ಇತ್ತೀಚಿನ ಸುದ್ದಿ
ಕೊಂಪದವು ಅಂಗನವಾಡಿ ಕೇಂದ್ರದ ಮೇಲ್ಚಾವಣಿ, ನೂತನ ರಿಕ್ಷಾ ಪಾರ್ಕ್ ಶಾಸಕ ಡಾ. ಭರತ್ ಶೆಟ್ಟಿ ಉದ್ಘಾಟನೆ
02/01/2023, 13:57

ಸುರತ್ಕಲ್(reporterkarnataka.com): ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ಕೊಂಪದವು ಅಂಗನವಾಡಿ ಕೇಂದ್ರಕ್ಕೆ ಮೇಲ್ಚಾವಣಿ, ಕೊಂಪದವು ನೂತನ ರಿಕ್ಷಾ ಪಾರ್ಕ್ ಹಾಗೂ ಮುಚ್ಚೂರು ನೂತನ ರಿಕ್ಷಾ ಪಾರ್ಕನ್ನು ಶಾಸಕ ಡಾ.ವೈ. ಭರತ್ ಶೆಟ್ಟಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಜನಾರ್ದನ ಗೌಡ , ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷರಾದ ನಾರಾಯಣ ಎ. ಎಸ್., ಮಾಜಿ ಅಧ್ಯಕ್ಷರಾದ ಪ್ರಕಾಶ್ ಹೆಗ್ಡೆ, ಸದಸ್ಯರಾದ ವೀರಪ್ಪ ಗೌಡ, ರಜನೀಶ್, ಉದಯ ನಾಯ್ಕ್, ಪೂರ್ಣಿಮಾ ಹರಿಪ್ರಕಾಶ್, ಸುಮನ, ಪಂಚಾಯತ್ ಕಾರ್ಯದರ್ಶಿ ಸತೀಶ್ ಹಾಗೂ ಪ್ರಮುಖರಾದ ಪ್ರಸಾದ್ ಕೊಂಪದವು, ಸಂದೇಶ್ ಡೇಸಾ, ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.