6:51 PM Wednesday12 - November 2025
ಬ್ರೇಕಿಂಗ್ ನ್ಯೂಸ್
ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ… ಸದ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಕಬ್ಬು ಬೆಳೆಗಾರರ ಕಿವಿಗೆ ಹೂವು ಇಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಯುವಕನ ಅನುಮಾನಾಸ್ಪದ ಸಾವು : ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ

ಇತ್ತೀಚಿನ ಸುದ್ದಿ

ಕೂಡ್ಲಿಗಿ ಹಾಗೂ ಕುಪ್ಪನಕೇರಿ: ಶ್ರೀಆಂಜನೇಯ ರಥೋತ್ಸವ; ಲಿಂಗದೀಕ್ಷೆ, ಲಿಂಗಧಾರಣೆ

01/04/2023, 10:06

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ರಾಮನವಮಿ ಪ್ರಯುಕ್ತ, ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶ್ರೀಕೊತ್ತಲಾಂಜನೇಯ ರಥೋತ್ಸವ ಜರುಗಿತು.
ಕೂಡ್ಲಿಗಿ ಪಟ್ಟಣ ಸೇರಿದಂತೆ, ನೆರೆಹೊರೆ ಗ್ರಾಮಗಳಿಂದ ಆಗಮಿಸಿದ್ದರು. ಅಸಂಖ್ಯಾತ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಸಕಲ ವಾದ್ಯ ವೃಂದಗಳೊಂದಿಗೆ, ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.


ಕಳೆದ ವರ್ಷದ ಶ್ರೀಕೊತ್ತಲಾಂಜನೇಯ ರಥೋತ್ಸವದಲ್ಲಿ, ದೇವರ ಪಟವನ್ನು ಪಡೆದಿದ್ದ ಬಂಗಾರು ಹನುಮಂತು ರವರು. ಪಟದ ಹರಾಜಿನ 1.80 ಲಕ್ಷ ರೂ. ಹಣವನ್ನು ದೇವಸ್ಥಾನಕ್ಕೆ ಅರ್ಪಿಸಿದರು. ಈ ಸಾರಿಯೂ ಕೂಡ ಹರಾಜಿನಲ್ಲಿ, ದೇವರ ಪಟವನ್ನು ಬಂಗಾರು ಹನುಮಂತು 2,61,101ರೂ. ಗಳಿಗೆ ಪಡೆದುಕೊಂಡರು. ಅವರು ಸತತವಾಗಿ ಒಂಬತ್ತನೇ ಬಾರಿ ರಥೋತ್ಸವದ,ಪಟದ ಹರಾಜು ಪಡೆಯುತ್ತಿರುವುದು ವಿಶೇಷವಾಗಿದೆ.
ಕುಪ್ಪಿನಕೇರಿಗ್ರಾಮದಲ್ಲಿ ರಥೋತ್ಸವ:ಕೂಡ್ಲಿಗಿ ತಾಲೂಕಿನ ಶ್ರಿಕ್ಷೇತ್ರ ಕುಪ್ಪಿಕೇರಿ ಗ್ರಾಮದಲ್ಲಿ,ಶ್ರೀಆಂಜನೇಯ ಸ್ವಾಮಿ ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.

ಶ್ರೀ ಆಂಜನೇಯ ದೇವರಿಗೆ ಶಿವಸಂಭೂತರಾದ ಪಂಚಗಣಾದೀಶ್ವರರು, ಲಿಂಗಧಾರಣೆ ಮಾಡಿ ಲಿಂಗದೀಕ್ಷೆ ನೀಡಿದ್ದಾರೆಂಂಬ ಜಾನಪದೀಯ ಕಥೆಯಿದೆ. ಬೇಡಿದ ಕೊರಿಕೆಗಳ ಆಗು ಹೋಗುಗಳ ಫಲಾನು ಫಲ,ಶುಭ ಅಶುಭ,ಗಳನ್ನು ಸೂಚಿಸುವ ದೇವರ ಹೂ ಕೇಳೋ ಸಂಪ್ರದಾಯಕ್ಕೆ. ಕುಪ್ಪಿಕೇರಿ ಶ್ರೀಆಂಜನೇಯ ಹೆಸರುವಾಸಿಯಾಗಿದ್ದಾನೆ. ಈ ಭಾರಿಯ ಪಟ ಹರಾಜನ್ನು, ಸಂಡೂರು ತಾಲೂಕು ಕಲ್ಕಂಬ ಗ್ರಾಮದ ಷಣ್ಮುಖಪ್ಪನ ಮಗ ಹನುಮಂತಪ್ಪ ಎಂಬುವರು 1.61.101ರೂ ಗೆ ಪಡೆದಿದ್ದಾರೆ.ಕುಪ್ಪನಕೇರಿ ಗ್ರಾಮದ ಗ್ರಾಮಸ್ಥರು, ರಥೋತ್ಸವದಲ್ಲಿ ಕೂಡ್ಲಿಗಿ ಪಟ್ಟಣ ಸೇರಿದಂತೆ, ಕುಪ್ಪಿಕೇರಿಯ ನೆರೆ ಹೊರೆ ಗ್ರಾಮಗಳ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಸಕಲ ವಾಧ್ಯವೃಂಧಗಳೊಂದಿಗೆ, ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.

ಇತ್ತೀಚಿನ ಸುದ್ದಿ

ಜಾಹೀರಾತು