12:34 AM Friday9 - January 2026
ಬ್ರೇಕಿಂಗ್ ನ್ಯೂಸ್
ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ… ಬಾಂಗ್ಲಾದವರು ನುಸುಳುವವರೆಗೆ ಕೇಂದ್ರ ಗೃಹ ಇಲಾಖೆ ನಿದ್ದೆಗೆ ಜಾರಿತ್ತಾ?: ಸಚಿವ ಕೃಷ್ಣ ಬೈರೇಗೌಡ… ಇನ್ಫೋಸಿಸ್ ನಿಂದ 53.5 ಎಕರೆ ಭೂಮಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ: ತನಿಖೆಗೆ…

ಇತ್ತೀಚಿನ ಸುದ್ದಿ

ಕಿಮ್ಮನೆ ರತ್ನಾಕರ್ ಅಸ್ತಿತ್ವಕ್ಕಾಗಿ ಹೀಗೆ ಮಾತನಾಡುತ್ತಾರೆ: ತೀರ್ಥಹಳ್ಳಿ ತಾಲೂಕು ಬಿಜೆಪಿ ಅಧ್ಯಕ್ಷ ಹೆದ್ದೂರು

16/11/2024, 18:20

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಅರಗ ಜ್ಞಾನೇಂದ್ರ ಅವರು ಎಣ್ಣೆ ಅಂಗಡಿಗೆ ಶಾಸಕ ಸ್ಥಾನ ಅಡ ಇಡುವುದಾಗಿ ಅಲ್ಲ, ನಮ್ಮ ಕ್ಷೇತ್ರದ ಜನರಿಗೆ ತೊಂದರೆ ಆದಾಗ ಶಾಸಕ ಸ್ಥಾನ ಬೇಡ ಅಂದಿದ್ದರು.
ಕಿಮ್ಮನೆ ರತ್ನಾಕರ್ ಅವರು ಪಕ್ಷದಲ್ಲಿ ಹಾಗೂ ತಮ್ಮ ಅಸ್ತಿತ್ವಕ್ಕಾಗಿ ಹೀಗೆ ಮಾತನಾಡುತ್ತಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು ಹೇಳಿದರು.
ಶನಿವಾರ ಪಟ್ಟಣದ ಮಯೂರ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಿಮ್ಮನೆ ರತ್ನಾಕರ್ ಅವರು ತಾವಿದ್ದ ಪಕ್ಷದಲ್ಲಿ ಎಲ್ಲರನ್ನು ತುಳಿದು ನಂತರ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಬಂದು ಅಲ್ಲಿದ್ದವರನ್ನು ತುಳಿದಿದ್ದೀರಾ, ನಂತರ ಮಂಜುನಾಥ್ ಗೌಡರ ಬಗ್ಗೆ ವಿಧಾನಸೌಧದಲ್ಲೇ ಭ್ರಷ್ಟ ಎಂದು ಮಾತನಾಡಿದವರು ಈಗ ಮೌನವಾಗಿರುವುದು ನೋಡಿದರೆ ಗೊತ್ತಾಗುತ್ತದೆ.
ಆರಗ ಜ್ಞಾನೇಂದ್ರ ಅವರು ಅಧಿಕಾರಕ್ಕಾಗಿ ಯಾವತ್ತೂ ಹೋರಾಟ ಮಾಡಿದವರಲ್ಲ, ಪಕ್ಷ ಅಧಿಕಾರ ಕೊಟ್ಟಿದ್ದು ಪ್ರಬುದ್ಧ ರಾಜಕಾರಣಿ ಎಂದು, ಅವರ ಬಗ್ಗೆ ಮಾತನಾಡುವ ಬದಲು ನೀವೇ ಆತ್ಮ ವಿಮರ್ಶನೆ ಮಾಡಿಕೊಳ್ಳುವುದು ಒಳ್ಳೆಯದು ಎಂದರು.
ಕಿಮ್ಮನೆ ರತ್ನಾಕರ್ ಅವರು ಆರಗ ಜ್ಞಾನೇಂದ್ರ ಅವರ ಬಗ್ಗೆ ಬೇಕಾಬಿಟ್ಟಿಯಾಗಿ ಮಾತನಾಡಿದರು. ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ಯಾಕೆ ಕೊಡಲ್ಲ ಎಂದು ನಮ್ಮ ಕಾರ್ಯಕರ್ತರು ಸೇರಿ ಹಲವರು ಕೇಳಿದ್ದಾರೆ. ಅದಕ್ಕೆ ಆರಗ ಅವರೇ ಒಂದು ಬಾರಿ ಹೇಳಿದ್ದರು. ಅದೇನಂದರೆ ನನಗೆ ರಾಜಕೀಯ ಪ್ರಬುದ್ಧತೆ ಬಂದಿದೆ, ನಾನು ಚಿಲ್ಲರೆ ರಾಜಕಾರಣ ಮಾಡುವುದಿಲ್ಲ, ನನಗೆ 20 ವರ್ಷ ಶಾಸಕ ಸ್ಥಾವನ್ನು ಜನರು ಕೊಟ್ಟಿದ್ದಾರೆ. ನನಗೆ ಮತ ನೀಡಿದ ಜನ ಮುಖ್ಯವೇ ಹೊರತು ಇಂತಹ ರಾಜಕಾರಣ ಅಲ್ಲ ಎಂದು ಹೇಳಿದ್ದರು ಎಂದರು.
ಜ್ಞಾನೇಂದ್ರ ಅವರು ಈ ಬಾರಿಯ ಚುನಾವಣೆಯಲ್ಲಿ ಪ್ರತಿ ಗ್ರಾಮಪಂಚಾಯಿತಿಯ ಅಭಿವೃದ್ಧಿ ಕಾರ್ಡ್ ಜನರಿಗೆ ಕೊಟ್ಟು ಮತ ಕೇಳಿದ್ದರು. ಅದಕ್ಕೆ ಜನರು ಸಹ ಹೌದು ಎಂದು ಗೆಲ್ಲಿಸಿದ್ದಾರೆ. ಕಿಮ್ಮನೆ ರತ್ನಾಕರ್ ಗೆ ಹೇಳುವುದು ಒಂದೇ, ನಿಮ್ಮ ಆತ್ಮ ಶಾಂತಿಗೆ ಹೀಗೆ ಮಾತನಾಡುವುದಾದರೆ ಮಾತನಾಡಿಕೊಳ್ಳಿ, ನೀವು ಹೀಗೆ ಮಾತನಾಡಿದರೆ ನಮಗೆ ರಾಜಕೀಯವಾಗಿ ಒಳ್ಳೆಯದು, ಆದರೆ ನೀವು ಕೂಡ ಮಂತ್ರಿಯದವರು, ನಮ್ಮ ಕ್ಷೇತ್ರಕ್ಕೆ ಇಂತಹ ಮಾತುಗಳು ಒಳ್ಳೆಯದಲ್ಲ ನಿಮ್ಮ ಘನತೆ ಗೌರವವನ್ನು ಹೆಚ್ಚಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕುಕ್ಕೆ ಪ್ರಶಾಂತ್, ಸಂದೇಶ್ ಜವಳಿ ಸೇರಿ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು