6:40 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಕೋಲಾರದ ಕ್ಲಾಕ್ ಟವರ್ ನಲ್ಲಿ ರಾಷ್ಟ್ರಧ್ವಜ ಹಾರಾಟ: 74 ವರ್ಷಗಳ ಕನಸು ಕೊನೆಗೂ ಕನಸು; ಸಂಸದ ಸಂತಸ

20/03/2022, 09:55

ಕೋಲಾರ(reporterkarnataka.com): ನಗರದ ಕ್ಲಾಕ್ ಟವರ್ ನಲ್ಲಿ  ನಮ್ಮ ಹೆಮ್ಮೆಯ ರಾಷ್ಟ್ರ ಧ್ವಜದ ಹಾರಾಟದಿಂದ ಜಿಲ್ಲೆಯಲ್ಲಿ 74 ವರ್ಷಗಳ ಬಹುದಿನಗಳ ಪ್ರಯತ್ನ, ಹೋರಾಟ ಮತ್ತು ಕನಸು ಇಂದು ನನಸಾಗಿದೆಯೆಂದು ಸಂಸದ ಎಸ್. ಮುನಿಸ್ವಾಮಿ ಸಂತಸ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತಾನಾಡಿದ ತ್ರಿವರ್ಣ ಧ್ವಜ ಹಾರಿಸಲು ಪರೋಕ್ಷವಾಗಿ  ಪ್ರತ್ಯಕ್ಷವಾಗಿ ಸಹಾಕರ ನೀಡಿದ ರಾಜ್ಯ ಸರ್ಕಾರ, ಜಿಲ್ಲಾ ಪೊಲೀಸ್ ಇಲಾಖೆಗೆ,  ಜಿಲ್ಲಾಡಳಿತಕ್ಕೆ ಹಾಗೂ ನಗರಸಭೆ ಸಿಬ್ಬಂದಿಗೆ ಮತ್ತು ಸಹಕರಿಸಿದ ಎಲ್ಲಾ ಧರ್ಮದ ನಾಗರಿಕರಿಗೆ ಧನ್ಯವಾದಗಳನ್ನು ತಿಳಿಸಿದರಲ್ಲದೆ, ನಾವೆಲ್ಲರೂ ಭಾರತೀಯರು ಎಂಬುದನ್ನು ಮೊದಲು ಅರಿತು ಪ್ರತಿಯೊಬ್ಬರೂ ನಡೆಯ ಬೇಕೆಂದರು. 

ಭಾರತೀಯರಾಗಿ ನಾವು ದೇಶಕ್ಕೆ ಮೊದಲು ಗೌರವ ಸೂಚಿಸುವುದನ್ನು ನಾವೆಲ್ಲರೂ ಕಲಿಯಬೇಕು, ರಾಜಕಾರಣಿಗಳು ಬಂದು ಹೋಗುತ್ತಾರೆ ಅವರು ಮಾಡಿದ ಕೆಲಸ ಶಾಶ್ವತವಾಗಿ ಉಳಿಯುತ್ತದೆ. ಸೌಹಾರ್ದತೆ ಮುಖ್ಯ ಮುಂದೆಯೂ ಇದೇ ರೀತಿ ನಾವೆಲ್ಲರೂ ಒಂದಾಗಿ ಜೀವನ ಮಾಡೋಣ.ಯಾವುದೇ ಜನಾಂಗದವರಿಗೆ ನೋವು ಮಾಡುವ ಉದ್ದೇಶ ನಮಗಿಲ್ಲ,ಕ್ಲಾಕ್ ಟವರ್ ನ ಇತಿಹಾಸ ನನಗೆ ಮಾಹಿತಿ ಇದೆ.ನಾನು ಕೋಲಾರದಲ್ಲಿ ಇದ್ದರೂ

ವಿನಾಕಾರಣ ನಾನು ಸ್ಥಳಕ್ಕೆ ಆಗಮಿಸಿ ಗೊಂದಲ ಸೃಷ್ಟಿ ಮಾಡಲು ಅವಕಾಶ ನೀಡದೆ ಎಲ್ಲಾ ಮಾಹಿತಿ ಪಡೆಯುತ್ತಿದ್ದೆ ಎಂದು ತಿಳಿಸಿದರು.

ಯಾವುದೇ ಕೋಮಿಗೆ ನೋವು ಉಂಟು ಮಾಡದೆ,ಜಿಲ್ಲೆಯಲ್ಲಿ ಯಾರು ಪಟಾಕಿ ಸಿಡಿಸುವುದು, ವಿಜೋಯೋತ್ಸವ ನಡೆಸುವುದು ಮತ್ತು ಇನ್ನೊಂದು ಧರ್ಮವನ್ನು ಟೀಕಿಸುವುದು, ಪ್ರಚೋದನೆ ಮಾಡದೆ ಎಲ್ಲರೂ ಶಾಂತಿಯುತವಾಗಿ ನಡೆದುಕೊಳ್ಳಬೇಕೆಂದು ಸಂಸದರು ಸಾರ್ವಜನಿಕರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಕೆ‌.ಯು.ಡಿ.ಎ.ಅಧ್ಯಕ್ಷ ಓಂ ಶಕ್ತಿ ಚಲಪತಿ, ಬಿ.ಜೆ.ಪಿ.ಪಕ್ಷದ ಮುಖಂಡರುಗಳಾದ ತಿಮ್ಮರಾಯಪ್ಪ,ವಿಜಯ ಕುಮಾರ್,ಬಾಲಾಜಿ,ಕೆಂಬೋಡಿ ನಾರಾಯಣ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು