ಇತ್ತೀಚಿನ ಸುದ್ದಿ
Kodagu | ಸಿದ್ದಾಪುರದಲ್ಲಿ ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ: ಕಾರಿನಲ್ಲಿದ್ದವರು ಪಾರು
05/04/2026, 13:07
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಇಂಜಿಲಗೆರೆ ಬಳಿ ಚಲಿಸುತ್ತಿದ್ದ ಮಾರುತಿ 800 ಕಾರಿನಲ್ಲಿ ತಾಂತ್ರಿಕ ದೋಷ ದಿಂದ ಕಾಣಿಸಿಕೊಂಡ ಬೆಂಕಿ ಪರಿಣಾಮ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕಾರಿನಲ್ಲಿದ್ದಾವ್ರು ಕೂದಲಳೆ ಅಂತರದಲ್ಲಿ ಪಾರದ ಘಟನೆ ನಡೆದಿದೆ.

ಮಲಗೋಡು ನಿವಾಸಿ ಅರುಣ್ ಎಂಬುವರು ತಮ್ಮ ಕುಟುಂಬ ಸದಸ್ಯರ ಜೊತೆ ತೆರಳುತ್ತಿದ್ದ ಸಂದರ್ಭ ವಾಹನದ ಮುoಭಾಗ ಬೆಂಕಿ ಕಾಣಿಸಿಕೊಂಡಿದ್ದು ತಕ್ಷಣ ವಾಹನ ದಿಂದ ಪ್ರಯಾಣಿಕರು ಇಳಿದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದ್ದಂತೆ ಆಗಿದೆ. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಯಿತು.














