ಇತ್ತೀಚಿನ ಸುದ್ದಿ
Kodagu | ವಿರಾಜಪೇಟೆ: ಚೆಂಬು ವ್ಯಾಪ್ತಿಯಲ್ಲಿ ಪುoಡಾನೆ ಸೆರೆಗೆ ಸರ್ಕಾರದ ಅನುಮತಿ; ತಂಡ ಸಜ್ಜು
11/08/2025, 10:12
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ಸಮೀಪದ ಚೆಂಬು ಗ್ರಾಮದ ದಬ್ಬಡ್ಕ ದಲ್ಲಿ ಕಾಡಾನೆ ದಾಳಿಗೆ ರೈತನೊಬ್ಬ ಬಲಿಯಾದ ಬೆನ್ನಲ್ಲೇ ಗ್ರಾಮಸ್ಥರಿಗೆ ಆತಂಕ ಸೃಷ್ಟಿಗೊಳಿಸಿರುವ ಪುoಡಾನೆ ಸೆರೆಗೆ ತಂಡ ರಚನೆಯಾಗಿದ್ದು ಪತ್ತೆ ಕಾರ್ಯ ತೀವ್ರ ಗೊಳಿಸಲಾಗಿದೆ.
ಆನೆ ಸೆರೆ ಹಿಡಿಯಲು ಸರ್ಕಾರದಿಂದ ಮೌಖಿಕವಾಗಿ ಆದೇಶ ದೊರೆತಿದ್ದು, ಅಧಿಕೃತ ಲಿಖಿತ ಆದೇಶ ಬರುತ್ತಿದ್ದಂತೆ ಆನೆ ಸೆರೆ ಹಿಡಿಯಲಾಗುವುದು ಎಂದು ಶಾಸಕ ಎ. ಎಸ್. ಪೊನ್ನಣ್ಣ ಮಾಹಿತಿ ನೀಡಿದ್ದಾರೆ.














