂಗದೀಕ್ಷೆ, ಲಿಂಗಧಾರಣೆ

01/04/2023, 10:06

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ರಾಮನವಮಿ ಪ್ರಯುಕ್ತ, ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶ್ರೀಕೊತ್ತಲಾಂಜನೇಯ ರಥೋತ್ಸವ ಜರುಗಿತು.
ಕೂಡ್ಲಿಗಿ ಪಟ್ಟಣ ಸೇರಿದಂತೆ, ನೆರೆಹೊರೆ ಗ್ರಾಮಗಳಿಂದ ಆಗಮಿಸಿದ್ದರು. ಅಸಂಖ್ಯಾತ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಸಕಲ ವಾದ್ಯ ವೃಂದಗಳೊಂದಿಗೆ, ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.


ಕಳೆದ ವರ್ಷದ ಶ್ರೀಕೊತ್ತಲಾಂಜನೇಯ ರಥೋತ್ಸವದಲ್ಲಿ, ದೇವರ ಪಟವನ್ನು ಪಡೆದಿದ್ದ ಬಂಗಾರು ಹನುಮಂತು ರವರು. ಪಟದ ಹರಾಜಿನ 1.80 ಲಕ್ಷ ರೂ. ಹಣವನ್ನು ದೇವಸ್ಥಾನಕ್ಕೆ ಅರ್ಪಿಸಿದರು. ಈ ಸಾರಿಯೂ ಕೂಡ ಹರಾಜಿನಲ್ಲಿ, ದೇವರ ಪಟವನ್ನು ಬಂಗಾರು ಹನುಮಂತು 2,61,101ರೂ. ಗಳಿಗೆ ಪಡೆದುಕೊಂಡರು. ಅವರು ಸತತವಾಗಿ ಒಂಬತ್ತನೇ ಬಾರಿ ರಥೋತ್ಸವದ,ಪಟದ ಹರಾಜು ಪಡೆಯುತ್ತಿರುವುದು ವಿಶೇಷವಾಗಿದೆ.
ಕುಪ್ಪಿನಕೇರಿಗ್ರಾಮದಲ್ಲಿ ರಥೋತ್ಸವ:ಕೂಡ್ಲಿಗಿ ತಾಲೂಕಿನ ಶ್ರಿಕ್ಷೇತ್ರ ಕುಪ್ಪಿಕೇರಿ ಗ್ರಾಮದಲ್ಲಿ,ಶ್ರೀಆಂಜನೇಯ ಸ್ವಾಮಿ ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.

ಶ್ರೀ ಆಂಜನೇಯ ದೇವರಿಗೆ ಶಿವಸಂಭೂತರಾದ ಪಂಚಗಣಾದೀಶ್ವರರು, ಲಿಂಗಧಾರಣೆ ಮಾಡಿ ಲಿಂಗದೀಕ್ಷೆ ನೀಡಿದ್ದಾರೆಂಂಬ ಜಾನಪದೀಯ ಕಥೆಯಿದೆ. ಬೇಡಿದ ಕೊರಿಕೆಗಳ ಆಗು ಹೋಗುಗಳ ಫಲಾನು ಫಲ,ಶುಭ ಅಶುಭ,ಗಳನ್ನು ಸೂಚಿಸುವ ದೇವರ ಹೂ ಕೇಳೋ ಸಂಪ್ರದಾಯಕ್ಕೆ. ಕುಪ್ಪಿಕೇರಿ ಶ್ರೀಆಂಜನೇಯ ಹೆಸರುವಾಸಿಯಾಗಿದ್ದಾನೆ. ಈ ಭಾರಿಯ ಪಟ ಹರಾಜನ್ನು, ಸಂಡೂರು ತಾಲೂಕು ಕಲ್ಕಂಬ ಗ್ರಾಮದ ಷಣ್ಮುಖಪ್ಪನ ಮಗ ಹನುಮಂತಪ್ಪ ಎಂಬುವರು 1.61.101ರೂ ಗೆ ಪಡೆದಿದ್ದಾರೆ.ಕುಪ್ಪನಕೇರಿ ಗ್ರಾಮದ ಗ್ರಾಮಸ್ಥರು, ರಥೋತ್ಸವದಲ್ಲಿ ಕೂಡ್ಲಿಗಿ ಪಟ್ಟಣ ಸೇರಿದಂತೆ, ಕುಪ್ಪಿಕೇರಿಯ ನೆರೆ ಹೊರೆ ಗ್ರಾಮಗಳ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಸಕಲ ವಾಧ್ಯವೃಂಧಗಳೊಂದಿಗೆ, ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.

ಇತ್ತೀಚಿನ ಸುದ್ದಿ

ಜಾಹೀರಾತು