8:08 PM Saturday22 - November 2025
ಬ್ರೇಕಿಂಗ್ ನ್ಯೂಸ್
ಮೆಕ್ಕೆಜೋಳ ಖರೀದಿ-ಆಮದು ಬಗ್ಗೆ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ ಸಿಎಂ: ಕೇಂದ್ರ ಸಚಿವ… ರಾಜ್ಯಕ್ಕೆ ಯಾರು ಮುಖ್ಯಮಂತ್ರಿ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಸ್ಪಷ್ಟವಾಗಿ ತಿಳಿಸಲಿ: ಪ್ರತಿಪಕ್ಷ ನಾಯಕ… ಕೇರಳದಿಂದ ಮಡಿಕೇರಿಗೆ ಅಕ್ರಮ ಕೆಂಪು ಕಲ್ಲು ಸಾಗಾಟ: ಸುಳ್ಯ ಪೊಲೀಸರಿಂದ ಲಾರಿ ವಶ ಡಿಕೆಶಿ ಮುಖ್ಯಮಂತ್ರಿ ಆಗಲಿ ಎಂದು 91 ಕೆಜಿ ಎಳ್ಳಿನ ತುಲಾಭಾರ: ಪಾವಗಡದಲ್ಲಿ ಅಭಿಮಾನಿಗಳ… ಮೀನುಗಾರಿಕಾ ವಿಶ್ವ ವಿದ್ಯಾಲಯ ಸ್ಥಾಪಿಸಲು ಸರಕಾರ ಸಿದ್ಧವಿದೆ: ಸಿಎಂ ಸಿದ್ದರಾಮಯ್ಯ ಘೋಷಣೆ ಮಂಡ್ಯ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ ಆಯ್ಕೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಾಟ: ಸ್ಥಳೀಯರ ತೀವ್ರ ಆಕ್ಷೇಪ; ಮೌನ ವಹಿಸಿದ… ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.…

ಇತ್ತೀಚಿನ ಸುದ್ದಿ

Kodagu | ಟೆರರ್ ಆಫ್ ಬೆಂಗಾಲ್ ಇನ್ ಕುಶಾಲನಗರ !: ಚಂದಕ್ಕೆ ಪೂರಕ , ಆರೋಗ್ಯಕ್ಕೆ ಬಲು ಮಾರಕ!!

02/07/2025, 14:13

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com

ಅಕ್ಷರಶಃ ಕಳೆದ ಒಂದು ವಾರದಿಂದ ಕೊಡಗಿನ ಕುಶಾಲನಗರ -ಮಡಿಕೇರಿ ನಡುವಿನ ರಾಷ್ಟ್ರೀಯ ಹೆದ್ದಾರಿ 275 ಬದಿಯಲ್ಲಿರುವ ಕುಶಾಲನಗರದ ತಾವರೆಕೆರೆಯಲ್ಲಿ ಅರಳಿ ನಿಂತಿರುವ ಲ್ಯಾವೆಂಡರ್/ ಬ್ಲೂ ವಾಯಿಲೆಟ್ ಬಣ್ಣದ ಹೂವು ಅಕ್ಷರಶಃ ಮಾರಕವಾಗಿದೆ. ವೈಜ್ಞಾನಿಕವಾಗಿ ನೋಡುವುದಾದರೆ ಇದೊಂದು ತ್ಯಾಜ್ಯದಿಂದ ಉದ್ಭವಿಸುವ ಒಂದು ಕಳೆಯಿಂದ ಅರಳಿರುವ ಸಸ್ಯ ಪ್ರಭೇಧ.”ಇಚ್ಹೊರ್ನಿಯಾ ಕ್ರೇಸ್ಸಿಪಿಸ್” ಹೆಸರಿನ ಈ ಕಳೆ ಬಾಂಗ್ಲಾದೇಶದಲ್ಲಿ ನಿಂತ ನೀರು, ಅದರಿಂದ ಉದ್ಭವ ಆಗುತ್ತಿದ್ದ ಸೊಳ್ಳೆ ಸೇರಿದಂತೆ ಕ್ರಿಮಿ ಕೀಟದಿಂದ ರೋಗ ರುಜಿನ ಉಂಟಾಗಿತ್ತು, ಸ್ವಲ್ಪ ನೀರಿನ ಸೆಲೆ ಸಿಕ್ಕರೆ ಸಾಕು ಅಲ್ಲಿ ಇದರ ಬೇರು ಕ್ಷಣಾರ್ಧದಲ್ಲಿ ಹಬ್ಬುವ ತಾಕತ್ತು ಇದಕ್ಕಿದೆ, ಮತ್ತೆ ಈ ತ್ಯಾಜ್ಯದ ಗಿಡ ನೀರಿನಲ್ಲಿನಲ್ಲಿರುವ ಜಲಚರ ಜೀವಿಗಳು(ಮೀನುಗಳು, ಆಮೆ, ಕಪ್ಪೆ), ತಾವರೆ, ವಾಟರ್ ಲಿಲ್ಲಿ ಯಂತಹ ಸೂಕ್ಷ್ಮ ಜೀವಿಗಳಿಗೆ ಆಮ್ಲಜನಕ ತಡೆಯುವ ಸಾಮರ್ಥ್ಯ ಹೊಂದಿದೆ. ಸಹಜವಾಗಿ ಇದರ ಎಲೆಗಳು ಸೂರ್ಯನ ಕಿರಣ ತಡೆಯುವ ಸಾಮರ್ಥ್ಯ ಹೊಂದಿದ್ದು, ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ತಡೆಯುತ್ತದೆ ಎಂದು ದೃಢಪಟ್ಟಿದೆ. ಒಂದು ವೇಳೆ ಇದು ಹಬ್ಬಿದ್ದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ತಾವರೆಕೆರೆ ಒಂದು ರೋಗ ಗುಂಡಿ ಆಗುವುದರಲ್ಲಿ ಸಂಶಯವಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು