4:55 AM Tuesday22 - April 2025
ಬ್ರೇಕಿಂಗ್ ನ್ಯೂಸ್
ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ…

ಇತ್ತೀಚಿನ ಸುದ್ದಿ

ಕಾರ್ಕಳ ಉತ್ಸವ: ಕಲ್ಕುಡ -ಕಲ್ಲುರ್ಟಿ, ಗೋಮಟೇಶ್ವರ ಎಲ್ಲಿ?; ಸ್ಟಿಕರ್ ನಿಂದ ಹೋರ್ಡಿಂಗ್ಸ್ ವರೆಗೆ ಸಚಿವರದ್ದೇ ಮುಖ !!

19/03/2022, 20:49

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ಅಲ್ಲಿ ಎತ್ತ ನೋಡಿದರೂ ಗೋಚರಿಸುವುದು ಒಂದೇ ಮುಖ. ಅದು ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಅವರದ್ದು. ಸಣ್ಣ ಸ್ಟಿಕರ್ ನಿಂದ ಆರಂಭಗೊಂಡು ಬ್ಯಾನರ್, ಹೋರ್ಡಿಂಗ್ಸ್, ಕಮಾನ್, ದ್ವಾರ ಎಲ್ಲ ಕಡೆ ಸಚಿವರದ್ದೇ ಫೋಟೋ. ಇದು ಕಾರ್ಕಳ ಉತ್ಸವ ನಡೆಯುತ್ತಿರುವ ಕಾರ್ಲದ ಒಂದು ಸಣ್ಣ ಝಳಕ್. 

ಕಾರ್ಕಳ ಉತ್ಸವ ಎಂದರೆ ಕರಾವಳಿ ಉತ್ಸವದ ತರಹ ಇಡೀ ಕಾರ್ಕಳದ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಅಲ್ಲಿ ಆಗಬೇಕಿತ್ತು. ಬ್ಯಾನರ್, ಕಮಾನ್, ಹೋರ್ಡಿಂಗ್ಸ್ ನಲ್ಲಿ ಅದು ಎದ್ದು ಕಾಣಬೇಕಿತ್ತು. ಅಲ್ಲಿ ಕಲ್ಕುಡ -ಕಲ್ಲುರ್ಟಿ ಬೇಕಿತ್ತು. ವೈರಾಗ್ಯಮೂರ್ತಿ ಗೋಮಟೇಶ್ವರ ಸ್ವಾಮಿ ಕಾಣಬೇಕಿತ್ತು. ಆದರೆ ಬ್ಯಾನರ್, ಕಮಾನ್, ದ್ವಾರಗಳಲ್ಲಿ ಅದ್ಯಾವುದೂ ಇರಲಿಲ್ಲ. ಕೇವಲ ಕನ್ನಡ ಮತ್ತು ಸಂಸ್ಕೃತಿ ಸಚಿವರ ಫೋಟೋ ಮಾತ್ರ.

ವಾಸ್ತವದಲ್ಲಿ ಕಾರ್ಕಳ ಎಂದರೆ ಮೊದಲಿಗೆ ನೆನಪಿಗೆ ಬರುವುದು ತುಳುನಾಡಿನ ಕಾರಣೀಕದ ದೈವಗಳಾದ

ಕಲ್ಕುಡ ಮತ್ತು ಕಲ್ಲುರ್ಟಿ, ಈ ದೈವಗಳನ್ನು ಕಾರ್ಕಳ ಮಾತ್ರವಲ್ಲದೆ ತುಳುನಾಡಿನುದ್ದಕ್ಕೂ ಆರಾಧಿಸಲಾಗುತ್ತಿದೆ. ಚರಿತ್ರೆಯತ್ತ ಮತ್ತೆ ಕಣ್ಣು ಹಾಯಿಸಿದಾಗ ವೈರಾಗ್ಯ ಮೂರ್ತಿ ಗೋಮಟೇಶ್ವರ ಸ್ವಾಮಿ ಕಣ್ಣ ಮುಂದೆ ಬರುತ್ತಾರೆ. ಹಾಗೆ ಮತ್ತೆ ಆಳಕ್ಕೆ ಹೋದಂತೆ ಭೈರವ ಅರಸು, ಚತುರ್ಮುಖ ಬಸದಿ, ಪಡುತಿರುಪತಿ, ಅತ್ತೂರು ಚರ್ಚ್, ರೆಂಜಾಳ ಗೋಪಾಲಕೃಷ್ಣ ಶೆಣೈ, ಭಾರತಕ್ಕೆ ವಿಶ್ವ ಕಪ್ ತಂದು ಕೊಟ್ಟ ನಾಯಕಿ ಮಮತಾ ಪೂಜಾರಿ ಮುಂತಾದವರು ಎದ್ದು ಕಾಣುತ್ತಾರೆ. ಆದರೆ

ಕಮಾನ್, ದ್ವಾರ, ಹೋರ್ಡಿಂಗ್ಸ್ ನಲ್ಲಿ ಇದ್ಯಾವುದೂ ಕಾಣಸಿಗುವುದಿಲ್ಲ. ತುಳು ಸಂಸ್ಕೃತಿ, ತುಳು ಪರಂಪರೆಯನ್ನು ನಂಬಿಕೊಂಡಿರುವ ಮಂದಿಗೆ ಇದೆಲ್ಲ ಆಘಾತ ಉಂಟು ಮಾಡಿದೆ.

ಇಡೀ ಕಾರ್ಕಳ ಉತ್ಸವದಲ್ಲಿ ಕಾರ್ಕಳಕ್ಕೆ ಸಂಬಂಧಪಟ್ಟ ಸಾಧಕರ, ಕಾರಣಿಕರ ಪುರುಷರ ಒಂದು ಚಿತ್ರವೂ ಹುಡುಕಿದರೂ ಎಲ್ಲಿಯೂ ಕಾಣಸಿಗುವುದಿಲ್ಲ (ವೇದಿಕೆಗಿಟ್ಟ ಹೆಸರಿನ ಹೊರತಾಗಿ). ಹಾಗಿರುವಾಗ ಇದು

ನಮ್ಮವರ ಉತ್ಸವ ಹೇಗಾದೀತು? ಇದಕ್ಕೆ ಪಾರಂಪರಿಕ ಸ್ಪರ್ಶ ಹೇಗೆ ಸಿಕ್ಕೀತು ಎಂದು ತುಳುನಾಡು ಜನತೆ ಪ್ರಶ್ನಿಸುತ್ತಿದ್ದಾರೆ.

ಕಾರ್ಕಳ ಉತ್ಸವದ ಅದ್ಭುತ ಪರಿಕಲ್ಪನೆ ನೀಡಿದವರು ಸಚಿವ ಸುನಿಲ್ ಕುಮಾರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಚಿವರ

ಈ ಪರಿಕಲ್ಪನೆ ನಿಜಕ್ಕೂ ಶ್ಲಾಘನೀಯ. ಆದರೆ ಆದರೆ ಇಡೀ ಉತ್ಸವ ನಡೆಯುವುದು ಜನಸಾಮಾನ್ಯರ ತೆರಿಗೆ ದುಡ್ಡಿನಿಂದ ಎನ್ನುವುದನ್ನು ಕೂಡ ಎಲ್ಲರು ಒಪ್ಪಲೇ ಬೇಕು. ವಾಸ್ತವಾಂಶ ಹೀಗಿರುವಾಗ ಯಾವುದೇ ಉತ್ಸವ ಒಬ್ಬ ವ್ಯಕ್ತಿಗೆ ಸೀಮಿತವಾಗಿರಬಾರದು. ಹೊರಗಿನಿಂದ ಬಂದವರಿಗೆ ಇದು ಊರಿನ ಉತ್ಸವ ಅಲ್ಲ… ಯಾರದೋ ವೈಭವೀಕರಣ ಅಂತ ಅನಿಸಬಾರದು ಎನ್ನುವುದೇ ಪ್ರಜ್ಞಾವಂತರ ಅಭಿಲಾಷೆ.

ಇತ್ತೀಚಿನ ಸುದ್ದಿ

ಜಾಹೀರಾತು