8:13 AM Monday12 - January 2026
ಬ್ರೇಕಿಂಗ್ ನ್ಯೂಸ್
ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ…

ಇತ್ತೀಚಿನ ಸುದ್ದಿ

ಕೋಲಾಚಲಂ ರಸ್ತೆ ಮರು ನಾಮಕರಣ ಮೂರ್ಖತನದ ಪರಮಾವಧಿ: ಪ್ರಜ್ಞಾವಂತ ನಾಗರಿಕರ ವಿರೋಧ

27/11/2024, 17:54

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಬಳ್ಳಾರಿ ನಗರದ ಕನಕದುರ್ಗಮ್ಮ ದೇವಾಲಯದಿಂದ ಬ್ರೂಸ್ ಪೇಟೆ ಪೋಲಿಸ್ ಠಾಣೆ ವರೆಗಿನ ವೆಂಕಟ್ ರಾವ್ ಕೋಲಾಚಲಂ ಹೆಸರಿನ ಜೋಡಿ ರಸ್ತೆ ಹೆಸರು ಬದಲಾವಣೆಯ ಕುರಿತು ಬಳ್ಳಾರಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆತಿರುವುದು ಮೂರ್ಖತನದ ಪರಮಾವಧಿ ಎಂದು ನಗರದ ವಿವಿಧ ಬಡಾವಣೆಗಳ ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ.
ಈ ಕುರಿತು ಸಭೆಯಲ್ಲಿ ಮಾಹಿತಿ ಕೊರತೆ ಎದ್ದು ಕಾಣುತ್ತಿದೆ. ಈ ಹಿಂದೆ 1996 ರಲ್ಲಿ ಕೊಲಾಚಲಂ ಕುಟುಂಬದ ಸದಸ್ಯರು ಅಂದಿನ ಮುಖ್ಯಮಂತ್ರಿ ದೇವೇಗೌಡರಿಗೆ ಈ ರಸ್ತೆಗೆ ಹೆಸರು ಇಡಲು ಮನವಿ ಸಲ್ಲಿಸಿ ವಿನಂತಿಸಿದ ಹಿನ್ನೆಲೆ ಹಿನ್ನೆಲೆಯಲ್ಲಿ ಅಂದು ಜೋಡಿ ರಸ್ತೆಗೆ ಹೆಸರು ಇಟ್ಟಿರುವದು ಪಾಲಿಕೆಯ ಸಭೆಯ ಗಮನಕ್ಕೆ ಬಾರದೇ ಇರುವುದು ದುರಂತದ ಸಂಗತಿಯಾಗಿದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.
ಸ್ಥಳೀಯ ವಿಚಾರವಾಗಿ ಮಹಾನಗರ ಪಾಲಿಕೆಯ ಸದಸ್ಯರಲ್ಲಿ ಮಾಹಿತಿ ಕೊರತೆ ಹಾಗೂ ಸ್ಥಳೀಯ ರಸ್ತೆಗಳ ಚಾರಿತ್ರಿಕ ಇತಿಹಾಸದ ಅರೆ ತಿಳುವಳಿಕೆ ಇಂಥ ಘಟನೆಗಳ ಘಟ್ಟಿಸಲು ಕಾರಣವಾಗಿವೆ, ಹಾಗೂ ಅಭಿವೃದ್ಧಿಪರ ಕೆಲಸ ಮಾಡುವ ಶಾಸಕರ ಅಭಿವೃದ್ಧಿ ಕಾರ್ಯಗಳಿಗೆ ಇವು ಕರಿ ನೆರಳಾಗಿ ಕಾಡುವ ಸಂದರ್ಭಗಳನ್ನು ಸೃಷ್ಟಿಸಲು ಕಾರಣವೂ ಆಗಬಹುದು ಎಂದು ಕೆಲವರ ಅನಿಕೆಯಾಗಿದೆ.
ಈ ಅರ್ಥ ಪ್ರಸ್ತಾವನೆಯನ್ನು ನಗರ ಶಾಸಕರಾದ ಭರತ್ ರೆಡ್ಡಿಯವರು ಗಂಭೀರವಾಗಿ ಪರಿಗಣಿಸಿ ಸರ್ಕಾರಕ್ಕೆ ಪ್ರಸ್ತಾವನೆ ಹೋಗದಂತೆ ತಡೆ ಹಿಡಿಯಬೇಕು ಎಂದು ಹಲವರು ಈ ಮೂಲಕ ವಿನಂತಿಸಿ ಮಾಡಿಕೊಂಡಿದ್ದಾರೆ.
ಈ ಮಧ್ಯ ಕೋಲಾಚಲಂ ಕುಟುಂಬದ ಸದಸ್ಯರಾದ ವಿಶ್ವ ಪ್ರಕಾಶ ಕೋಲಾಚಲಂ ಅವರು ಸರ್ಕಾರಕ್ಕೆ ಹಾಗೂ ಮಹಾನಗರ ಪಾಲಿಕೆಗೆ ಜೋಡಿ ರಸ್ತೆ ಮರು ನಾಮಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ! ಬಳ್ಳಾರಿ ಪಾಲಿಕೆಯ ಆಡಳಿತ ಕಾಂಗ್ರೆಸ್ ಕೈಯಲ್ಲಿದೆ!, ಬಳ್ಳಾರಿಯ ಸಂಸದ-ಶಾಸಕರು ಕಾಂಗ್ರೆಸ್ಸಿನವರೇ! ಹಾಗಿದ್ದೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕ ಸದಸ್ಯರಲ್ಲಿ ಒಬ್ಬ ಪ್ರಮುಖರಾದ ಕೋಲಾಚಲಂ ವೆಂಕಟರಾಯರ ಫಲಕ ಬದಲಾಯಿಸುವುದು ಮಹಾ ದ್ರೋಹವಾಗಿದೆ.
ಇಂತಹ ಮಹಾನುಭಾವರ ಹೆಸರಿನ ರಸ್ತೆ ಫಲಕವನ್ನು ರದ್ದುಪಡಿಸಿ, ಬೇರೇ ಯಾರದೋ ಹೆಸರು ಮರುನಾಮಕರಣ ಮಾಡಬೇಕೆನ್ನುವ ನಿರ್ಧಾರ ಸರ್ವಥಾ ಖಂಡನೀಯ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು