9:28 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕರ್ನಾಟಕ- ಕೇರಳ ರಾಜ್ಯ ಹೆದ್ದಾರಿ 36: ಗುಂಡಿಗಳದ್ದೇ ದರ್ಬಾರ್!; ಒಂದು ತಾಸಿನ ಪ್ರಯಾಣಕ್ಕೆ ಬೇಕು 2 ಗಂಟೆ!!

01/07/2025, 11:32

ಗಿರಿಧರ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕರ್ನಾಟಕ ಮತ್ತು ಕೇರಳ ನಡುವೆ ಸಂಪರ್ಕ ಕಲ್ಪಿಸುವ ಮಾಕುಟ್ಟ(ಕರ್ನಾಟಕ )-ಕಣ್ಣೂರು (ಕೇರಳ ) ನಡುವಿನ SH-36 ಸಾಕ್ಷಾತ್ ನರಕದ ದರ್ಶನ ತೋರುತ್ತಿದೆ, ಪೆರಂಬಾಡಿ ಯಿಂದ ಮಾಕುಟ್ಟ ತೆರಳುವ ಕಡಿದಾದ ದಾರಿಯಲ್ಲಿ ರಸ್ತೆಯನ್ನು ಹುಡುಕಿಕೊಂಡು ವಾಹನಗಳು ಸಂಚಾರ ಮಾಡುವ ಅನಿವಾರ್ಯತೆ ಉಂಟಾಗಿದೆ.
ಕೊಡಗು ಜಿಲ್ಲೆಗೆ ಕಣ್ಣೂರು ಎರ್ಪೋರ್ಟ್ ಸಮೀಪದಲ್ಲೇ ಇದ್ದರೂ ಇಲ್ಲಿಗೆ ತೆರಳುವುದಕ್ಕೆ ಒಂದು ಗಂಟೆ ಸಂಚಾರಕ್ಕೆ, ಹೆಚ್ಚುವರಿ1 ಗಂಟೆ ಅಧಿಕ ತಗಲುತ್ತಿದೆ, ಇನ್ನೂ ಅಪಘಾತ, ಜೋರು ಮಳೆ ಇದ್ದಾರಂತೂ ಒಮ್ಮೆ ಗಡಿ ದಾಟಿದರೆ ಸಾಕು ಎನ್ನುವಷ್ಟರ ಮಟ್ಟಿಗೆ ಹರಸಾಹಸ ಪಡಬೇಕಾದ ಅನಿವಾರ್ಯ ಇದೆ. ದಿನನಿತ್ಯ ಕೇರಳ ದಿಂದ ಆಗಮಿಸುವ ಪ್ರವಾಸಿಗರು, ಸರಕು, ಹಣ್ಣು ತರಕಾರಿ ಸಾಗಿಸುವ ವಾಹನಗಳು ಅಂತೂ ಹಿಡಿಶಾಪ ಹಾಕ್ಕೊಂಡೆ ಸಂಚಾರಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು