ಇತ್ತೀಚಿನ ಸುದ್ದಿ
Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ ಇಲಾಖೆ ಬಲೆಗೆ
17/12/2025, 10:37
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ಪ್ರಾದೇಶಿಕ ವಿಭಾಗದ ಭಾಗಮಂಡಲ ವಲಯ ಪಟ್ಟಿಘಾಟ್ ಮೀಸಲು ಅರಣ್ಯ ದಲ್ಲಿ ಅಕ್ರಮ ಬೇಟೆ ಗೆ ತೆರಳಿದ ಆರೋಪಿಗಳನ್ನು ಬಂದಿಸುವಲ್ಲಿ ಅರಣ್ಯ ಸಿಬ್ಬಂದಿ ಗಳು ಯಶಸ್ವಿ ಯಾಗಿದ್ದಾರೆ. ಕೊಡಗು ಅರಣ್ಯ ವ್ರತ್ತದ ಅರಣ್ಯ ಸಂರಕ್ಷಣಾ ಅಧಿಕಾರಿ ಸೋನಾಲು ವ್ರಶಿನಿ ಯವರಿಗೆ ಬಂದ ಖಚಿತ ಮಾಹಿತಿಯಂತೆ ಅವರ ಸೂಚನೇಯ ಮೇರೆಗೆ
ಮಡಿಕೇರಿ ಉಪ ವಿಭಾಗ ದ ಅರಣ್ಯ ಸಂರಕ್ಷಣಾ ಅಧಿಕಾರಿ ಅಭಿಷೇಕ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಸೆಂಥಿಲ್ ಕುಮಾರ್ ಮಾರ್ಗದ ರ್ಶನ ದಲ್ಲಿ ಭಾಗಮಂಡಲ ವಲಯ ಅರಣ್ಯ ಅಧಿಕಾರಿ ಶಂಕರ್ ಬಿ ಎಂ ರವರ ನಿರ್ದೇಶನದಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಸಿದ್ದಲಿಂಗಪ್ಪ ನೇತೃತ್ವ ದಲ್ಲಿ ಪಟ್ಟಿ ಘಾಟ್ ಮೀಸಲು ಅರಣ್ಯ ದಲ್ಲಿ ಅಳಿವಿನ ಅಂಚಿನಲ್ಲಿರುವ ಅಪರೂಪದ ಪ್ರಾಣಿ ಮೂಷಿಕ ಜಿಂಕೆ (ಬರಿಕ )ಬೇಟೆ ಯಾಡಿದ ಮಣಿವೇಲು ಅಲಿಯಾಸ್ ಜಾನ್ ಬೆಂಗೂರ್ ಗ್ರಾಮ, ಪ್ರಥ್ವಿನ್ ಬಿ ಡಿ ಸಿಂಗತೂರ್ ಗ್ರಾಮ, ಗಣೇಶ್ ಸಿ ಎಂ ಕೋಪಟ್ಟಿ ಗ್ರಾಮ ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕೆ ಒಪ್ಪಿಸಲಾಗಿದ್ದು, ಬಂಧಿತರಿಂದ ಒಂಟಿ ನಳಿಗೆ ಕೋವಿ ಹತ್ತು ತೋಟಗಳು ಗುಂಡೆಟಿ ನಿಂದ ಸತ್ತ ಒಂದು ಮುಷಿಕಾ ಜಿಂಕೆ, ಕತ್ತಿ ,ಮೊಬೈಲ್ ಫೋನ್ ಸೇರಿದಂತೆ ಇತರೆ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಕಾರ್ಯಚರಣೆ ಯಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಮಂಜುನಾಥ್ ವೊಡೆಯರ್ ಸೂರ್ಯ ಎಂ ಕೆ, ಅರಣ್ಯ ರಕ್ಷಕ ರಾದ ಕೆಂಪಣ್ಣ ಮ್ಯಾಳಗೊಳ, ಸಚಿನ್ ತಳವಾರ, ರವಿ ಓಡಿ ಹಾಗು ಸಿಬ್ಬಂದಿಗಳಾದ ದೇವಿ ಪ್ರಸಾದ್ ಹಾಗೂ ಜೀವಿತ್ ಕುಮಾರ್ ಭಾಗಿಯಾಗಿದ್ದರು.














