9:30 PM Tuesday5 - August 2025
ಬ್ರೇಕಿಂಗ್ ನ್ಯೂಸ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು… ಶಿಬು ಸೊರೇನ್ ನಿಧನ: ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ. 8ಕ್ಕೆ ಮುಂದೂಡಿಕೆ:… ವಿಶ್ವ ವಿಖ್ಯಾತ ಮೈಸೂರು ದಸರಾ: ಪುಷ್ಪಾರ್ಚನೆ ಮೂಲಕ ಅಭಿಮನ್ಯು ನೇತೃತ್ವದ ಗಜ ಪಯಣಕ್ಕೆ… Shivamogga | ತೀರ್ಥಹಳ್ಳಿ: ಮನೆಗಾಗಿ ಸಾಲ; ಮನನೊಂದ ವೃದ್ದ ದಂಪತಿ ಒಂದೇ ಮರಕ್ಕೆ… Kodagu | ಬೆಕ್ಕೆಸುಡ್ಲೂರಿನಲ್ಲಿ ತಡರಾತ್ರಿ ರಸ್ತೆ ಮಧ್ಯೆ ಲಾರಿ ಪಲ್ಟಿ: ಕುಟ್ಟ- ಪೊನ್ನಂಪೇಟೆ… Kodagu | ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ರ್‍ಯಾಂಬುಟನ್ ಹಣ್ಣು ಮಾರಾಟಕ್ಕೆ ನಿರ್ಬಂಧ; ವ್ಯಾಪಾರಸ್ಥರ… SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ… ಸುಹಾಸ್ ಶೆಟ್ಟಿ ಮರ್ಡರ್ ಕೇಸ್: ಕಾಫಿನಾಡು ಕಳಸದಲ್ಲಿ ಎನ್ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ… ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:…

ಇತ್ತೀಚಿನ ಸುದ್ದಿ

ಕೃಷ್ಣಾ ನದಿ ತೀರದ ಸಮಾಜ ಸೇವಕಿಗೆ ಒಲಿದು ಬಂದ ಗೌರವ ಡಾಕ್ಟರೇಟ್: ಶ್ರೀದೇವಿ ನಾಯಕ್  ಮುಡಿಗೆ ಮತ್ತೊಂದು ಗರಿ!

25/07/2021, 09:28

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com 

ರಾಯಚೂರು ಜಿಲ್ಲೆಯ  ದೇವದುರ್ಗದ ಅಮ್ಮ ಎಂದೇ ಖ್ಯಾತಿ ಪಡೆದಿರುವ ಶ್ರೀದೇವಿ ರಾಜಶೇಖರ ನಾಯಕ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಬೆಂಗಳೂರಿನಲ್ಲಿ ಅತಿಥಿ ಗೌರವಗಳೊಂದಿಗೆ ಗೌರವಿಸಲಾಯಿತು.

ದಿ.ಎ. ವೆಂಕಟೇಶ ನಾಯಕ ಹಾದಿಯಲ್ಲಿ ನಡೆಯುತ್ತಿರುವ ಮೊಮ್ಮಗಳು ಶ್ರೀದೇವಿ ನಾಯಕ್ ಇದೀಗ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರು ಬಡವರ, ಸಂಕಷ್ಟಕ್ಕೀಡಾದವರ ಧ್ವನಿಯಾಗಿ, ಆಸರೆಯಾಗಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ದಕ್ಷಿಣ ಭಾರತದ ಪ್ರತಿಷ್ಠಿತ ಸಂಸ್ಥೆಯಿಂದ ಸಾಮಾಜಿಕ ಸೇವೆಗಾಗಿ ಗುರುತಿಸಿ ಇಂದು ಜನಪ್ರತಿನಿಧಿಗಳು ಮಾಡಲಾಗದಂತಹ. ಕೆಲಸಗಳನ್ನು ಶ್ರೀದೇವಿ ನಾಯಕರು ಮಾಡಿ ತೋರಿಸಿದ್ದಾರೆ.

ಹೌದು,ಶ್ರೀದೇವಿ ನಾಯಕ್ ಅವರು ಸಮಾಜ ಸೇವೆ ಎಂದರೆ ದೇವರ ಸೇವೆ ಎಂದು ನಂಬಿರುವ ಕುಟುಂಬದಿಂದ ಬಂದವರು. ಜನರ ಸೇವೆ ಜನಾರ್ಧನ ಸೇವೆ ಎಂದು ಕಾಲನು ಕಾಲದಿಂದ ನಂಬಿರುವ ಕುಟುಂಬದ ಹೆಣ್ಣು ಮಗಳು. ಕಷ್ಟ ಎಂದು ಬರುವ ಜನರನ್ನು ಬರಿಗೈಯಲ್ಲಿ ಎಂದೂ ಕಳಿಸದ ಮನೆತನದವರು.

ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾದಾಗ ಜನರಿಂದ ಆಯ್ಕೆಯಾದ ಜನ ಪ್ರತಿನಿಧಿಗಳು ಊರು ಬಿಟ್ಟಾಗ ನದಿ ತೀರದ ಜನರ ಜತೆ ಜೀವದ ಹಂಗು ತೊರೆದು ಆ ಜನರ ರಕ್ಷಣೆ, ಊಟ -ವಸತಿಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು.ಲಾಕ್ ಡೌನ್ ಪದವನ್ನು ಕೇಳದೆ ಇರುವ ಜನರಿಗೆ ಆಹಾರ ಕಿಟ್ ವಿತರಿಸಿದ್ದರು. ವಾಹನ ಸಂಪರ್ಕ ಸಹ ಸಾಧ್ಯವಾಗದ ಸ್ಥಿತಿಯಲ್ಲಿದ್ದ 40-50 ಹಳ್ಳಿಗಳಿಗೆ ನಿರಂತರವಾಗಿ ಆಹಾರ ಕಿಟ್ ವಿತರಣೆ, ಮಾಸ್ಕ್ ಸ್ಯಾನಿಟೈಸರ್, ವಿತರಣೆಯ ಸಂಪೂರ್ಣ ಜವಾಬ್ದಾರಿಯನ್ನು ಇದೇ ಶ್ರೀದೇವಿ ನಾಯಕರು ಹೊತ್ತಿದ್ದರು.

ಅಂದು ಕೊರೊನಾ ಸಂಕಷ್ಟ ಸಮಯದಲ್ಲಿ ಪ್ರಾರಂಭವಾದ ಈ ಸೇವಾ ಕಾರ್ಯ ಇಂದಿಗೂ ಸಹ ನಿಂತಿಲ್ಲ. ಈ ಸೇವೆ ದೇವರ ಸೇವೆ ಎಂದು ಪರಿಗಣಿಸಿ ಯಾವುದೇ ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಹಂತಗಳಲ್ಲಿ ಕೊವಿಡ್ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಪಿಪಿಇ ಕೀಟ್,  ತಿಂಗಳ‌ಗೆ ಆಗುವಷ್ಟು ಆಹಾರ ಕಿಟ್, ಅಕ್ಕಿ ಬೇಳೆ ಎಲ್ಲವನ್ನೂ ಅವರ ಮನೆ-ಮನೆಗೆ ಮುಟ್ಟಿಸಿದ್ದಾರೆ. ಇದು ನಿರಂತರವಾಗಿ ಎರಡು ವರ್ಷಗಳಿಂದ ಮುಂದುವರಿದಿದೆ.

ರಾಯಚೂರು ಜಿಲ್ಲೆಯ ಸಹಕಾರಿ ರತ್ನ ಎಂದು ಬಿರುದನ್ನು  ಶ್ರೀದೇವಿ ನಾಯಕರು ಪಡೆದಿದ್ದಾರೆ.

ಭಾಗ್ಯವಂತಿ ಮಹಿಳಾ ಸಹಕಾರಿ ಬ್ಯಾಂಕ್ ಎಂದು ನಾಲ್ಕು ಬ್ಯಾಂಕುಗಳನ್ನು ಹೊಂದಿರುವ ಶ್ರೀದೇವಿ ನಾಯಕರು ಈ ಬ್ಯಾಂಕುಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ್ದಾರೆ. ಮಹಿಳೆಯರ ಅಗತ್ಯ ಕಿರು ಸಾಲ, ವಿವಿಧ ರೀತಿಯ ನೇರ ಸಾಲ, ಅಗತ್ಯ ನೆರವು ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಹೆಣ್ಣು ತನ್ನ ಕಾಲ ಮೇಲೆ ತಾನು ನಿಲ್ಲಲು ಪ್ರೋತ್ಸಾಹ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು